ಬೀದಿವ್ಯಾಪಾರಿಗಳ ಸಂಘದಿಂದ ಅದ್ಧೂರಿ ದಸರಾ ಉತ್ಸವ: ಪ್ರಶಸ್ತಿ ಪ್ರದಾನ

ಕಲಬುರಗಿ: ದ್ವೇಷ ಅಸುಹೆ ವೈಮನಸ್ಸುಗಳನ್ನು ದೂರ ಮಾಡಿ ಎಲ್ಲರೂ ಒಂದಾಗಿ ಬಾಳಲು ದಸರಾ ಹಬ್ಬ ಪ್ರೇರಣೆ ನೀಡುತ್ತದೆ ಕೆಲಕಾರಣದಿಂದ ನಮ್ಮಿಂದ ದೂರವಾದವರನ್ನು ಹತ್ತಿರಕ್ಕೆ ತರಲು ಈ ಹಬ್ಬ ವೇದಿಕೆಯಾಗಿದೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ ಅವರು ಹೇಳಿಕರು.

ನಗರದ ಅತ್ತರ ಕಂಪೌಂಡ ಗಾಜಿಪುರದಲ್ಲಿ ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ಅಯೋಜಿಸಿದ್ದ ನಾಡಹಬ್ಬ ದಸರಾ ನವರಾತ್ರಿ ಉತ್ಸವ, ಮಹಾಪ್ರಸಾದ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲೆಮರೆಯ ಕಾಯಿ ಎಂತೆ ಸದ್ದಿಲ್ಲದೇ ಸಮಾಜದ ಸೇವೆಯಲ್ಲಿ ತೊಡಗಿರುವ ಸಾದಕÀರನ್ನು ಗುರುತಿಸಿ ಅವರಿಗೆ ಸಂಘದ ವತಿಯಿಂದ ಪ್ರತಿವರ್ಷ ನೀಡುವ ಪ್ರಶಸ್ತಿ ಅವರ ಸೇವಾಕಾರ್ಯಕ್ಕೆ ಪೆÇ್ರೀತ್ಸಹ ಬೆಂಬಲ ನೀಡುತ್ತಿರುವುದು ತುಂಬ ಸಂತಸದ ವಿಷಯ ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಮಾತನಾಡಿ, ದೇವಿಯ ಆರ್ಶಿವಾದ ಮತ್ತು ತಮ್ಮೆಲ್ಲರ ಪ್ರೀತಿ ವಿಶ್ವಾಸ ಹಾಗೂ ಸಹಕಾರದೊಂದಿಗೆ ಪ್ರತಿವರ್ಷ ದಸರಾ ಉತ್ಸವ ಆಚರಿಸಲಾಗುತ್ತಿದೆ, ಇಲ್ಲಿನ ಸಾದಕರಿಗೆ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿರುವ ತಮ್ಮೆಲ್ಲರಿಗೆ ಆ ದೇವಿ ಕೃಪೆ ಆರ್ಶಿವಾದ ಮತ್ತು ಸಿರಿ ಸಂಪತ್ತು ಮತ್ತು ಆಯುಶ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮಹಾಪೌರರಾದ ವಿಶಾಲ ಆರ್.ಧರ್ಗಿ ಮಾತನಾಡಿ, ನಮ್ಮೆಲ್ಲರನ್ನು ಒಂದುಗೂಡಿಸುವ ಈ ಉತ್ಸವ ನಮ್ಮಲ್ಲಿ ಐಕ್ಯತೆಯನ್ನು ಮೂಡಿಸುತ್ತದೆ ನಮ್ಮ ಪೂರ್ವಿಕರ ಪರಂಪತೆಯನ್ನು ನಾವೆಲ್ಲರು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಹಿತಿಯ ಪತ್ರಕರ್ತ ಭವಾನಿ ಸಿಂಗ್ ಠಾಕೂರ, ಮುಖಂಡರಾದ ನೀಲಕಂಠರಾವ ಮೂಲಗೆ, ಪಾಲಿಕೆ ವಿರೋಧ ಪಕ್ಷದ ನಾಯಕ ಅಜಂ ಗೋಲಾ, ಅಣ್ಣಾರಾವ ಧುತ್ತರಗಾಂವ, ಸೋಮಶೇಖರ ಗೋನಾಯಕ, ಪಾಲಿಕೆ 3ನೇ ವಲಯದ ಆಯುಕ್ತರಾದ ಮುಜಾಮಿಲ್ ಆಲಂ, ಕೆನರಾ ಬ್ಯಾಂಕ ಅಧಿಕಾರಿ ಸತೀಷ ಚವ್ಹಾಣ, ಶಾಮ ನಾಟಿಕರ್, ನ್ಯಾಯವಾದಿ ಗುರುರಾಜ ತಿಳಗುಳ್, ಸಿಐಡಿ ವಿಭಾಗದ ಡಿಎ???ಪಿ ಶಂಕರಗೌಡ ಪಾಟೀಲ, ನ್ಯಾಯವಾದಿ ಚಂದ್ರಶೇಖರ ಪಾಟೀಲ ಸೇರಿದಂತೆ ಹಲವುಜನ ಗಣ್ಯಮಾನ್ಯರು ಭಾಗವಹಿಸಿದ್ದರು.

ಸೇವಾ ರತ್ನ ಪ್ರಶಸ್ತಿ ಪುರಸ್ಕøತರಾದ ರೈತ ಮುಖಂಡ ದಯಾನಂದ ಪಾಟೀಲ, ಅಣ್ಣಪ್ಪ ಕಂದೇನವರ, ರೇವಣಸಿದ್ದಪ್ಪ ಮಟ್ಟಿ, ಭಾರತಿಬಾಯಿ ಜಿವಣಗಿ, ಶ್ರೀನಿವಾಸ ಕಾಡಾದಿ, ಕರಣಕುಮಾರ ಅಷ್ಟಗಿ, ಪ್ರಭು ಮಡಿವಾಳ ಅವರಿನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡಪರ ಸಂಘಟನೆಗಳ ಮುಖಂಡರಾದ ದತ್ತು ಎಸ್ ಭಾಸಗಿ, ಮಂಜುನಾಥ ನಾಲವಾರಕರ್, ಮನೊಹರ ಬಿರಾದಾರ, ಗೊಪಾಲ ನಾಟಿಕರ್, ಪದ್ಮರಾಜ ಸೂಯ9ವಂಶಿ, ಮಹೇಶ್ ಸೂಯ9ವಂಶಿ, ರೋಹಿತ ಮಂಗನ್ನುರು, ಶಂಭುಲಿಂಗ, ಅಮರೇಶ, ಬಾಬು ಪರಿಟ, ರಾಘವೇಂದ್ರ ಕುಲಕರ್ಣಿ, ಅಂಬಿಕಾ ನಂದೂರ, ಸವಿತಾ ಜಿಂಗಾಡೆ, ಮಲ್ಲಿಕಾರ್ಜುನ ಸಾರವಾಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

3 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

3 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

3 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

3 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

3 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420