ಬಿಸಿ ಬಿಸಿ ಸುದ್ದಿ

ಗುತ್ತೇದಾರ ಕನ್ಯಾ ಪದವಿ ಪೂರ್ವ ಕಾಲೇಜಿಗೆ 95.35 ಫಲಿತಾಂಶ

ಆಳಂದ; ಪಟ್ಟಣದ ಪ್ರತಿಷ್ಠಿತ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಪ್ರೇಮಿಳಾಬಾಯಿ ಮಾಧವರಾವ ಗುತ್ತೇದಾರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕನ್ಯಾ ಪದವಿ ಪೂರ್ವ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಪ್ರಾಪ್ತವಾಗಿದೆ.

ಪರೀಕ್ಷೆಗೆ ಕುಳಿತ ಕಾಲೇಜಿನ 86 ವಿದ್ಯಾರ್ಥಿನಿಯರಲ್ಲಿ 17 ವಿದ್ಯಾರ್ಥಿನಿಯರು ಅಗ್ರ ಶ್ರೇಣಿಯಲ್ಲಿ, 56 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ, 6 ವಿದ್ಯಾರ್ಥಿನಿಯರು ದ್ವೀತಿಯ ಶ್ರೇಣಿಯಲ್ಲಿ, 3 ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಕಾಲೇಜಿಗೆ ಪ್ರತಿಶತ 95.35 ಫಲಿತಾಂಶ ಲಭ್ಯವಾಗಿದೆ. ಕಾಲೇಜಿನ ಧಾನಮ್ಮಾ ಶೇ. 93.66%, ಭಾಗ್ಯಲಕ್ಷ್ಮೀ ಶೇ. 93%, ರಾಧಿಕಾ ಶೇ. 92.33%, ಆಶಾರಾಣಿ ಶೇ. 92%, ಸಂಗೀತಾ ಶೇ. 90%, ಲಕ್ಷ್ಮೀ, ಶೇ. 90, ಪ್ರಿಯಾಂಕಾ ಶೇ. 90%, ಪೂಜಾ ಶೇ. 88.16% ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರೂ ಹಾಗೂ ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ, ಸಂಸ್ಥೆಯ ಕಾರ್ಯದರ್ಶಿಗಳೂ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷರಾದ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ, ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ ಸೇರಿದಂತೆ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

emedialine

Recent Posts

ವಚನ ಕಮ್ಮಟ ಪರೀಕ್ಷೆಯಲ್ಲಿ ನೇತ್ರಾ ಶಾಂತಯ್ಯ ರಾಜ್ಯಕ್ಕೆ ತೃತೀಯ ರ್ಯಾಂಕ್

ಸುರಪುರ: ಚಿತ್ರದುರ್ಗದಲ್ಲಿ ನಡೆಸಲಾದ 2022-23ನೇ ಸಾಲಿನ ವಚನ ಕಮ್ಮಟ ಪರೀಕ್ಷೆಯಲ್ಲಿ ಪಟ್ಟಣದ ಸರಕಾರಿ ಕನ್ಯಾ ಮಾಡದರಿಯ ಹಿರಿಯ ಪ್ರಾಥಮಿಕ ಶಾಲೆ…

3 mins ago

ನೇಕಾರರ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳ ನೇಮಕ

ಸುರಪುರ: ತಾಲೂಕ ನೇಕಾರರ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ನಗರದ ತಿಮ್ಮಾಪುರದ ಚೌಡೇಶ್ವರಿ ದೇವಸ್ಥಾನದಲ್ಲಿನ ಸಹಕಾರಿ ಸಂಘದ ಕಚೇರಿಯಲ್ಲಿ…

9 mins ago

ರಾಜಕೀಯಕ್ಕಾಗಿ ಮಠಾಧೀಶರು ನೀತಿ ಬಿಟ್ಟು ಜಾತಿವಂತರಾಗಿದ್ದಾರೆ; ಅರ್ಜುನ ಭದ್ರೆ

ಸುರಪುರ: ರಾಜಕೀಯಕ್ಕಾಗಿ ಇಂದು ಕೆಲವು ಮಠಾಧೀಶರು ಮುಖ್ಯಮಂತ್ರಿ ಹುದ್ದೆ ತಮ್ಮ ಜಾತಿ ಅಥವಾ ತಮ್ಮ ಸಮುದಾಯದವರಿಗೆ ನೀಡುವಂತೆ ಬಹಿರಂಗವಾಗಿ ಹೇಳಿಕೆ…

16 mins ago

ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ; ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ "ನಮ್ಮ ನಡಿಗೆ, ಹಳ್ಳಿಯ ಕನ್ನಡ ಸರಕಾರಿ ಶಾಲೆಯ ಕಡೆಗೆ" ಎಂಬ…

24 mins ago

ಸಿಯುಕೆಯಲ್ಲಿ ‘ಡೆಕ್ಕನ್ನಿನ ಸೂಫಿ ಸಂಗೀತ ಮತ್ತು ಕಾವ್ಯ’ ಕುರಿತು ವಿಶೇಷ ಉಪನ್ಯಾಸ

ಕಲಬುರಗಿ: “ವಿನಯ, ಉದಾರತೆ, ಪ್ರೀತಿ ಮತ್ತು ವಾತ್ಸಲ್ಯಗಳು ಸೂಫಿ ಸಂತರ ಪ್ರಮುಖ ಬೋಧನೆಗಳಾಗಿವೆ. ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರು ಸೂರ್ಯನಂತೆ…

31 mins ago

ಗ್ರಾ.ಪಂ ಉಪಾಧ್ಯಕ್ಷ ಚುನಾವಣೆಗೆ ಸಿದ್ದು ಸಜ್ಜನ ಅವಿರೋಧ ಆಯ್ಕೆ

ಶಹಾಬಾದ :ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾ.ಪಂಯ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಸಿದ್ದು ಸಜ್ಜನ ಅವಿರೋಧ ಆಯ್ಕೆಯಾಗಿದ್ದಾರೆ. ಸಾಮಾನ್ಯ…

38 mins ago