ಗುಲಾಮಗಿರಿ ಮತ್ತು ಸಮಕಾಲೀನ ಸಾಂಸ್ಕøತಿಕ ರಾಜಕಾರಣ ಕುರಿತು ಸಂವಾದ ಅ.15ಕ್ಕೆ

ಕಲಬುರಗಿ: ಜ್ಯೋತಿಭಾ ಪುಲೆಯವರ ‘ಗುಲಾಮಗಿರಿ’ ಪುಸ್ತಕದ 150ನೇ ವರ್ಷದ ಭಾಗವಾಗಿ ಗುಲಾಮಗಿರಿ ಮತ್ತು ಸಮಕಾಲೀನ ಸಾಂಸ್ಕೃತಿಕ ರಾಜಕಾರಣ ಕುರಿತು ಅ.15ರಂದು ಸಂಜೆ 5.30ಕ್ಕೆ ಇಲ್ಲಿನ ಡಾ.ಎಸ್.ಎಂ.ಪoಡಿತ ರಂಗಮoದಿರದಲ್ಲಿ ರಂಗ ನಿರ್ದೇಶಕರಾದ ಕೆ.ಪಿ.ಲಕ್ಷ್ಮಣ್ ಮತ್ತು ಮಹಾದೇವ ಹಡಪದ ಅವರೊಂದಿಗೆ ಸಂವಾದ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಲ್ಲಿ ಒಬ್ಬರಾದ ಸಂಸ್ಕಾರ ಪ್ರತಿμÁ್ಠನದ ಅಧ್ಯಕ್ಷ ವಿಠ್ಠಲ್ ಚಿಕಣಿ ಹಾಗೂ ಕಲಬುರಗಿ ಆರ್ಟ್ ಥೇಟರ್ ಅಧ್ಯಕ್ಷ ಸುನಿಲ್ ಮಾನ್ಪಡೆ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ಆರ್ಟ ಥೀಯೇಟರ್, ಸಂಸ್ಕಾರ ಪ್ರತಿμÁ್ಠನ, ದಲಿತ ಸಾಹಿತ್ಯ ಪರಿಷತ್ತು, ಕಕ ರಸ್ತೆ ಸಾರಿಗೆ ನಿಗಮದ ಪ.ಪಂ.ನೌಕರರ ಅಧಿಕಾರಿಗಳ ಕ್ಷೇಮಾಧಿಭಿವೃದ್ಧಿ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಮಹತ್ವಪೂರ್ಣ ಕಾರ್ಯಕ್ರಮವನ್ನು ಮಹಾಪೌರರಾದ ವಿಶಾಲ ದರ್ಗಿ ಉದ್ಘಾಟಿಸಲಿದ್ದಾರೆ.

ಹಿರಿಯ ಸಾಹಿತಿ,ಉಪನ್ಯಾಸಕ ಡಾ.ಸೂರ್ಯಕಾಂತ ಸುಜ್ಯಾತ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಂವಾದದಲ್ಲಿ ಆರ್.ಜಿ.ಶೆಟಗಾರ, ಲಕ್ಷ್ಮಣ್ ಸೋನಕಾಂಬಳೆ, ಗುಪ್ತಲಿಂಗ ಬಿರಾದಾರ, ಡಾ.ಮಲ್ಲಿಕಾರ್ಜುನ ಸಾವರಕರ್, ದತ್ತಪ್ಪ ಸಾಗನೂರ, ವಿಜಯಕುಮಾರ ಸೋನಾರೆ, ಡಾ.ಶರಣಪ್ಪ ಸೈದಾಪುರ, ಗವಿಸಿದ್ದಪ್ಪ ಪಾಟೀಲ್, ಮಸ್ತಾನ ದಂಡೆ, ಸಿದ್ರಾಮ ದಂಡಗುಲಕರ್, ಸಂತೋಷ ಸಿಂಧೆ, ಶಿವಕಾಂತ ಮುನ್ನೋಳಿ, ಡಾ.ಅನೀಲ ಮಂಡೋಲಕರ್, ಲಕ್ಷ್ಮಣ್ ಕೋರೆ, ಬಿ.ಎಚ್.ನಿರಗುಡಿ, ಡಾ.ಸುನೀಲ ಜಾಬಾದಿ, ಅಶೋಕ ತೊಟ್ನಳ್ಳಿ, ಡಾ.ಅರವಿಂದ ಕಟ್ಟಿ, ಡಾ.ರಾಜಶೇಖರ ಮಾಂಗ್ ಮತ್ತು ನಾಗೇಶ ಹರಳಯ್ಯ ಅವರು ಭಾಗವಹಿಸಲಿದ್ದಾರೆಂದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುನೀಲ ಮಾನಪಡೆ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಕಪೀಲ ಚಕ್ರವರ್ತಿ ನಿರೂಪಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆಯೋಜಕರಾದ ಡಾ.ರಾಜಕುಮಾರ ಮಾಳಗೆ, ಅಲ್ಲಮಪ್ರಭು ನಿಂಬರ್ಗಾ, ಭೀಮಶಾ ದಂಡಗುoಡಕರ್ ಮತ್ತು ಸುರೇಶ ಖೂನಿ ಉಪಸ್ಥಿತರಿರುವರು. ಸಂವಾದ ನಂತರ ಕೆ.ಬಿ.ಸಿದ್ದಯ್ಯ ರಚಿಸಿದ ಮತ್ತು ಲಕ್ಷ್ಮಣ್ ಕೆ.ಪಿ ಅವರು ನಿರ್ದೇಶಿಸಿದ ನಾಟಕ ‘ದಕ್ಲ ಕಥಾದೇವಿ ಕಾವ್ಯ’ ಪ್ರರ್ದಶನಗೊಳ್ಳಲಿದೆ ಎಂದು ಹೇಳಿದರು. ಸಂಘಟಕ ಸಂಗಮೇಶ ಕಲಬುರಗಿ ಇದ್ದರು.

emedialine

Recent Posts

ಕೋಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿ ಪೂರ್ಣಗೊಂಡಿದ್ದರಿಂದ ನೂತನ ಪದಾಧಿಕಾರಿಗಳ ಆಯ್ಕೆಗೆ…

45 mins ago

ನೂತನ ಪದಾಧಿಕಾರಿಗಳ ಪದಗೃಹಣ, ಅಭಿನಂದನಾ ಸಮಾರಂಭ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಚಿತ್ತಾಪುರ ತಾಲೂಕಿನ…

2 hours ago

ಕೆಬಿಎನ ಆಸ್ಪತ್ರೆಯಲ್ಲಿ ಉಚಿತ ಇಸಿಜಿ ತಪಾಸಣೆ

ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…

3 hours ago

ವಿದ್ಯಾರ್ಥಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್‌ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…

4 hours ago

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

17 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

17 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420