ಕಲಬುರಗಿ: ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಉಮೇಶ ಜಾಧವ್ ಅವರ ಪ್ರಕಾರ ಅಭಿವೃದ್ಧಿ ಅಂದರೆ, ಅಣ್ಣ, ಮಗನ, ತಮ್ಮನ, ಮತ್ತು ಅಳಿಯನ ಅಭಿವೃದ್ದಿ ಮಾಡುವುದೇ ಅಭಿವೃದ್ಧಿ ಎಂದು ತಿಳಿದುಕೊಂಡಿದ್ದಾರೆ ಎಂದು ಸಿಪಿಎಂ ಪಕ್ಷದ ಮುಖಂಡ ಮಾರುತಿಮಾನ್ಪಡೆ ಆರೋಪಿಸಿದರು.
ಅವರು ಚಿಂಚೋಳಿಯಲ್ಲಿ ಶ್ರೀ ದಿ. ವಿರೇಂದ್ರ ಪಾಟಿಲ್ ಪಾಟೀಲ್ ಸಮಾದಿಯ ಕಟ್ಟಿ ಮೈದಾನದಲ್ಲಿ ಸಂವಿಧಾನ ಉಳಿಸಿ ದೇಶ ರಕ್ಷಿಸಿ ಹಾಗೂ ಸೌಹಾರದತೆಗಾಗಿ ಬಿಜೆಪಿ ಸೋಲಿಸಿ ರಾಜಕೀಯ ಸಮಾವೇಶದಲ್ಲಿ ಮಾತನಾಡಿ, ಜಾಧವ ಅವರು ಚಿಂಚೋಳಿ ಕ್ಷೇತ್ರ ಅಭಿವೃದ್ಧಿ ಮಾಡಿದೇನೆ ಎಂದು ಸುಳ್ಳು ಹೇಳುತ ಸುತುತ್ತಿದ್ದಾರೆ, ಎನೂ ಅಭಿವೃದ್ಧಿ ಮಾಡಿದ್ದಾರೆ ಎಂದು ಬಂದು ತೋರಿಸಲಿ ಎಂದು ಹರಿಹಾಯಿದ ಅವರು ಮುಲಾಮಾರಿ ನದಿ ಅಭಿವೃದ್ಧಿ ಮಾಡಿದಿರಾ ಅಥವಾ ಸಿಂಮೇಟ್ ಕಾರ್ಖಾನೆ ಪ್ರಾರಂಭ ಮಾಡಿದೀರಾ ಅಥವಾ ಚಿಂಚೋಳಿ ಕ್ಷೇತ್ರದಲ್ಲಿ ಮಕ್ಕಳ ಮಾರಾಟ ಕಳಂಕ ತೊಳೆಯಲು ಶ್ರಮಿಸಿದ್ರಾ ಅಥವಾ ಇಲ್ಲಿನ ತಾಂಡಗಳ ಜನರಿಗೆ ಉದ್ಯೋಗ ಕೂಡುವ ನೀಟ್ಟಿನಲ್ಲಿ ಕೆಲಸ ಮಾಡಿದೀರಾ ಎಂದು ಖಾರವಾಗಿ ಪ್ರಶ್ನಿಸಿದ್ದರು.
ನಂತರ ಸಿಪಿಎಂ ಪಕ್ಷ ಜಿಲ್ಲಾಧ್ಯಕ್ಷ ಶರಣಪ್ಪ ಮಮಶೆಟ್ಟಿ ಅವರು ಮಾತನಾಡಿ, ಪ್ರಧಾನಿ ಮೋದಿ ಅವರು ಮೇಕಿನ್ ಇಂಡಿಯಾ, ಸ್ಕೀಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಬೇಟಿ ಪಡಾವೂ ಬೇಟಿ ಬಚಾವೂ, ಜನಧನ್ ಯೋಜನ, ಸಬಕಾ ಸಾಥ್ ಸಬಕಾ ವಿಕಾಶ ಎಂಬ ಹೇಳಿದ ಮಾತುಗಳು ಈಡೇರಿಸಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.
ರೈತರ ಸಾಲ ಮನ್ನ ಮಾಡದೇ, ರೈತರಿಗೆ ಕಡೆಗಣಿಸುವ ಪಕ್ಷ ಅಂದರೆ ಅದು ಬಿಜೆಪಿ ಪಕ್ಷ ಎಂದು ಆರೋಪಿಸಿ, ಸೈನಿಕರು ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ನೀಡುತ್ತಿದ್ದಾಗ, ದೇಶದೇಡೆಯಲ್ಲಿ ಸಂತಾಪ ಹಾಗೂ ದುಃಖದಲ್ಲಿ ಇದಾಗ ಬಿಜೆಪಿ ಪಕ್ಷದ ರಾಜ್ಯಧ್ಯಕ್ಷ ಯಡಿಯೂರಪ್ಪ ಅವರು ಸೈನಿಕರ ಸಾವಿನ ಮೇಲೆ ರಾಜಕಾರಣ ಮಾಡುವುದರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದ್ದರು. ಡಾ. ಉಮೇಶ್ ಜಾಧವ ಅವರು ತಿಂದ ಮನೆಗೆ ದ್ರೋಹ ಮಾಡಿದಲ್ಲದೇ, ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದರು.
ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಮುಂತಾದವರು ಇದ್ದರು.
ಕಲಬುರಗಿ : ಗುಲಬರ್ಗಾ ವಿಶ್ವವಿದ್ಯಾಲಯದ ನೂತನ ಆಡಳಿತ ವಿಭಾಗದ ಕುಲಸಚಿವರಾಗಿ ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿ ಸೋಮಲಿಂಗಪ್ಪ ಗೋಪಾಲ ಗೆಣ್ಣೂರ…
ಕಲಬುರಗಿ: ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಗುಣಾತ್ಮಕ ಶಿಕ್ಷಣ ನೀಡಲು ಪ್ರಮುಖ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ…
ಕಲಬುರಗಿ: ಬೊಮ್ಮಾಯಿ ಸರಕಾರ ತಂದಿರುವ ಜನವಿರೋಧಿ ಕಾನೂನನ್ನು ಹಿಂಪಡೆಯುವ ಕುರಿತು ರಾಜ್ಯ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕರ್ನಾಟಕ…
ಕಲಬುರಗಿ; ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟವಾಗುತ್ತಿದ್ದು, ಅದನ್ನು ಕೂಡಲೇ ತಡೆಯುವಂತೆ ಹಾಗೂ ಬರದಿಂದ ಬೆಳೆಹಾನಿಗೀಡಾದ ರೈತರಿಗೆ ಸೂಕ್ತ ಪರಿಹಾರ ಕೊಡುವಂತೆ ಕರ್ನಾಟಕ…
ಕಲಬುರಗಿ :ಕಾಂಗ್ರೆಸ್ಸಿಗರೇ, ರಾಜ್ಯದ ಜನತೆ ನಿಮ್ಮ ಬಳಿ ಯಾವ ಭಾಗ್ಯವನ್ನು ಬೇಡಿರಲಿಲ್ಲ ನೀವು ಯಾವ ಭಾಗ್ಯವನ್ನೂ ಕೊಡದಿದ್ದರೂ ಪರವಾಗಿಲ್ಲ, ಬೆಲೆ…
ಕಲಬುರಗಿ: ವಿಧಾನ ಪರಿಷತ್ ನೂತನವಾಗಿ ಸದಸ್ಯರಾಗಿ ಪ್ರಪ್ರಥಮ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿದ ಜಗದೇವ ಗುತ್ತೇದಾರ ಅವರಿಗೆ ಯುವ ಕಾಂಗ್ರೆಸ್…