ಕಲಬುರಗಿ: ರವಿವಾರ ಕರ್ನಾಟಕ ರಾಜ್ಯ ಹಟಗಾರ ಸಮಾಜದ ರಾಜ್ಯ ಘಟಕದ ಸಭೆ ರದ್ದುಗೊಂಡ ಪ್ರಯುಕ್ತ ಜಿಲ್ಲಾ ಮಟ್ಟದ ಸಭೆಯಾಗಿ ಪರಿವರ್ತಿಸಿ, ಪರಮೇಶ್ವರ ಮುನ್ನೋಳ್ಳಿ ಯವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
ಕರ್ನಾಟಕ ರಾಜ್ಯ ಹಟಗಾರ ಸಮಾಜದ ರಾಜ್ಯ ಘಟಕದ ಸಾಮಾನ್ಯ ವಾರ್ಷಿಕ ಸಭೆಯನ್ನು ತುರಾತುರಿಯಲ್ಲಿ ರದ್ದು ಗೊಳಿಸಿದಕ್ಕೆ, ಕನ್ನಡ ಭವನದ ಮನದಾಳದ ಮಾತು ಕೋಣೆಯಲ್ಲಿ ಜಿಲ್ಲಾ ಮಟ್ಟದ ಹಟಗಾರ ಸಮಾಜ ಸಭೆಯಲ್ಲಿ ಖಂಡಿಸಲಾಯಿತು. ಸ್ವಾರ್ಥ ರಹಿತ ಹಾಗೂ ರಾಜಕೀಯ ರಹಿತ ಸಮಾಜ ಸೇವಕರನ್ನು ಜವಾಬ್ದಾರಿ ಸ್ಥಾನಗಳನ್ನು ನೀಡಿ ಸಂಘಟನೆ ಮಾಡಲು ಒತ್ತಾಯಿಸಿದರು.
ಬನಹಟ್ಟಿಯ ನಿವಾಸಿಗಳು ಹಾಗೂ ಪ್ರಸ್ತುತ ಭೂಸನೂರ ಶುಗರ ಕಾರ್ಖಾನೆ ಯಲ್ಲಿ ಲೆಕ್ಕ ಪತ್ರ ವಿಭಾಗದಲ್ಲಿ ಉಪ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ಮಠದ ರವನ್ನು ಮುಖ್ಯ ಅತಿಥಿ ಸ್ಥಾನದಲ್ಲಿ ಭಾಗವಹಿಸಲು ಕೊರಲಾಯಿತು. ಜಿಲ್ಲಾ ಘಟಕದ ಸಭೆಯ ಸಂಚಾಲಕರಾದ ಹಾಗೂ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ರವರು ಆಗಮಿಸಿದ ಎಲ್ಲರಿಗೂ ಸ್ವಾಗತ ಕೋರಿದರು ಮತ್ತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಮಾಜ ಸಂಘಟನೆ ಮಾಡುವ ಎಲ್ಲಾ ಮನಸ್ಸುಗಳಿಗೆ ಮತ್ತು ಅಸಕ್ತಿ ಉಳ್ಳ ವ್ಯಕ್ತಿಗಳಿಗೆ ಮೊದಲ ಆದ್ಯತೆ ನೀಡಲು ಸಮಾಜ ಭಾಂಧವರಲ್ಲಿ ವಿನಂತಿಸಿದರು. ಸಭೆಯ ನಿರ್ಣಯ ಮಂಡನೆಗೆ ಅವಕಾಶ ನೀಡಲಾಗಿತ್ತು, ಜಿಲ್ಲಾ ಹಟಗಾರ ಸಮಾಜದ (ಯುವ ಘಟಕದ) ಜಿಲ್ಲಾ ಅಧ್ಯಕ್ಷರನ್ನಾಗಿ ರವಿ ಯಳಸಂಗಿ ಯವರನ್ನು ಆಯ್ಕೆ ಮಾಡಲಾಯಿತು.
ಅದೇ ರೀತಿ ವಿವಿಧ ತಾಲೂಕಾ ಘಟಕಗಳಿಗೆ ಕ್ರಿಯಾಶೀಲ ಯುವಕರನ್ನು ನೇಮಿಸುವ ನಿಟ್ಟಿನಲ್ಲಿ ಕಾರ್ಯ ವಾಗಲಿ ಎಂದು ನಿರ್ಣಯ ಸಲಾಯಿತು, ನಂತರ ಸೇಡಂ ತಾಲ್ಲೂಕಿನಲ್ಲಿ ಹಟಗಾರ ಸಮಾಜ ಸಂಘಟನೆ ಮಾಡಲು ಡಾ. ಬಸವರಾಜ ಚನ್ನಾ ರವರಿಗೆ ಸೇಡಂ ತಾಲೂಕಾ ಘಟಕಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಲಾಯಿತು.
ಆಳಂದ ತಾಲೂಕಿನ ಘಟಕಕ್ಕೆ ಅಧ್ಯಕ್ಷರನ್ನಾಗಿ ಶಾಂತಕುಮಾರ ಯಳಸಂಗಿ ಯವರನ್ನು ಒಕ್ಕೂರಿಲಿಂದ ಆಯ್ಕೆ ಗೊಳಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಿರೀಶ್ ಮಠದ ಮಾತನಾಡಿ, ಸಮಾಜದ ಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಭಾಗವಹಿಸಲು ಆಗಮಿಸಿದ ನನಗೆ ಮುಖ್ಯ ಅತಿಥಿ ಸ್ಥಾನದಲ್ಲಿ ಕೂಡಿಸಿ ನನ್ನನ್ನು ಸಮಾಜದ ಕಾರ್ಯಕ್ರಮದಲ್ಲಿ ಇನ್ನೂ ಸಕ್ರಿಯವಾಗಿ ಪಾಲಗೊಳ್ಳಲ್ಲೂ ಪೆರೇಪಿಸಿದ್ದಕ್ಕೆ ಕೃತಜ್ಞೆತೆ ತಿಳಿಸಿ ಮುಂದೆಯೂ ತೆಗೆದುಕೊಂಡ ಎಲ್ಲಾ ನಿರ್ಣಯ ಗಳ್ಳನ್ನು ತಪ್ಪದೆ ಪಾಲಿಸಲು ಸಹಕರ ಬಯಸುತೇನೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಪ್ಪಾ ಅಷ್ಟಗಿ ಯವರ ಅನಿಸಿಕೆ ಮತ್ತು ಸಲಹೆಯಂತೆ ಸ್ವಚ್ಛ ಮನಸ್ಸಿನಿಂದ ಸೇವೆ ಗೈದ ಒಬ್ಬ ವ್ಯಕ್ತಿ ಯನ್ನು ಪ್ರತಿ ವರ್ಷ ಹಟಗಾರ ಪ್ರಶಸ್ತಿ ಪ್ರದಾನ ಮಾಡಲು ಸೂಚಿಸಿದರು. ಜಿಲ್ಲಾ ಘಟಕದ ಅಧ್ಯಕ್ಷರ, ಅನುಉಪಸ್ಥಿತಿಯಲ್ಲಿ ನನಗೆ ಒದಗಿ ಬಂದ ಸ್ಥಾನದಲ್ಲಿ, ಅಧ್ಯಕ್ಷತೆ ವಹಿಸಿದ್ದ ಸಮಾಜದ ಹಿರಿಯರಾದ ಪರಮೇಶ್ವರ್ ಮುನ್ನೋಳ್ಳಿ ಸಭೆಯನ್ನುದ್ದೇಶಿಸಿ ಮಾತನಾಡಿ, ಯುವಕರ ಕೈಯಲ್ಲಿ ಸಮಾಜದ ಚುಕ್ಕಾಣಿ ನೀಡಿ ಹಿರಿಯರು ಆಶೀರ್ವಾದ ಮಾಡಬೇಕು ಮತ್ತು ತಪ್ಪು ದಾರಿಯಲ್ಲಿ ಸಾಗುತ್ತಿದ್ದರೆ ತಿದ್ದಿ ಸರಿಪಡಿಸಿ, ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಘಟಕದ ಸಭೆಯಲ್ಲಿ ಹಟಗಾರ ಸಮಾಜದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ನಾಗನಾಥ ಯಳಸಂಗಿ, ಸಾಮಾನ್ಯ ಸದಸ್ಯರಾದ ವೀರೇಶ ಅಕ್ಕಾ, ಮಹಾದೇವಪ್ಪ ಜೇವೂರ್, ಅನಿಲ ಕುಮಾರ ಅಷ್ಟಗಿ ಇತರರು ಉಪಸ್ಥಿತರಿದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…