ಪ್ರಜಾಕೀಯ

95600 ವಿಕಲಚೇತನ ಮತದಾರರಿಗೆ ಮತದಾನ ಮಾಡಲು ಸೂಕ್ತ ವ್ಯವಸ್ಥೆ: ಸುಬೋಧ ಯಾದವ

ಕಲಬುರಗಿ: ಕಲಚೇತನ ಮತದಾರರು ಮತದಾನದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಲಬುರಗಿ ವಿಭಾಗದ ಒಟ್ಟು 95600 ವಿಕಲಚೇತನ ಮತದಾರರನ್ನು ಮತಗಟ್ಟೆಗಳಿಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ.  ವಿಕಲಚೇತನ ಮತದಾರರು ಈ ವ್ಯವಸ್ಥೆಯ ಸದುಪಯೋಗ ಪಡೆದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಅಕ್ಸೆಸಿಬಿಲಿಟಿ ಅಬ್ಸರ್ವರ್ ಸುಬೋದ ಯಾಧವ ಮನವಿ ಮಾಡಿದ್ದಾರೆ.

ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳ ವಿಕಲಚೇತನ ಮತದಾರರನ್ನು ಏಪ್ರಿಲ್ 23 ಮತದಾನದಂದು ಮತಗಟ್ಟೆಗಳಿಗೆ ಸರ್ಕಾರ ವ್ಯವಸ್ಥೆ ಮಾಡಿರುವ ವಾಹನಗಳ ಮೂಲಕ ಕರೆತರುವ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ವಿಭಾಗದಲ್ಲಿ ಒಟ್ಟು 3807 ವಾಹನಗಳ ವ್ಯವಸ್ಥೆ ಮಾಡಿದೆ. ವಿಕಲಚೇತನರಿಗೆ ಸಹಾಯ ಮಾಡಲು ಒಟ್ಟು 9152 ಸ್ವಯಂ ಸೇವಕರನ್ನು ಗುರುತಿಸಲಾಗಿದ್ದು, ಈಗಾಗಲೇ ಆಯಾ ಪ್ರದೇಶದ ಸ್ವಯಂ ಸೇವಕರ ದೂರವಾಣಿ ಸಂಖ್ಯೆಗಳ ಮಾಹಿತಿಯನ್ನು ಆಯಾ ಪ್ರದೇಶದಲ್ಲಿರುವ ವಿಕಲಚೇತನರಿಗೆ ನೀಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ವಿಕಲಚೇತನ ಮತದಾರರನ್ನು ಮತಗಟ್ಟೆಗೆ ಕರೆತರುವ ಸಮರ್ಪಕ ವ್ಯವಸ್ಥೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ವಿಭಾಗದಲ್ಲಿ ಒಟ್ಟು 10555 ಮತಗಟ್ಟೆಗಳಿದ್ದು, ಈ ಪೈಕಿ 10013 ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿಕಲಚೇತನ ಮತದಾರರು ನೋಂದಾಯಿಸಿಕೊಂಡಿದ್ದು, ಈ ಮತಗಟ್ಟೆಗಳಲ್ಲಿ ಗಾಲಿಕುರ್ಚಿ ವ್ಯವಸ್ಥೆ ಸಹಿತ ಮಾಡಲಾಗಿದೆ. ವಿಭಾಗದಲ್ಲಿರುವ ಒಟ್ಟು ೯೫೬೦೦ ವಿಕಲಚೇತನ ಮತದಾರರ ಪೈಕಿ 57401 ಪುರುಷ, 37804 ಮಹಿಳಾ ಹಾಗೂ 395 ಇತರೆ ವಿಕಲಚೇತನ ಮತದಾರರು ಇದ್ದಾರೆ. ಕಲಬುರಗಿ ವಿಭಾಗದಲ್ಲಿ 16 ಮತಗಟ್ಟೆಗಳಲ್ಲಿ ವಿಕಲಚೇತನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದೆ. ಈ ಪೈಕಿ 9 ಮತಗಟ್ಟೆಗಳು ಕಲಬುರಗಿ ಜಿಲ್ಲೆಯಲ್ಲಿವೆ.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ೧೪೫೮೪ ವಿಕಲಚೇತನ ಮತದಾರರಿದ್ದು, ಈ ಪೈಕಿ ೯೪೩೯ ಪುರುಷ, ೪೯೧೮ ಮಹಿಳೆ ಹಾಗೂ 227 ಇತರೆ ವಿಕಚೇತನ ಮತದಾರರಿದ್ದಾರೆ. ಇವರನ್ನು ಮತಗಟ್ಟೆಗೆ ಕರೆತರಲು 1216 ವಾಹನದ ವ್ಯವಸ್ಥೆ ಮಾಡಲಾಗಿದ್ದು, 1750 ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಮತಗಟ್ಟೆಗೆ ಆಗಮಿಸುವ ವಿಕಲಚೇತನರು ಮತದಾನ ಮಾಡಲು ಅನುಕೂಲ ಮಾಡಿಕೊಡಲು 2368 ಮತಗಟ್ಟೆಗಳಲ್ಲಿ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಾದ ರ‍್ಯಾಂಪ್, ಕುಡಿಯುವ ನೀರು, ನೆರಳು, ಶೌಚಾಲಯ, ವಿಕಲಚೇತನರಿಗಾಗಿ ಗಾಲಿ ಕುರ್ಚಿ, ಭೂತಗನ್ನಡಿ, ಬ್ರೈಲ್ ಮತಪತ್ರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿಕಲಚೇತನರಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬ್ರೈಲ್ ಲಿಪಿ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿತ್ತು. ವಿಕಲಚೇತನರಿಗೆ ವಿದ್ಯುನ್ಮಾನ್ ಮತಯಂತ್ರ ಹಾಗೂ ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರ ಕಲ್ಪಿಸಿರುವ   ಈ ಎಲ್ಲ ಸವಲತ್ತುಗಳನ್ನು ಸದುಪಯೋಗಿಸಿಕೊಂಡು ವಿಕಲಚೇತನ ಮತದಾರರು ನೂರಕ್ಕೆ ನೂರು ಪ್ರತಿಶತ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಿಳಿಸಿದ್ದಾರೆ.

emedialine

Recent Posts

ರಾಜ್ಯ ಕರಾಟೇ ಸ್ಪೋರ್ಟ್ಸ್ ಕಮಿಷನ್ ಚೇರ್ಮನ್ ರಾಗಿ ಮನೋಹರ್ ಕುಮಾರ ಬೀರನೂರು ಆಯ್ಕೆ

ಕಲಬುರಗಿ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ರಾಜ್ಯ ಕರಾಟೇ ಸ್ಪೋರ್ಟ್ಸ್ ಕಮಿಷನ್ ಚೇರ್ಮನ್ ರಾಗಿ ಹೆವೆನ್ ಫೈಟರ್ ಸಂಸ್ಥೆಯ…

1 hour ago

ಗ್ಯಾಸೆ್ ಸಿಲೆಂಡರ್ ಸ್ಫೋಟ: ಮೃತರ ಮನೆಗೆ ಸಚಿವರ ಭೇಟಿ ನೀಡಿ ಸಾಂತ್ವನ

ಕಲಬುರಗಿ: ನಿನ್ನೆ ನಗರದ‌ ಸಪ್ತಗಿರಿ ಹೊಟೇಲ್ ನಲ್ಲಿ ನಡೆದ ಸಿಲೆಂಡರ್ ಸ್ಪೋಟದಲ್ಲಿ ಸಾವನ್ನಪ್ಪಿದ ಮಲ್ಲಿಕಾರ್ಜುನ ಅವರ ಮನೆಗೆ ಜಿಲ್ಲಾ ಉಸ್ತುವಾರಿ…

3 hours ago

ಸೋಮವಾರದೊಳಗೆ ಅಮಾನತು ಆಗಿಲ್ಲ ಶಾಲೆಗೆ ಬೀಗ ಹಾಕಿ ಧರಣಿ: ಎಸ್ಎಫ್ಐ

ಹಟ್ಟಿ: ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಾಲೆಗೆ ನಿರಂತರ ಗೈರಾಗುತ್ತಿರುವ ಮುಖ್ಯಗುರು ನಾಗನಗೌಡ ರನ್ನು ಸೇವೆಯಿಂದ ಅಮಾಮಾತಿಗೆ ಆಗ್ರಹಿಸಿ ಭಾರತ…

3 hours ago

L& T ಕಂಪನಿ ವಿರುದ್ದ ಕ್ರಮಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಕಲಬುರಗಿ: ಎಲ್ ಅಂಡ್ ಟಿ ಸಂಸ್ಥೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆ‌ ನಿನ್ನೆ ಬೆಂಗಳೂರಿನಲ್ಲಿ ಸಿಎಸ್…

4 hours ago

ಜುಲೈ ನಿಂದ ಅಬಕಾರಿ ವ್ಯಾಪಾರಿ ಸ್ನೇಹಿ ಕ್ರಮ ಜಾರಿ: ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿಕೆ

ಕಲಬುರಗಿ : ರಾಜ್ಯದಲ್ಲಿ ಅಬಕಾರಿ ವಲಯದಲ್ಲಿರುವ ಕುಂದು ಕೊರತೆಗಳಿಗೆ ಜುಲೈ ತಿಂಗಳಿನಿಂದ ವ್ಯಾಪಕ ತಿದ್ದುಪಡಿ ಮಾಡಿ ಅಬಕಾರಿ ವ್ಯಾಪಾರಿ ಸ್ನೇಹಿ…

4 hours ago

ಉತ್ತಮ ಕೆಲಸಕ್ಕೆ ಸಹಕರಿಸಲು ಮನವಿ: ಸಾಬೇರಾಬೇಗಂ

ಶಹಾಬಾದ: ನಗರಸಭೆಯ ವಾರ್ಡ ನಂ.17ರಲ್ಲಿ ಸೇಂಟ್ ಥಾಮಸ್ ಶಾಲೆಯ ಮುಂಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಅಗೆಯಲಾಗಿದ್ದು, ಇನ್ನೂ ಹದಿನೈದು…

17 hours ago