ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡವರ ಮೇಲೆ ಒಂದಾನೊಂದು ದೌರ್ಜನ್ಯ ಮಾಡುತ್ತಾ ಬರುತ್ತಿದೆ. ವಾರ್ಡ್ ಸಂಖ್ಯೆ 23ರಲ್ಲಿ ಬಂಜಾರ, ದಲಿತ ಹಾಗೂ ಇನ್ನಿತರ ಸಮಾಜದ ಜನರು ಸುಮಾರು 25ವರ್ಷಗಳಿಂದ ವಾಸ ಮಾಡುತ್ತಿರುವ 40 ಮನೆಗಳನ್ನು ಏಕಾಏಕಿ ಇಂದು ಕೆಡವಿದ್ದು (Demolish) ನಾನು ತೀವ್ರವಾಗಿ ಖಂಡನೀಯವಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಪಾಲಿಕೆಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನೆಯೆ ಇದೆ ಅತಿಕ್ರಮಣವಾಗಿ ನೆಲೆಸಿದವರನ್ನು ಮೊದಲು ಪರ್ಯಾಯವಾಗಿ ಜಾಗದಲ್ಲಿ ಸ್ಥಳಾಂತರಿಸಿ ಆಮೇಲೆ ಅತಿಕ್ರಮಣ ತೆರವುಗೊಳಿಸಬೇಕು. ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಇಡೀ ದೇಶದಲ್ಲಿ ಸೂರು ಇಲ್ಲದವರನ್ನು ಸೂರು ಕಲ್ಪಿಸಿ ಕೊಡುವ ಕನಸನ್ನು ಕಂಡಿದ್ದಾರೆ ಅದರ ಪ್ರಕಾರ ದೇಶದಲ್ಲಿ ಬಡವರಿಗೆ ದೀನದಲಿತರಿಗೆ ಸೂರು ಕಲ್ಪಿಸುವ ಕೆಲಸವು ನಡೆಯುತ್ತಿದೆ. ಆದರೆ ಇಂದಿನ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮಹಾನಗರ ಪಾಲಿಕೆಯು ಈ ರೀತಿ ಕ್ರಮ ಕೈಗೊಂಡಿದ್ದು ನಿಜಕ್ಕೂ ಇದು ಖೇದಕರ ಸಂಗತಿ. ನಾನು ರಾಜ್ಯಸರ್ಕಾರಕ್ಕೆ ಕೇಳಲು ಬಯಸುತ್ತೇನೆ ಈ ರೀತಿ ಏಕಾಏಕಿ ಈ ಬಡವರ ಬದುಕನ್ನು ಬೀದಿಪಾಲು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಇದೆ? ರಾಜ್ಯದ ಪ್ರತಿಯೊಂದು ಬಡವರ ಕುಟುಂಬಕ್ಕೆ ಸೂರು ಕಲ್ಪಿಸುವ ಆಶಯ ನಿಮಗೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ಆಶ್ರಯ ಕಾಲೋನಿ ದಂತಹ ಕಲಬುರ್ಗಿಯಲ್ಲಿ ನೂರಾರು ಕಡೆ ಜನರು ಅತಿಕ್ರಮಣವಾಗಿ ನೆಲೆಸಿದ್ದಾರೆ, ನಾನು ಅವರೆಲ್ಲರ ಪರವಾಗಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಕೇಳಿಕೊಳ್ಳುತ್ತೇನೆ, ಅವರನ್ನು ಇದೇ ರೀತಿ ಅತಿಕ್ರಮಣ ತೆರವು ಗೊಳಿಸುವ ನಿಟ್ಟಿನಲ್ಲಿ ನಿರಾಶ್ರಿತ ಮಾಡಬೇಡಿ, ಅವರೆಲ್ಲರೂ ವಾಸುಸುತ್ತಿರುವ ಜಾಗವನ್ನು ಅವರ ಹೆಸರ ಮೇಲೆ ಖಾಯಂಗೊಳಿಸಿ, ಅವರೆಲ್ಲರಿಗೂ ಕೂಡ ಈ ತೆರವಿನ ಆತಂಕದಿಂದ ಮುಕ್ತಗೊಳಿಸಬೇಕೆಂದು ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಇಂತಹ ಯಾವುದೇ ಘಟನೆಗಳು ನಡೆದಿಲ್ಲಾ, ಕೂಡಲೇ ಆ ಸಂತ್ರಸ್ತ ಕುಟುಂಬಗಳಿಗೆ ಸೂಕ್ತವಾದ ಸ್ಥಳವನ್ನು ನೀಡಿ ಅವರ ಬದುಕನ್ನು ಹಸನು ಮಾಡುವ ಕೆಲಸ ಸರ್ಕಾರ ಕೂಡಲೇ ಮಾಡಬೇಕೆಂದು ಅಗ್ರಹಿಸಿದ್ದಾರೆ.
ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲಂ 371ಜೆ ಯಂತೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲು ಸರಕಾರದ…
ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ…
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…