ಸರಕಾರಿ ಮಹಿಳಾ ಪ್ರಥಮ ದರ್ಜೆಕಾಲೇಜಿನ ಸ್ನಾತಕೋತ್ತರ ಇತಿಹಾಸ ವಿಭಾಗದಲ್ಲಿ ವಿಶೇಷ ಉಪನ್ಯಾಸಕಾರ್ಯಕ್ರಮ

ಕಲಬುರಗಿ: ನಗರದ ಹಳೇ ಜೇವರ್ಗಿರಸ್ತೆಯಲ್ಲಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಇತಿಹಾಸ ವಿಭಾಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ವಿಶ್ವವಿದ್ಯಾಲಯದಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ವಾಯ್. ಎಚ್. ನಾಯಕವಾಡಿಯವರು ಹೈದ್ರಾಬಾದ್‌ ಕರ್ನಾಟಕದ ಇತಿಹಾಸ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಹೈದ್ರಾಬಾದ್‌ ಕರ್ನಾಟಕ ಎಂಬ ಹೆಸರಿನ ಬಳಕೆಯು ಡಾ.ಎನ್.ರಮೇಶ ಅವರ ಹೈದ್ರಾಬಾದರಾಜ್ಯದ ಇತಿಹಾಸ ಎಂಬ ಕೃತಿಯೊಂದಿಗೆ ಪ್ರಾರಂಭವಾಗಿ ಹೈದ್ರಾಬಾದ್‌ ರಾಜ್ಯದ ನಿಜಾಮನ ಆಳ್ವಿಕೆ ಕೊನೆಗಾಣಿಸಿ ಭಾರತ ಒಕ್ಕೂಟದಲ್ಲಿ ಸೇರಿಸಬೇಕೆಂಬ ವಿಮೋಚನಾ ಚಳುವಳಿಕಾರರ ಒತ್ತಾಸೆಯಿಂದ ಈ ಭಾಗವನ್ನು ಹೈದ್ರಾಬಾದ್‌ಕರ್ನಾಟಕ ಎಂದು ಕರೆಯಲಾರಂಭಿಸಿದರು.

ಬೀದರ, ಗುಲಬರ್ಗಾ ಮತ್ತುರಾಯಚೂರು ಜಿಲ್ಲೆಗಳು ನಿಜಾಂನ ಆಳ್ವಿಕೆಗೆ ಒಳಪಟ್ಟಿದ್ದವು ಬಳ್ಳಾರಿ ಮದ್ರಾಸ್ ಪ್ರೆಸಿಡೆನ್ಸಿಯ ಒಂದು ಭಾಗವಾಗಿತ್ತು. ಏಕೀಕರಣದ ನಂತರ ಕಂದಾಯ ವಿಭಾಗದಲ್ಲಿ ಬಳ್ಳಾರಿ ಒಳಗೊಂಡಿದ್ದರಿಂದ ಅದು ಈಗ ಹೈದ್ರಾಬಾದ್‌ಕರ್ನಾಟಕದ  ಭಾಗವಾಗಿದೆ. ಈ ಭಾಗವನ್ನು ಬ್ರಿಟಿಷ್ ದಾಖಲೆಗಳಲ್ಲಿ ಕೆನರಿಸ್ ಡಿಸ್ಟ್ರಿಕ್ಸ್ (ಕನ್ನಡದ ಜಿಲ್ಲೆಗಳು) ಎಂದು ಕರೆಯಲಾಗುತ್ತಿತ್ತು. ಈ ಭಾಗದ ಹಿಂದುಳಿಯುವಿಕೆಗೆ ಕೇವಲ ನಿಜಾಮರು ಮಾತ್ರ ಕಾರಣರಲ್ಲ ಅಂದಿನ ಬಹುಪಾಲು ಪಾಳೇಯಗಾರರು, ಸಾಮಂತರು, ಜಮೀನುದಾರರು, ಭೂ ಹಿಡುವಳಿದಾರರು ಮತ್ತು ಊಳಿಗಮಾನ್ಯ ವವ್ಯಸ್ಥೆಯೇ ಕಾರಣ ನಿಜಾಂ ದೊರೆಗಳ ಹೆಸರಿನಲ್ಲಿ ಬಹುಪಾಲು ಸಾಮಾನ್ಯ ಜನರ ಶೋಷಣೆ ಮಾಡಿದರು ಮತ್ತು ಹಿಂದುಳಿಯುವಿಕೆಗೆ ಕಾರಣರಾದರು. ಒಂದು ವೇಳೆ ನಿಜಾಮರೇ ಹಿಂದುಳಿಯುವಿಕೆ ಕಾರಣವೆಂದಾದರೆ ೧೯೪೮ ರಲ್ಲೇ ನಿಜಾಮರ ಆಳ್ವಿಕೆ ಕೊನೆಯಾಯಿತು  ಏಕೆ ಪ್ರಗತಿಯಾಗಲಿಲ್ಲ ಅದಕ್ಕೆರಾಜಕೀಯ ಇಚ್ಚಾಶಕ್ತಿ, ರಾಜಧಾನಿಯಿಂದಇರುವದೂರ ಇವೇ ಮುಂತಾದ ಕಾರಣಗಳನ್ನು ಪಟ್ಟಿ ಮಾಡಬಹುದು.

ಹೈದ್ರಾಬಾದ್‌ಕರ್ನಾಟಕ ಕಲ್ಯಾಣಕರ್ನಾಟಕ ವಾದರೂ ಮನಸ್ಥಿತಿ ಬದಲಾಗದಿದ್ದರೆ ಪ್ರಗತಿಯಾಗುವುದಿಲ್ಲ ಪ್ರಗತಿಯೆಂದರೆರಸ್ತೆ, ಕಟ್ಟಡಗಳ ನಿರ್ಮಾಣವೊಂದೆಅಲ್ಲ ಶೈಕ್ಷಣಿಕ, ಆರ್ಥಿಕ, ಸಾಮಾಜಿಕಎಲ್ಲಾ ರಂಗಗಳಲ್ಲಿ ಪ್ರಗತಿಯಾಗಬೇಕು ಮಾನವ ಸಂಪನ್ಮೂಲದ ಪ್ರಗತಿಯೇ ನಿಜವಾದ ಪ್ರಗತಿದೇಶವೆಂದರೆಕಲ್ಲು ಮಣ್ಣು ಅಷ್ಟೇ ಅಲ್ಲದೇಶವೆಂದರೆ ಮನುಷ್ಯರು (ದೇಶಮಂಟೆ ಮಟ್ಟಿಕಾದೋಯ್‌ದೇಶಮಂಟೆ ಮನುಷುಲೊಯ್) ಎಂಬ ಕವಿವಾಣಿಯಂತೆ ಸಮಗ್ರ ಪ್ರಗತಿಯೇ ನಿಜವಾದ ಪ್ರಗತಿಯ ಮಾನದಂಡ. ಹೈದ್ರಾಬಾದ್ ಪ್ರಾದೇಶಿಕ ಅಭಿವೃದ್ಧಿ ಮಂಡಳಿ, ೩೭೧ಜೆ ಮುಂತಾದ ಮೂತಿಗೆ ಬೆಣ್ಣೆಒರೆಸುವ ತಂತ್ರಗಳಿಂದ ರಾಜಕಾರಣಿಗಳು, ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಕಳ್ಳ ದಂಧೆಕೋರರುಉದ್ಧಾರವಾಗಿದ್ದಾರೆಯೇ ಹೊರತು ಈ ಭಾಗವಲ್ಲಎಂದು ಮಾರ್ಮಿಕವಾಗಿ ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿಎಲ್ಲರನ್ನೂ ಸ್ವಾಗತಿಸಿದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಶಶಿಶೇಖರ ರೆಡ್ಡಿಯವರುಕಪೋಲಕಲ್ಪಿತಇತಿಹಾಸಓದದೆ ನೈಜ ಸಂಗತಿಯನ್ನುಅರಿಯಬೇಕುಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚು ಆಧ್ಯಯನಶೀಲರಾಗಬೇಕೆಂದು ಹೇಳಿದರು. ಆಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಖಂಡೇರಾವ್ ವಿಶೇಷ ಉಪನ್ಯಾಸಗಳ ಉಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದುಕರೆ ನೀಡಿದರು. ಸ್ನಾತಕೋತ್ತರ ವಿಭಾಗದ ಸಂಯೋಜಕರಾದಡಾ.ಭೀಮಣ್ಣಾಘನಾತೆಯವರು ವಂದಿಸಿದರು. ಪ್ರಾಧ್ಯಾಪಕರಾದ ಪ್ರೊ.ಪ್ರಕಾಶ ಪಾಟೀಲ್, ಡಾ.ಗಾಂಧೀಜಿ ಮೊಳೆಕೆರೆ, ಡಾ.ಸಂತೋಷದೊಡ್ಮನಿ, ಡಾ.ಶಶಿಧರ್ ಮೇಳಕುಂದಿ ಉಪಸ್ಥಿತರಿದ್ದರು.

 

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

4 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

6 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

6 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

6 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

6 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420