ಬಿಸಿ ಬಿಸಿ ಸುದ್ದಿ

ಹೆಣ್ಣು ಮಕ್ಕಳ ಬಂಧನದ ಬಿಡುಗಡೆದಾತ ಅಂಬೇಡ್ಕರ್: ಮಹಿಳಾ ದಿನಾಚರಣೆ ನಿಮಿತ್ತ ವಿಶೇಷ ಲೇಖನ

ಹೊರ ದೇಶದವರು ನಿನ್ನ ಹಾಡಿ ಹೊಗಳಿ ಬೃಹತ್ ಸಂವಿಧಾನದ ಶಿಲ್ಪಿ ಎಂದು ಒಪ್ಪಿಕೊಂಡರೂ ನಿನ್ನ ದೇಶದ ನಿನ್ನದೇ ಜನರು ನಿನ್ನನ್ನು ಒಪ್ಪಿಕೊಳ್ಳಲಾರರು ಸಂವಿಧಾನದಡಿಯಲ್ಲಿ ಬದುಕುತ್ತಿದ್ದರು ಮನುಸ್ಮೃತಿಯ ಪಾಲಕರಾಗಿದ್ದಾರೆ. ನಿನ್ನ ತಾಯ್ತನದ ಹೃದಯ ಇಂದಿನ ಹೆಣ್ಣು ಸಿಕಾಮಣಿಗಳಿಗೆ ತಿಯದೇ ಹೋಯಿತು.

ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರತರಾದ ಮಹಿಳೆಯರು
ತಮ್ಮ ಯಶಸ್ಸಿಗೆ ದೇವರು ಕಾರಣ ಎನ್ನುತ್ತಾರೆ
ಬಂಧನಗಳಿಂದ ಹೊರ ತಂದದ್ದು ದೇವರು ಎನ್ನುತ್ತಾರೆ
ಹಿಂದು ಕೋಡ್ ಬಿಲ್ ಮಹಿಳೆಯರಿಗೆ ಅರಿವಿಗೆ ಬಾರದೇ ಹೋಯಿತಾ?ಮಹಿಳೆಯರಿಗಾಗಿಯೇ ತನ್ನ ಕಾನೂನು ಸಚಿವ ಹುದ್ದೆಗೆ ರಾಜೀನಾಮೆ ನೀಡಿದ ಅಂಬೇಡ್ಕರ್ ಕನಿಷ್ಟ ಪಕ್ಷ ಇವರಿಗೆ ನೆನಪಾಗದೆ ಹೋದರು. ಪ್ರತಿನಿತ್ಯ ದಲಿತ ಹಿಂದುಳಿದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ಸರದಿಯಂತೆ ನಡೆಯುತ್ತಿದ್ದರೂ ಯಾವಂದಕ್ಕು ಸ್ಪಂದಿಸದ ನಿಗ ವಹಿಸದ ಇಂಗಿನ ರಾಜಕಾರಣಿಗಳೆ ನಮ್ಮ ಹೆಣ್ಣು ಮಕ್ಕಳಿಗೆ ಗ್ರೇಟಾಗಿ ಕಾಣುತ್ತಿದ್ದಾರೆ

ಹೆಣ್ಣು ನೋವು ಸಂಟಗಳಿಂದ ನರಳುತ್ತಿದ್ದಾಗ ಪೂಜೆ ಮಾಡುವ ಯಾವ ದೇವರು ಬರಲಿಲ್ಲ ಕೊನೆಗೆ ಹೆಣ್ಣು ಜೀವಿಯ ತೊರಳಾಟದ ಧ್ವನಿ ಕೇಳಿಸಿಕೊಂಡವರು ತಾಯಿ ಹೃದಯದ ಅಂಬೇಡ್ಕರ್.. ಹೆಣ್ಣಿನ ನೋವು ಸಮಸ್ಯೆಗಳನ್ನು ಅರಿತುಕೊಂಡ ಅಂಬೇಡ್ಕರ್ ಅವರ ಬಂಧನದ ಬಿಡುಗಡೆಗಾಗಿ ಸಾಕಷ್ಟು ಪಣ ತೊಟ್ಟು ಹಿಂದು ಕೋಡ್ ಮಂಡಿಸುತ್ತಾರೆ ತಿರಸ್ಕಾರಗಳು ಎದುರಾದಾಗ ಹಿಂದು ಕೋಡ್ ಬಿಲ್ ಬಹುಮತ ಪಡೆಯದೇ ಬಿದ್ದೋಗುತ್ತೆ ಎಣ್ಣು ನನ್ನಷ್ಟೆ ಸಮಾನಳು ಎಂದು ಒಪ್ಪಿಕೊಳ್ಳದ , ಹೆಣ್ಣಿನ ಬಿಡುಗಡೆ ಬಯಸದ ಮನಸ್ಥಿತಿ ಇರುವ ಕಡೆ ಹೆಣ್ಣಿನ ಬಿಡುಗಡೆಯ ದಾರಿಗಳು ಮುಚ್ಚಲ್ಪಡುತ್ತವೆ ಎಂದು ತಮ್ಮ ಹುದ್ದೆಯನ್ನೆ ಬಿಟ್ಟು ಹೊರಬಂದ ಹೆಣ್ಣು ಜೀವಿಗಳ ಬಾಳುದ್ಧಾರಕ ಅಂಬೇಡ್ಕರ್.

ದಿನದಿಂದ ದಿನಕ್ಕೆ ಹೆಣ್ಣಿನ ಮೇಲಿನ ಅತ್ಯಾಚಾರ ದೌರ್ಜನ್ಯ ಶೋಷಣೆ ಹೆಚ್ಚಾಗುತ್ತಲೇ ಇದೇ ಈ ಪರಿಸ್ಥಿತಿಯಲ್ಲಿ ಇಂದು ಯಾವ ರಾಜಕಾರಣಿ ಮರಮರನೆ ಮರಗಿ ಮಹಿಳೆಯರ ಪರವಾಗಿದ್ದು ಯಾವ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದಾರೆ , ನ್ಯಾಯ ಕೊಡಿಸಲು ಸಿದ್ದರಾಗಿದ್ದು ಫಲಿಸದ ವೇಳೆ ಯಾವ ರಾಜಕಾರಣಿ ತನ್ನ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ?

ಯಾವುದಕ್ಕು ಸ್ಪಂದಿಸದ ರಾಜಕಾರಣಿಗಳೆ ಇಂದಿನ ಮಹಿಳೆಯರಿಗೆ ಅಂಬೇಡ್ಕರ್ ಅವರಿಗಿಂತ ಗ್ರೇಟಾಗಿ ಕಾಣುತ್ತಾರೆ ಇಂದೆಂತ ಖೇದನಿಯ ಸಂಗತಿ ಅಲ್ಲವೇ?

ಪಂಜರದೊಳಗೆ ಶತಮಾನಗಳ ಕಾಲದಿಂದಲು ನರಳಾಡುತ್ತಾ ಬದುಕುತ್ತಿದ್ದ ಹೆಣ್ಣು ಮಕ್ಕಳು, ದೂರದಿಂದ ಈ ಸಂಕಟದ ಧ್ವನಿ ಕೇಳಿ ಹತ್ತಿರ ಬಂದು ಕಣ್ಣಾರೆ ಹೆಣ್ಣು ಮಕ್ಕಳ ಸಂಕಟ ನೋಡಿ ಸಹಿಸಿಕೊಳ್ಳಲಾಗದ ಅಂಬೇಡ್ಕರ್ ಹೇಗಾದರು ಮಾಡಿ ಇವರನ್ನ ಪಂಜರದಿಂದ ಹೊರತಂದು ಪುರುಷರಂತೆ ಸಮಾನ ಅವಕಾಶ ನೀಡಿ ಸ್ವತಂತ್ರವಾಗಿ ಬದುಕಲು ಬಿಡಬೇಕೆಂದು ಸಾಕಷ್ಟು ಪ್ರಯತ್ನ ಮಾಡಿ, ಪಂಜರದ ಸುತ್ತ ಅಪಾಯಕಾರಿ ಹುಳುಗಳು ( ಮನುವಾದಿಗಳು) ಇದ್ದವು ಅವುಗಳ ಕಣ್ಣು ತಪ್ಪಿಸಿ ಕೊನೆಗೆ ಒಂದು ಬಲಿಷ್ಠವಾದ ಕೀಲಿಗೈ ಸಿದ್ದ ಮಾಡಿಕೊಂಡು ಪಂಜರದ ಕಡೆ ಬಂದು ಹೆಣ್ಣು ಮಕ್ಕಳ ತೊಳಲಾಟ ಮತ್ತೆ ಮತ್ತೆ ಕಂಡು ಒಳಗೊಳಗೆ ಸಂಕಟ ಪಟ್ಟು , ತುಸು ನಗು ಮುಖದಿಂದ ಪಂಜರದ ಬೀಗ ತೆಗೆದರು .ಎಲ್ಲ ಹೆಣ್ಣು ಮಕ್ಕಳು (ಮಹಿಳೆಯರು) ಪಂಜರದ ಬೀಗ ತೆಗೆದೊಡನೆ ಹೊರಬಂದು ತಮಗೆ ಇಷ್ಟ ಬಂದ ಕಡೆಯಲೆಲ್ಲ ಹೋಗಲಾರಂಭಿಸಿದರು.

ತಮ್ಮ ಇಚ್ಚೆಯಂತೆ ಬದುಕಲಾರಂಭಿಸಿದರು ಸ್ವತಂತ್ರರಾದ ಅವರನ್ನು ಕಂಡು ಮನಸ್ಪೂರ್ತಿ ಸಂತಸ ಪಟ್ಟ ಬಾಬಾ ಸಾಹೇಬರು,,,, ಆದರೆ ಇಂದು ಅದೇ ಹೆಣ್ಣು ಮಕ್ಕಳು ತಮ್ಮನ್ನ ಬಂಧನವೆಂಬ ಪಂಜರದಿಂದ ಬಿಡಿಸಿದವರು ಅಂಬೇಡ್ಕರರೆ ಎಂದು ಒಪ್ಪಿಕೊಳ್ಳದ ಮನಸ್ಥಿತಿಯಲ್ಲಿದ್ದಾರೆ ..

ಮಹಿಳೆಯರನ್ನ ಬಂಧನದಿಂದ ಬಿಡುಗಡೆಗೊಳಿಸಿದ ಅಂಬೇಡ್ಕರ್ ಮುಖ್ಯನಾ? ಅಥವಾ ಯಾವುದಕ್ಕೂ ಸ್ಪಂದಿಸದ, ಎಷ್ಟೋ ಅತ್ಯಾಚಾರದ ಪ್ರಕರಣಗಳನ್ನ ಯಾವ್ಯಾವುದೋ ಕಾರಣಕ್ಕೆ ಮುಚ್ಚಿ ಹಾಕುವ ಹಾಕಿಸುತ್ತಿರುವ ಇಂದಿನ ರಾಜಕಾರಣಿಗಳು ಮುಖ್ಯನಾ? ಯೋಚಿಸಿ…

ಪ್ರಜ್ಞೆಯಿಂದ ಮಾನವೀಯತೆಯಿಂದ ಯೋಚಿಸಿದರೆ ನಿಜವಾದ ಬಂಧನದ ಬಿಡುಗಡೆದಾರರು ಅರಿವಿಗೆ ಬರಬಹುದು. ಸತ್ಯವನ್ನ ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮೊಳಗೆ ತಂದುಕೊಳ್ಳಬೇಕಿದೆ.

ರಮಾ ದೊಡ್ಡಮನಿ
ಕಲಬುರಗಿ

emedialine

Recent Posts

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

3 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

5 hours ago

ತುರ್ತಾಗಿ ಬರ ಪರಿಹಾರ ಒದಗಿಸಲು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಒತ್ತಾಯ

ಕಲಬುರಗಿ: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ…

5 hours ago

ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗಪ್ರಶಸ್ತಿಗೆ ಆಹ್ವಾನ

ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ…

6 hours ago

ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಸಾವು

ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಮೃತಪಟ್ಟಿರುವ ಘಟನೆ ಬೆಳಕ್ಕಿಗೆ ಬಂದಿದಿದ್ದು, ಘಟನಾ ಸ್ಥಳಕ್ಕೆ…

6 hours ago

ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಚಿತ್ತಾಪುರ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನಾರ್…

6 hours ago