ಅಬ್ ಕೆ ಬಾರ್ ಚಾರಸೋ ಸೀಟ್ ಪಾರ್ ಅಲ್ಲ; ಅಬ್ ಕೆ ಬಾರ್ ತಡಿಪಾರ್ ಮೋದಿ ಸರಕಾರ

ಕಲಬುರಗಿ: ಜನವಾದಿ ಮಹಿಳಾ ಸಂಘಟನೆ,ಎಸ್ ಎಫ್ ಆಯ್, ಡಿ ವಾಯ್ ಎಫ್ ಆಯ್, ಪ್ರಾಂತ ರೈತ ಸಂಘ,ಕೃಷಿ ಕೂಲಿಕಾರರ ಸಂಘ, ಸಿ ಆಯ್ ಟಿ ಯು, ದೇವದಾಸಿ ನಿರ್ಮೂಲನಾ ಸಮಿತಿ, ಮುಂತಾದ ಸಂಘಟನೆಗಳು ಸೇರಿ ಅಪ್ಪಾ ಸೆಂಟನರಿ ಸಭಾ ಮಂಟಪದಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ದೆಹಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿಯಂ ಧಾವಳೆ ಮಾತನಾಡಿ ಮೋದಿ ಸರಕಾರ ಮಹಿಳೆಯರ ಸ್ಥಿತಿಯನ್ನು ದಿನದಿಂದ ದಿನಕ್ಕೆ ಶೋಚನೀಯಗೊಳಿಸುತ್ತಿದೆ. ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಲಂಗು ಲಗಾಮವಿಲ್ಲದೆ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ಸರಕಾರ ರೇಪಿಸ್ಟ್ ರನ್ನು ರಕ್ಷಿಸಿಕೊಳ್ಳುತ್ತಿದೆ. ಮತ್ತು ಸಮರ್ಥಿಸಿಕೊಳ್ಳುತ್ತಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ಖೇದ ವ್ಯಕ್ತಪಡಿಸಿದರಲ್ಲದೆ ಬರುವ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಬೇಕು ಎಂದರು.

ಅಬ್ ಕೆ ಬಾರ್ ಚಾರಸೋ ಸೀಟ್ ಪಾರ್ ಅಲ್ಲ ;ಅಬ್ ಕೆ ಬಾರ್ ತಡಿಪಾರ್ ಮೋದಿ ಸರಕಾರವನ್ನು ಮಹಿಳೆಯರು ಸೋಲಿಸದಿದ್ದರೆ ನಮಗೆ ಉಳಿಗಾಲ ಎಂದು ಹೇಳಿದರು.

ನಂತರ ಅತಿಥಿಗಳಾಗಿ ಆಗಮಿಸಿದ ಡಾ ಇಂದುಮತಿ ಪಾಟೀಲ ಅವರು ಮಾತನಾಡಿ ಮಹಿಳೆಯರು ಯಾರಿಗೂ ಕಡಿಮೆ ಇಲ್ಲ. ಮನೆ ,ನೌಕರಿ, ಸಮಾಜ,ಸಂಘಟನೆ ಎಲ್ಲವನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದೇವೆ. ಮುಂದೆಯೂ ದೇಶವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.

ಮುಖ್ಯ ಭಾಷಣಕಾರರಾಗಿ ಸಿ ಆಯ್ ಟಿ ಯು ನ ರಾಜ್ಯ ಅಧ್ಯಕ್ಷರಾದ ವರಲಕ್ಷ್ಮೀ ಅವರು ಗೆಳತಿಯರೆ ನಾವು ಮಹಿಳೆಯರು ಯಾವತ್ತೂ ಸೇವೆ ಮಾಡಲು ಹುಟ್ಟಿದವರು ಎಂದು ಮನುವಾದ ಹೇಳುತ್ತದೆ. ಅದನ್ನೆ ಮೋದಿ ಸರಕಾರ ಖಾಯಂಗೊಳಿಸಲು ಹೊರಟಿದೆ. ಸಮಾಜದಲ್ಲಿ ಜಡ್ಡುಗಟ್ಡಿರುವ ಈ ಮಹಿಳಾ ವಿರೋಧಿ ನಂಬಿಕೆಯನ್ನು ಕಿತ್ತೆಸೆಯಬೇಕು. ಅಂದಾಗಲೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತದೆ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆ ನೀಲಾ ಅವರು ಮಹಿಳಾ ದಿನಾಚರಣೆ ಎಂದರೆ ಸಂಪ್ರದಾಯವಲ್ಲ. ಗತಾನುಗತಿಕ ಆಚರಣೆಯಲ್ಲ. ಸಮರಧೀರ ಹೋರಾಟ ಮಾಡಿ ಎಂಟು ತಾಸು ಮಾತ್ರ ದುಡಿಮೆ. ಮತದಾನದ ಹಕ್ಕು, ಹೆರಿಗೆ ರಜೆ,ಭತ್ಯೆ ಇತ್ಯಾದಿಗಳನ್ನು ಪಡೆದ ದಿನವಾಗಿದೆ. ಲಿಂಗ ಸಮಾನತೆ ನೆಲೆಸುವವರೆಗೆ ನಮ್ಮ ಹೋರಾಟ ನಿಲ್ಲದು ಎಂದರು.

ಮೋದಿ ಸರಕಾರ ಮಹಿಳೆಯರನ್ನು ಧರ್ಮ,ಜಾತಿ, ದೇವರು ದಿಂಡರ ಹೆಸರಿನಲ್ಲಿ ಒಡೆಯುತ್ತಿದೆ. ಆದರೆ ನಾವು ಭಾರತೀಯರನ್ನು ಛಿದ್ರವಾಗಲು ಬಿಡುವುದಿಲ್ಲ. ಕೋಮುವಾದಿ ಸರಕಾರ ಕಿತ್ತೆಸೆಯುವ ಸಂಕಲ್ಪ ಮಾಡುವುದರ ಮೂಲಕ ಈ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸೋಣ ಎಂದು ಕರೆಕೊಟ್ಟರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ ಮೀನಾಕ್ಷಿ ಬಾಳಿಯವರು ಅಸದಳ ಸಂಕಟಗಳ ಮಧ್ಯೆಯು ಮಹಿಳಾ ಧೀಶಕ್ತಿ ಪುಟಿದೇಳುತ್ತದೆ. ಇಂದು ಸಂತ ಶರಣ ಸೂಫಿಗಳ ನಾಡು. ೧೨ ನೇ ಶತಮಾನದ ಶರಣೆ ನೀಲಾಂಬಿಕೆ ಹೇಳಿದಂತೆ ನಾವು ಹೇಡಿಗಳಲ್ಲ,ಹರುಷದ ಧೈರ್ಯಯುಳ್ಳ ಹೆಣ್ಣು ನಾವು ಎಂದರು. ಪ್ರಾರಂಭದಲ್ಲಿ ಅಂಗನವಾಡಿ ಮುಖಂಡರಾದ ಶಾಂತಾ ಘಂಟೆ ಸ್ವಾಗತ ಕೋರಿದರು.

ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ಮಲ್ಲಮ್ಮ ಕೋಡ್ಲೆ ಅವರು ವಂದನಾರ್ಪಣೆ ಮಾಡಿದರು. ವೇದಿಕೆಯ ಮೇಲೆ ಮುಖಂಡರುಗಳಾದ ಚಂದಮ್ಮ ಗೋಳಾ, ಪದ್ಮಿನಿ ಕಿರಣಗಿ, ಗೌರಮ್ಮ ಪಾಟೀಲ, ರಾಜಮತಿ ಇಕ್ಕಳಕಿ, ನಂದಾ ಮಂಗೋಂಡಿ, ಚಂದ್ರಕಲಾ ಸರಸಂಬಾ, ಎಂ ಬಿ ಸಜ್ಜನ, ವಿಜಯಲಕ್ಷ್ಮೀ ಹಿರೇಮಠ, ಶರಣಬಸಪ್ಪ ಮಮಶೆಟ್ಟಿ, ಸಾಯಬಣ್ಣಾ ಗುಡುಬಾ,ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ್, ಸುಜಾತಾ ಕುಸನೂರ ಮುಂತಾದವರು ಉಪಸ್ಥಿತರಿದ್ದರು.ಕೊನೆಯದಾಗಿ ಲವಿತ್ರ ವಸ್ತ್ರದ ಅವರು ನಿರ್ವಹಣೆ ಮಾಡಿದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

13 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

16 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

21 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

21 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

23 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420