ಬಿಸಿ ಬಿಸಿ ಸುದ್ದಿ

ಧಮ್ಮ ಭೂಮಿಯಿಂದ ದಿಕ್ಷಾ ಭೂಮಿವರೆಗೆ ಧಮ್ಮ ರ್ಯಾಲಿ; ಶಾಂತಿ-ಭ್ರಾತೃತ್ವಕ್ಕಾಗಿ ಧಮ್ಮ ಯಾತ್ರೆ

ವಾಡಿ: ಸನ್ನತಿ ಗ್ರಾಮವು ವಿಶ್ವ ಪಾರಂಪರಿಕ ಸ್ಥಳಗಳಲ್ಲಿ ಒಂದಾಗಿದ್ದು ಬೌದ್ಧರ ಪವಿತ್ರ ಸ್ಥಳ ವಾಗಿದೆ ಸಾಮ್ರಾಟ್ ಅಶೋಕ ಇರುವ ಉಬ್ಬು ಶಿಲ್ಪ, ಹಾಗೂ ಅಶೋಕ ಶಾಸನ ದೊರೆತ ಏಕೈಕ ಸ್ಥಳ ಸನ್ನತಿ ಯಾಗಿದೆ. ಸನ್ನತಿ ಎಂದರೆ ಸದ್ಗತಿ ಯಾಗಿದೆ ಎಂದು ಭಂತೆ ವರಜ್ಯೋತಿ ಹೇಳಿದರು.

ಬುಧವಾರ ಬುದ್ಧಿಸ್ಟ್ ಫ್ಯಾಟ್ರನಿಟಿ ಕೌನ್ಸಿಲ್ ಮತ್ತು ನ್ಯಾಷನಲ್ ಧಮ್ಮ ಯಾತ್ರ ಕಮಿಟಿ ಅವರು ಜಂಟಿಯಾಗಿ ಹಮ್ಮಿಕೊಂಡಿದ್ದ ಶಾಂತಿ ಮತ್ತು ಭ್ರಾತೃತ್ವಕ್ಕಾಗಿ ಧಮ್ಮ ಭೂಮಿಯಿಂದ ದಿಕ್ಷಾ ಭೂಮಿವರೆಗೆ ಧಮ್ಮ ರ್ಯಾಲಿ ಸನ್ನತಿ ಬುದ್ಧ ಧಮ್ಮ ವಿಹಾರ ತಲುಪಿದಾಗ ರ್ಯಾಲಿ ಕುರಿತು ಮಾತನಾಡುತ್ತಾ ಸಾಮ್ರಾಟ್ ಅಶೋಕ ಉತ್ತರ ಭಾರತದ ಬೌದ್ಧ ಧರ್ಮ ಧಕ್ಷಿಣ ಭಾರತದ ವರೆಗೂ ಪ್ರಚಾರಗೊಳಿಸಿ ಬೌದ್ಧ ಧರ್ಮ ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದರು.

ಇಂಥ ಭವ್ಯ ಪರಂಪರೆ ಇತಿಹಾಸ ಇರುವ ದಕ್ಷಿಣ ಭಾರತ ಬೌದ್ಧರ ಸ್ಥಳಗಳ ದರ್ಶನ ಮಾಡುವ ನಿಟ್ಟಿನಲ್ಲಿ ಕೆರಳಾ,ಚೆನೈ, ತೆಲಂಗಾಣ, ಕರ್ನಾಟಕ, ಹಾಗೂ ಮಾಹಾರಾಷ್ಟ್ರ ಸೇರಿದಂತೆ ಪಂಚರಾಜ್ಯಗಳ ಬೌದ್ಧರ ಐತಿಹಾಸಿಕ ಸ್ಥಳಗಳ ದರ್ಶನ ಮಾಡುತ್ತಾ ಧಮ್ಮ ಉಪದೇಶ ನೀಡುವ ಉದ್ದೇಶದಿಂದ ಈ ಧಮ್ಮ ಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಾಡಿ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಮಾತನಾಡಿ ಸನ್ನತಿ,ಕನಗನಳ್ಳಿ, ಹಾಗೂ ರಣ ಮಂಡಲದ ಇತಿಹಾಸ ತಿಳಿಸಿದರು, ವಿಶ್ವ ಬೌದ್ಧರ ಐತಿಹಾಸಿಕ ಪಾರಂಪರಿಕ ಸ್ಥಳಗಳ ಪರಿಚಯ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ,ಸಂಶೋಧನೆ ನಡೆಯಬೇಕು, ಸನ್ನತಿ ಹಾಗೂ ಕನಗನಳ್ಳಿ ಪರಿಸರದಲ್ಲಿ ಇನ್ನೂ ಹೆಚ್ಚಿನ ಉತ್ಖನ, ಹಾಗೂ ಸಂಶೋಧನೆ ಮಾಡಿದಲ್ಲಿ ಬೌದ್ಧರ ಇತಿಹಾಸದ ಗತ ವೈಭವ ಅನಾವರಣ ಗೊಳ್ಳಲಿದೆ, ಕೇಂದ್ರ ಸರ್ಕಾರ ಈ ಕುರಿತು ನಿμÁ್ಕಳಜಿ ತೋರುತ್ತಿದೆ ಎಂದು ದೂರಿದರು.

ಮಧುರೈನ ಭಂತೆ ಮೌರ್ಯ, ಭಂತೆ ಗುಣಶೀಲ, ನಾಗಣ್ಣ ಬಂದಳ್ಳಿ,ದೇವಿಂದ್ರಪ್ಪ ಕನಗನಳ್ಳಿ, ರಣಧೀರ, ಅಮೃತ ಕೋಮಟೆ, ಮೈಯೂರ ಶಿವನಕರ, ಹಾಗೂ ಬೌದ್ಧ ಉಪಾಸಕರು, ಸೇರಿದಂತೆ ಹಲವರು ಉಪಸ್ಥಿತರಿದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

4 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

4 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

4 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

5 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

5 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

6 hours ago