ಕಲಬುರಗಿ: ಗುಲ್ಬರ್ಗಾ ವಕೀಲರ ಸಂಘದ ನೈತೃತ್ವ ದಲ್ಲಿ ಹಮ್ಮಿಕೊಂಡ ಅನಿರ್ದಿಸ್ಟ್ ಸತ್ಯಾಗ್ರಹ ದ ಎರಡನೆಯ ದಿನದ ಧರಣಿಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಮತಿ ಜಯಶ್ರೀ ಬೋಡೋಲೆ ಅವರ ಉಪಸ್ಥಿತಿಯಲ್ಲಿ ಹಿರಿಯ ವಕೀಲರಾದ ಹಾಗೂ ಹೋರಾಟಗಾರ್ತಿ ಚುಡಾಮಣಿ, ಚನ್ನಮ್ಮ, ನಿರ್ಮಲಾ ಬಿರಾದಾರ, ಆಶಾಮಂಗೇಶ, ಸಿದ್ಧಮ್ಮ ಪಾಟೀಲ, ಅರುಂಧತಿ ಹಾಗೂ ಅಶ್ವವಿನಿ ಮದನಕರ ಇತರರು ಬೆಳ್ಳಗ್ಗೆ 11 ರಿಂದ ಸಂಜೆ. 5 ರವರೆಗೆ ಕುಳಿತು ವಕೀಲರ ಮೇಲೆ ಆಗುತ್ತಿರುವ ಅನ್ಯಾಯ ಗಳ ಬಗ್ಗೆ ಮಾತನಾಡಿದರು.
ಸತ್ಯಾಗ್ರಹದ ಮಂಟಪಕ್ಕೆ ಭಾರತೀಯ ವೈದ್ಯರ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಕಿರಣ ಪಾಟೀಲ್ ಇಂದಿನ ಧರಣಿಗೆ ಬೆಂಬಲ ಸೂಚಿಸಿ, ಮಾತಾಡುತ್ತಾ ಕಾರ್ಯನಿರತ, ವೃತ್ತಿಪರ ರನ್ನು ಬೆದರಿಸುವ, ಹೆದರಿಸುವ ಕೆಲಸ ದಿನನಿತ್ಯದ ಕೆಲಸ ಮಾಡಿಕೊಂಡಿದ್ದಾರೆ, ಅದನ್ನು ತಡೆಗಟ್ಟಲು ಸೂಕ್ತ ಕಾನೂನು, ಕಾಯ್ದೆ ಜಾರಿಗೆ ತರಲು ನಮ್ಮ ಸಂಘವು ಸದಾ ಬೆಂಬಲಿಸುತ್ತದೆ ಎಂದು ತಿಳಿಸಿದರು.
ಅದೇ ರೀತಿ ರಾಷ್ಟ್ರೀಯ ಬಸವ ದಳದ ಆರ್.ಜಿ.ಶೇಟಗಾರ ಕೂಡಾ ಆಗಮಿಸಿ, ಬೆಂಬಲ ಸೂಚಿಸಿದರು ಮಧ್ಯಾಹ್ನ ಬಿಜೆಪಿಯ ಮುಖಂಡರು ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್ ಆಗಮಿಸಿ ವಕೀಲರ ಸಂರಕ್ಷಣಾ ಕಾಯ್ದೆ ಇನ್ನಷ್ಟು ಕನಿಷ್ಠ ನಿಯಮಗಳನ್ನು ಮಾಡಿ ರಾಜ್ಯಪಾಲರ ಒಪ್ಪಿಗೆ ಪಡೆದು ಜಾರಿ ಗೊಳಿಸಬೇಕು ಎಂದು ಆಗ್ರಹಿಸಿ, ಉದಯೋನ್ಮುಖ ಯುವ ನ್ಯಾಯವಾದಿಯ ಹತ್ಯೆ ಈ ರೀತಿ ಯಾದರೆ ಸಾಮಾನ್ಯ ಜನರ ಗತಿ ಏನು ಎಂದು ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ವಕೀಲ ಹಾಗೂ ಹೋರಾಟಗಾರ ಅಟ್ಟುರ ಹಣಮಂತರಾಯ ಧರಣಿ ಉದ್ದೇಶಿಸಿ ಮಾತನಾಡಿದರು, ಯುವ ನ್ಯಾಯವಾದಿ ಕೌಲಗಿ ಮಹಂತೇಶ್ ಮಾತನಾಡುತ್ತಾಮೈಸೂರಿನಲ್ಲಿ ವಕೀಲರ ಸಮ್ಮೇಳನದಲ್ಲಿ 6 ನೆ ಗ್ಯಾರಂಟಿ ವಕೀಲರ ಕಾಯ್ದೆ ಎಂದು ಹೇಳಿದಂತೆಯೇ ನಿನ್ನೆ ಸದನದಲ್ಲಿ ಕಾನೂನು ಸಚಿವರ ಮೂಲಕ ವಿದೇಯಕ ಮಂಡಿಸಲಾಗಿದೆ ಎಂದು ತಿಳಿಸಿದರು ಮತ್ತು ಸಹಕಾರ ನೀಡಿದ ಸಚಿವರು ಹಾಗೂ ಈ ಭಾಗದ ಎಲ್ಲಾ ಶಾಸಕರಿಗೆ ಅಭಿನಂದನೆಗಳು ಹೇಳಬೇಕಾಗುತದೆ ಎಂದರು.
ಸತ್ಯಾಗ್ರಹದ ಪೂರ್ಣಾವಧಿ ಯಲ್ಲಿ ಖಜಾಂಚಿ ಶಿವರಾಜ್ ಪಾಟೀಲ್, ಜಂಟಿ ಕಾರ್ಯದರ್ಶಿ ಶಾಂತಪ್ಪಾ ಚಿಕ್ಕಳ್ಳಿ, ಕಾರ್ಯಕಾರಿಣಿ ಸದಸ್ಯ ಸಂಜೀವಕುಮಾರ ಡೊಂಗರಗೌವ, ಸಂತೋಷ್ ಕುಮಾರ ಹುಗ್ಗಿ, ವಿನೋದ ಕುಮಾರ ಜೇನವೆರಿ ಬಸವರಾಜ ಅಗ್ಗಿ ಲಷ್ಮಿಕಾಂತ ಕುಲಕರ್ಣಿ, ಕಲ್ಯಾಣಿ ವಾಘದರಗಿ, ಸಂತೋಷ ಪಾಟೀಲ ಕಲ್ಲೂರ್, ಇತರರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…