ಸುರಪುರ: ಕರ್ನಾಟಕ ರಾಜ್ಯ ಗೃಹರಕ್ಷಕದಳ ಜಿಲ್ಲಾ ಗೃಹರಕ್ಷಕದಳ, ಯಾದಗಿರಿ ಜಿಲ್ಲಾ ಮಟ್ಟದ ಗೃಹರಕ್ಷಕರ ವಾರ್ಷಿಕ ವೃತ್ತಿಪರ ಕ್ರೀಡಾಕೂಟ ಯಾದಗಿರಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಸುರಪೂರದ ಶ್ರೀ ಪ್ರಭು ಕಾಲೇಜು ಕ್ರೀಡಾಂಗಣದಲ್ಲಿ ಜರುಗಿತು ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಕೆ. ವಿಜಯಕುಮಾರ ಹಾಗೂ ಆನಂದ್ ವಾಘಮೋಡೆ ಸಿ.ಪಿ.ಐ ಸುರಪೂರ ರವರು ಹಾಗೂ ಕಾರ್ಯಕ್ರಮದ ಚಾಲನೆಗಾಗಿ ಜಿಲ್ಲಾ ಸಮಾದೇಷ್ಟರು ಹಾಗೂ ಉಪ-ಅಧೀಕ್ಷಕರು ಯಾದಗಿರಿ ಬಸವೇಶ್ವರ ರವರು ಹಾಗೂ ಜಿಲ್ಲಾ ಭೋಧಕರು ವಿಧ್ಯಾವತಿ ಹಾಗೂ ಕಂಪನಿ ಕಮಾಂಡರ್ ಯಲ್ಲಪ್ಪ ಸಿ ಹುಲಿಕಲ್ ಹಾಗೂ ಸಿನಿಯರ್ ಪ್ಲಾಟೂನ ಕಮಾಂಡರ್ ವೆಂಕಟೇಶ್ವರ ಡಿ ಸುರಪೂರ ಹಾಗೂ ಪ್ಲಾಟೂನ ಕಮಾಂಡರ್ ರಮೇಶ ಅಂಬೂರೆ ರವರು ಟಭಾಗವಹಿಸಿದ್ದರು.ತಹಸೀಲ್ದಾರ್ ಕೆ.ವಿಜಯಕುಮಾರ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ನಂತರ ವಾಲಿಬಾಲ್,ಕಬಡ್ಡಿ, ಎತ್ತರ ಜಿಗಿತ,ಉದ್ದ ಜಿಗಿತ,100 ಮೀ ರನ್ನಿಂಗ್, ರಿಲೇ,800 ಮೀ ರನ್ನಿಂಗ್, ವೃತ್ತಿಪರ ಕ್ರೀಡಾಕೂಟಗಳಾದ ಅಗ್ನಿ ಶಮನ,ಸ್ಕ್ವಾಡ್ ಡ್ರಿಲ್,ಹಗ್ಗ ಜಗ್ಗಾಟ,ಗುಂಡು ಎಸೆತ,ಪ್ರಥಮ ಚಿಕಿತ್ಸೆ ಕ್ರೀಡೆಗಳು ಜರುಗಿದವು.ಯಾದಗಿರಿ ಜಿಲ್ಲೆಯ ಯಾದಗಿರಿ, ಗುರುಮಠಕಲ್, ಸೈದಾಪೂರ ಶಹಾಪೂರ, ಸುರಪೂರ, ಕೆಂಭಾವಿ ಹಾಗೂ ಹುಣಸಗಿ ಘಟಕಗಳ ಘಟಕಾಧಿಕಾರಿಗಳು ಎಲ್ಲಾ ಸಿನಿಯರ್ ಪ್ಲಾಟೂನ ಕಮಾಂಡರ್, ಪ್ಲಾಟೂನ ಕಮಾಂಡರ್ ಮತ್ತು ಎಲ್ಲ ಎನ್.ಸಿ.ಓ. ಆಫಿಸರ್ ಒಟ್ಟು 55 ಜನ ಗೃಹರಕ್ಷಕ ಕ್ರೀಡಾಪಟುಗಳಿದ್ದರು.ನಿರೂಪಣೆಯನ್ನು ರಾಜುಪಾಟೀಲ ನೆರವೇರಿಸಿದರು,ಯಲ್ಲಪ್ಪ ಸಿ ಹುಲಿಕಲ್ ಕಂಪನಿ ಕಮಾಂಡರ್ ರವರು ಸ್ವಾಗತಿಸಿದರು
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…