ಬಿಸಿ ಬಿಸಿ ಸುದ್ದಿ

ಪೌರಾಯುಕ್ತರಾಗಿ ಡಾ. ಕೆ. ಗುರುಲಿಂಗಪ್ಪ ಅಧಿಕಾರ ಸ್ವೀಕಾರ

ಶಹಾಬಾದ: ನಗರ ಸಭೆಯ ನೂತನ ಪೌರಾಯುಕ್ತರಾಗಿ ಡಾ. ಕೆ. ಗುರುಲಿಂಗಪ್ಪ ರವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಶಹಾಬಾದ ನಗರ ಸಭೆಗೆ ಪೌರಾಯುಕ್ತರಾಗಿ ಡಾ. ಕೆ. ಗುರುಲಿಂಗಪ್ಪ ನವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡರು.

ಇವರು ಹಿಂದೆ ರಾಯಚೂರು ನಗರ ಸಭೆಯ ಪೌರಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.

ನೂತನ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಗುರುಲಿಂಗಪ್ಪ ಅವರು ಕಚೇರಿ ಸಿಬ್ಬಂದಿ, ನಗರಸಭಾ ಸದಸ್ಯರುಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಚುನಾಯಿತ ಜನ ಪ್ರತಿನಿಧಿಗಳು, ಕಚೇರಿ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ನಗರದಲ್ಲಿ ಕುಡಿಯುವ ನೀರು, ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು, ನೀರನ್ನು ಪೋಲಾಗದಂತೆ ಸಮರ್ಪಕವಾಗಿ ನಾಗರಿಕರಿಗೆ ಸರಬರಾಜು ಮಾಡಲಾಗುವುದು.

ನೀರಿನ ಕರ ಕಟ್ಟದ ಮತ್ತು ಅನಧಿಕೃತ ಸಂಪರ್ಕಕ್ಕೆ ಕೂಡಲೇ ಕಡಿವಾಣ ಹಾಕಲಾಗುವುದು, ಯಾವುದೇ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ, ಹಂತ ಹಂತವಾಗಿ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ನಗರ ಸಭೆಗೆ ತುಂಬಾ ಕೆಲಸ ಆಗಬೇಕಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ನಗರ ಸಭಾ ಸದಸ್ಯರ ಜೊತೆಯಲ್ಲಿ ಚರ್ಚಿಸಿ ಎಲ್ಲಾ ಕೊರತೆ ನೀಗಿಸಲು ಪ್ರಯತ್ನಿಸಲಾಗುವುದು, ಸಾರ್ವಜನಿಕರು ನಗರ ಸಭೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕಾಡಾ ಅಧ್ಯಕ್ಷ ಡಾ. ಎಮಎ ರಶೀದ, ನಗರ ಸಭಾ ಸದಸ್ಯ ನಾಗರಾಜ ಕರಣಿಕ, ಮಾಜಿ ಸದಸ್ಯ ಶರಣು ಪಗಲಾಪುರ, ಸಾಹೇಬಗೌಡ ಬೋಗುಂಡಿ, ಸ್ನೇಹಿಲ ಜಾಯಿ ಹಾಗೂ ಎಇಇ ಶರಣು ಪೂಜಾರ, ಕಚೇರಿ ವ್ಯವಸ್ಥಾಪಕ ಶರಣಗೌಡ ಪಾಟೀಲ, ಸಿಬ್ಬಂದಿ ಸಾಬಣ್ಣ ಸುಣಗಲಕರ, ನಾರಾಯಣ ರೆಡ್ಡಿ ಇನ್ನಿತರರು ಇದ್ದರು.

emedialine

Recent Posts

ಬೊಮ್ಮನಹಳ್ಳಿ ಟಿ: 111 ವರ್ಷದ ಶತಾಯುಷಿ ಹಣಮಂತಿ ತೇಕರಾಳ ನಿಧನ

ಸುರಪುರ: ತಾಲೂಕಿನ ಬೊಮ್ಮನಹಳ್ಳಿ ಟಿ. ಗ್ರಾಮದ ಶತಾಯುಷಿ ಹಣಮಂತಿ ಹಣಮಂತ ತೇಕರಾಳ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. 111 ವರ್ಷಗಳ ಕಲಾ…

23 mins ago

ರಂಗಂಪೇಟ : ಅಂಬಾ ಭವಾನಿ ದೇವಸ್ಥಾನ ವರ್ಧ ಜಯಂತಿ ಮಹೋತ್ಸವ

ಸುರಪುರ: ನಗರದ ರಂಗಂಪೇಟ-ತಿಮ್ಮಾಪುರನ ಭಾವಸಾರ ಕ್ಷತ್ರಿಯ ಸಮಾಜದ ಶ್ರೀ ಅಂಬಾ ಭವಾನಿ ಮಂದಿರದ 54ನೇ ವರ್ಷದ ವರ್ಧ ಜಯಂತಿ ಮಹೋತ್ಸವ…

26 mins ago

ಬಸವಣ್ಣನವರ ತತ್ವ ಸಿದ್ದಾಂತ ಪಾಲನೆಯಿಂದ ಬದುಕು ಸಾರ್ಥಕ

ಚಿತ್ತಾಪುರ: ಅಸಂಖ್ಯಾತ ಬಸವ ಅಭಿಮಾನಿಗಳು ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಆಚರಿಸಲಾಯಿತು. ತಾಲೂಕಿನ ಕರದಳ್ಳಿ ಗ್ರಾಮದಲ್ಲಿ…

29 mins ago

ಬಸವ ಜಯಂತಿ ಮತ್ತು ಏಕೋರಾಮರಾದ್ಯರ ಜಯಂತಿ ನಿಮಿತ್ತ ವಿಶೇಷ ಉಪನ್ಯಾಸ ನಾಳೆ

ಕಲಬುರಗಿ: ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಮಿತಿ ಹಾಗೂ  ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ನಾಳೆ…

1 hour ago

ಸಪ್ತ ನೇಕಾರರ ಸೇವಾ ಕಚೇರಿಯಲ್ಲಿ ಶ್ರೀ ಏಕೋರಾಮರಾದ್ಯರ ಮತ್ತು ಶ್ರೀ ಬಸವೇಶ್ವರ ಜಯಂತಿ ಆಚರಣೆ

ಕಲಬುರಗಿ; ನೇಕಾರರ ಸೇವಾ ಕೇಂದ್ರದ ಕಚೇರಿಯಲ್ಲಿ, ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಮಿತಿ ವತಿಯಿಂದ ಶ್ರೀ ಏಕೋರಾಮರಾದ್ಯರ ಮತ್ತು…

1 hour ago

ಸದ್ದಿಲ್ಲದೆ ಸುಕ್ಷೇತ್ರವಾಗುತ್ತಿರುವ ಶ್ರೀನಿವಾಸ ಸರಡಗಿ

ಕಲಬುರಗಿ: ಹೆತ್ತವರ ಋಣ, ಗುರುವಿನ ಋಣ, ಹುಟ್ಟಿದೂರಿನ ಋಣ ಈ ಜನ್ಮದಲ್ಲಿ ತೀರಿಸಲಿಕ್ಕೆ ಸಾಧ್ಯವಿಲ್ಲ ಎಂದು ಆಲಮೇಲದ ಪೂಜ್ಯರಾದ ಚಂದ್ರಶೇಖರ…

1 hour ago