ಪ್ರಜಾಕೀಯ

ಉಮೇಶ್ ಜಾಧವ, ತನ್ನ ಕುಟುಂಬದ ಅಭಿವೃದ್ಧಿ ಮಾತ್ರ ಮಾಡಿದ್ದಾರೆ ಮಾರುತಿ ಮಾನ್ಪಡೆ ಆರೋಪ

ಕಲಬುರಗಿ: ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಉಮೇಶ ಜಾಧವ್ ಅವರ ಪ್ರಕಾರ ಅಭಿವೃದ್ಧಿ ಅಂದರೆ, ಅಣ್ಣ, ಮಗನ, ತಮ್ಮನ, ಮತ್ತು ಅಳಿಯನ ಅಭಿವೃದ್ದಿ ಮಾಡುವುದೇ ಅಭಿವೃದ್ಧಿ ಎಂದು ತಿಳಿದುಕೊಂಡಿದ್ದಾರೆ ಎಂದು ಸಿಪಿಎಂ ಪಕ್ಷದ ಮುಖಂಡ ಮಾರುತಿಮಾನ್ಪಡೆ ಆರೋಪಿಸಿದರು.

ಅವರು ಚಿಂಚೋಳಿಯಲ್ಲಿ ಶ್ರೀ ದಿ. ವಿರೇಂದ್ರ ಪಾಟಿಲ್ ಪಾಟೀಲ್ ಸಮಾದಿಯ ಕಟ್ಟಿ ಮೈದಾನದಲ್ಲಿ ಸಂವಿಧಾನ ಉಳಿಸಿ ದೇಶ ರಕ್ಷಿಸಿ ಹಾಗೂ ಸೌಹಾರದತೆಗಾಗಿ ಬಿಜೆಪಿ ಸೋಲಿಸಿ ರಾಜಕೀಯ ಸಮಾವೇಶದಲ್ಲಿ ಮಾತನಾಡಿ, ಜಾಧವ ಅವರು ಚಿಂಚೋಳಿ ಕ್ಷೇತ್ರ ಅಭಿವೃದ್ಧಿ ಮಾಡಿದೇನೆ ಎಂದು ಸುಳ್ಳು ಹೇಳುತ ಸುತುತ್ತಿದ್ದಾರೆ, ಎನೂ ಅಭಿವೃದ್ಧಿ ಮಾಡಿದ್ದಾರೆ ಎಂದು ಬಂದು ತೋರಿಸಲಿ ಎಂದು ಹರಿಹಾಯಿದ ಅವರು ಮುಲಾಮಾರಿ ನದಿ ಅಭಿವೃದ್ಧಿ ಮಾಡಿದಿರಾ ಅಥವಾ ಸಿಂಮೇಟ್ ಕಾರ್ಖಾನೆ ಪ್ರಾರಂಭ ಮಾಡಿದೀರಾ ಅಥವಾ ಚಿಂಚೋಳಿ ಕ್ಷೇತ್ರದಲ್ಲಿ ಮಕ್ಕಳ ಮಾರಾಟ ಕಳಂಕ ತೊಳೆಯಲು ಶ್ರಮಿಸಿದ್ರಾ ಅಥವಾ ಇಲ್ಲಿನ ತಾಂಡಗಳ ಜನರಿಗೆ ಉದ್ಯೋಗ ಕೂಡುವ ನೀಟ್ಟಿನಲ್ಲಿ ಕೆಲಸ ಮಾಡಿದೀರಾ ಎಂದು ಖಾರವಾಗಿ ಪ್ರಶ್ನಿಸಿದ್ದರು.

ನಂತರ ಸಿಪಿಎಂ ಪಕ್ಷ ಜಿಲ್ಲಾಧ್ಯಕ್ಷ ಶರಣಪ್ಪ ಮಮಶೆಟ್ಟಿ ಅವರು ಮಾತನಾಡಿ, ಪ್ರಧಾನಿ ಮೋದಿ ಅವರು ಮೇಕಿನ್ ಇಂಡಿಯಾ, ಸ್ಕೀಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಬೇಟಿ ಪಡಾವೂ ಬೇಟಿ ಬಚಾವೂ, ಜನಧನ್ ಯೋಜನ, ಸಬಕಾ ಸಾಥ್ ಸಬಕಾ ವಿಕಾಶ ಎಂಬ ಹೇಳಿದ ಮಾತುಗಳು ಈಡೇರಿಸಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.

ರೈತರ ಸಾಲ ಮನ್ನ ಮಾಡದೇ, ರೈತರಿಗೆ ಕಡೆಗಣಿಸುವ ಪಕ್ಷ ಅಂದರೆ ಅದು ಬಿಜೆಪಿ ಪಕ್ಷ ಎಂದು ಆರೋಪಿಸಿ, ಸೈನಿಕರು ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ನೀಡುತ್ತಿದ್ದಾಗ, ದೇಶದೇಡೆಯಲ್ಲಿ ಸಂತಾಪ ಹಾಗೂ ದುಃಖದಲ್ಲಿ ಇದಾಗ ಬಿಜೆಪಿ ಪಕ್ಷದ ರಾಜ್ಯಧ್ಯಕ್ಷ ಯಡಿಯೂರಪ್ಪ ಅವರು ಸೈನಿಕರ ಸಾವಿನ ಮೇಲೆ ರಾಜಕಾರಣ ಮಾಡುವುದರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದ್ದರು. ಡಾ. ಉಮೇಶ್ ಜಾಧವ ಅವರು ತಿಂದ ಮನೆಗೆ ದ್ರೋಹ ಮಾಡಿದಲ್ಲದೇ, ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದರು.

ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಮುಂತಾದವರು ಇದ್ದರು.

emedialine

Recent Posts

ಸ್ವಾಸ್ಥ್ಯ ಜಿಲ್ಲೆಗೆ ಯೋಗ ಜೀವನಶೈಲಿಯಾಗಲಿ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಕಲಬುರಗಿಯನ್ನು ಸ್ವಾಸ್ಥ್ಯ ಮತ್ತು ಆರೋಗ್ಯವಂತ ಜಿಲ್ಲೆ‌ ಮಾಡುವ ನಿಟ್ಟಿನಲ್ಲಿ ಯೋಗಾಭ್ಯಾಸ ನಮ್ಮೆಲ್ಲರ ದೈನಂದಿನ ಜೀವನಶೈಲಿಯಾಗಬೇಕೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್…

50 mins ago

ವಿದ್ಯಾರ್ಥಿಗಳ ಯಶಸ್ಸಿಗೆ ಸಮಯದ ಪರಿಪಾಲನೆ ಮುಖ್ಯ: ಡಾ. ಪ್ರದೀಪ್ ಬಿ.ಎಸ್.

ಕಲಬುರಗಿ : ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕಗಳು ಹಾಗು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಯುವ…

12 hours ago

ಹಾಸ್ಟೆಲ್‌ಗ‌ಳಿಗೆ ಜಿಲ್ಲಾಧಿಕಾರಿ, ಸಿಇಓ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ವಾರಕ್ಕೆ ಒಂದು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿನ…

12 hours ago

ಮಳೆಗಾಲದಲ್ಲಿ ಸೊಳ್ಳೆಗಳಿಂದ ರಕ್ಷಣೆ ಪಡೆಯಿರಿ: ಡಾ.ಅಬ್ದುಲ್ ರಹೀಮ್

ಶಹಾಬಾದ: ಮಳೆಗಾಲ ಪ್ರಾರಂಭವಾಗಿದ್ದು, ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲಿದೆ. ಸೊಳ್ಳೆಗಳಿಂದಾಗುವ ಮಾರಕ ರೋಗಗಳಿಂದ ರಕ್ಷಣೆ ಪಡೆಯಲು ಸೂಕ್ತ ಸಾರ್ವಜನಿಕರು ಸೂಕ್ತ ಕ್ರಮಕೈಗೊಳ್ಳಬೇಕೆಂದು…

12 hours ago

ಶಿವಾನಂದ ಪಾಟೀಲರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಬೀರಾಳ ಆಗ್ರಹ

ಶಹಾಬಾದ :ಜಿಲ್ಲೆಯಲ್ಲಿಯೇ ಎಲ್ಲರ ಜತೆಗೆ ಒಡನಾಟವನ್ನು ಹೊಂದಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸದಾಕಾಲ ಶ್ರಮಿಸುತ್ತಿರುವ ಕಾಂಗ್ರೆಸ್ ಮುಖಂಡ ಶಿವಾನಂದ ಪಾಟೀಲ…

12 hours ago

ರಸ್ತೆಯಲ್ಲಿ ಮಳೆ ನೀರು ಸಂಗ್ರಹ ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ

ಶಹಾಬಾದ: ನಗರದ ವಾರ್ಡ ನಂ.17 ಹಾಗೂ ನಗರದ ಮಧ್ಯಭಾಗದಲ್ಲಿರುವ ಸೇಂಟ್ ಥಾಮಸ್ ಶಾಲೆಯ ಮುಂಭಾಗದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಅಗೆದು ಹೋದ…

12 hours ago