ಪೌರಾಯುಕ್ತರಾಗಿ ಡಾ. ಕೆ. ಗುರುಲಿಂಗಪ್ಪ ಅಧಿಕಾರ ಸ್ವೀಕಾರ 

0
64

ಶಹಾಬಾದ: ನಗರ ಸಭೆಯ ನೂತನ ಪೌರಾಯುಕ್ತರಾಗಿ ಡಾ. ಕೆ. ಗುರುಲಿಂಗಪ್ಪ ರವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಶಹಾಬಾದ ನಗರ ಸಭೆಗೆ ಪೌರಾಯುಕ್ತರಾಗಿ ಡಾ. ಕೆ. ಗುರುಲಿಂಗಪ್ಪ ನವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡರು.

Contact Your\'s Advertisement; 9902492681

ಇವರು ಹಿಂದೆ ರಾಯಚೂರು ನಗರ ಸಭೆಯ ಪೌರಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.

ನೂತನ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಗುರುಲಿಂಗಪ್ಪ ಅವರು ಕಚೇರಿ ಸಿಬ್ಬಂದಿ, ನಗರಸಭಾ ಸದಸ್ಯರುಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಚುನಾಯಿತ ಜನ ಪ್ರತಿನಿಧಿಗಳು, ಕಚೇರಿ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ನಗರದಲ್ಲಿ ಕುಡಿಯುವ ನೀರು, ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು, ನೀರನ್ನು ಪೋಲಾಗದಂತೆ ಸಮರ್ಪಕವಾಗಿ ನಾಗರಿಕರಿಗೆ ಸರಬರಾಜು ಮಾಡಲಾಗುವುದು.

ನೀರಿನ ಕರ ಕಟ್ಟದ ಮತ್ತು ಅನಧಿಕೃತ ಸಂಪರ್ಕಕ್ಕೆ ಕೂಡಲೇ ಕಡಿವಾಣ ಹಾಕಲಾಗುವುದು, ಯಾವುದೇ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ, ಹಂತ ಹಂತವಾಗಿ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ನಗರ ಸಭೆಗೆ ತುಂಬಾ ಕೆಲಸ ಆಗಬೇಕಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ನಗರ ಸಭಾ ಸದಸ್ಯರ ಜೊತೆಯಲ್ಲಿ ಚರ್ಚಿಸಿ ಎಲ್ಲಾ ಕೊರತೆ ನೀಗಿಸಲು ಪ್ರಯತ್ನಿಸಲಾಗುವುದು, ಸಾರ್ವಜನಿಕರು ನಗರ ಸಭೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕಾಡಾ ಅಧ್ಯಕ್ಷ ಡಾ. ಎಮಎ ರಶೀದ, ನಗರ ಸಭಾ ಸದಸ್ಯ ನಾಗರಾಜ ಕರಣಿಕ, ಮಾಜಿ ಸದಸ್ಯ ಶರಣು ಪಗಲಾಪುರ, ಸಾಹೇಬಗೌಡ ಬೋಗುಂಡಿ, ಸ್ನೇಹಿಲ ಜಾಯಿ ಹಾಗೂ ಎಇಇ ಶರಣು ಪೂಜಾರ, ಕಚೇರಿ ವ್ಯವಸ್ಥಾಪಕ ಶರಣಗೌಡ ಪಾಟೀಲ, ಸಿಬ್ಬಂದಿ ಸಾಬಣ್ಣ ಸುಣಗಲಕರ, ನಾರಾಯಣ ರೆಡ್ಡಿ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here