ಬಿಸಿ ಬಿಸಿ ಸುದ್ದಿ

ಪ್ರಜಾಪ್ರಭುತ್ವ ವ್ಯವಸ್ಥೆ ಹುಟ್ಟಿಗೆ ಬಸವಾದಿ ಶರಣರೇ ಮೊದಲಿಗರು

ಶಹಾಬಾದ: ಬಸವಣ್ಣನವರ ಸಮಾನತೆ ತಳಹದಿಯ ಮೇಲೆ ರೂಪಿತವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಹುಟ್ಟಿಗೆ ಬಸವಾದಿ ಶರಣರೇ ಮೊದಲಿಗರು ಎಂದು ಶಿಕ್ಷಕ ಪಿ.ಎಸ್.ಮೇತ್ರೆ ಹೇಳಿದರು.

ಅವರು ಬಸವ ಜಯಂತಿ ಅಂಗವಾಗಿ ಹಳೆಶಹಾಬಾದ ಬಸವಾದಿ ಶರಣರ ಒಕ್ಕೂಟ ಸಮಿತಿ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಲಾದ ಬಸವ ಜ್ಯೋತಿ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಕರ್ನಾಟಕದಲ್ಲಿತ್ತು. ಬಸವಾದಿ ಶರಣರು ಈ ವ್ಯವಸ್ಥೆಗೆ ಹುಟ್ಟಿಗೆ ಕಾರಣರಾಗಿದ್ದಾರೆ ಜಗತ್ತಿನಲ್ಲಿಯೇ ಮಹಿಳೆಯರಿಗೆ ಪುರುಷ ಸಮಾನ ಸ್ಥಾನ-ಮಾನ ನೀಡಿದ ಕೀರ್ತಿಶರಣ ಚಳವಳಿಗೆ ಸಲ್ಲುತ್ತದೆ ಎಂದರು.

12ನೇ ಶತಮಾನದಲ್ಲಿಯೇ ಸಾಕಷ್ಟು ಮಹಿಳೆಯರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಅಂದು ಮಹಿಳೆಯರಿಗೆ ಅಕ್ಷರಜ್ಞಾನ, ಓದು ದಕ್ಕಿದ ಪರಿಣಾಮವಾಗಿ ಸಮಾಜದಲ್ಲಿದ್ದ ಅನಗತ್ಯ ಕಟ್ಟಳೆಗಳನ್ನು ಮೀರಿ ಮುಖ್ಯ ವಾಹಿನಿಗೆ ಬರುವಂತಾಯಿತು. ಅಂದಿನ ರಾಜ್ಯ ವ್ಯವಸ್ಥೆ, ಪುರುಷ ಸತ್ತೆ, ದೈವಸತ್ತೆಯನ್ನು ಧಿಕ್ಕರಿಸುವ ಶಕ್ತಿ ಮಹಿಳೆಯರಿಗೆ ಲಭ್ಯವಾಯಿತು. ಅವರಲ್ಲಿ ಚಿಂತನಾ ಪ್ರಜ್ಞೆಬೆಳೆಯಲು ಸಾಧ್ಯವಾಯಿತು ಎಂದರು.

ಅಂದು ಕೇವಲ ಮಹಿಳೆಗೆ ಪುರುಷ ಸಮಾನ ಅವಕಾಶ ದೊರೆಯಲಿಲ್ಲ. ಜತೆಗೆ ತುಳಿತಕ್ಕೊಳಗಾದ ಕೆಳಜಾತಿಯ, ದುಡಿಯುವ ವರ್ಗಕ್ಕೆ ಕಾವ್ಯ ರಚನೆಯ ಶಕ್ತಿ ತಂದುಕೊಟ್ಟ ಕೀರ್ತಿ ಬಸವರಾದಿ ಪ್ರಮತರಿಗೆ ಸಲ್ಲುತ್ತದೆ. ಮಹಾಮನೆಯಲ್ಲಿ ಪ್ರತಿಯೊಬ್ಬರ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ದೊರೆತ ಫಲವಾಗಿ ಕ್ರಾಂತಿಕಾರಿ ಹೆಜ್ಜೆ ಇಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ಶರಣ ಮಲ್ಲಿನಾಥ ಪಾಟೀಲ ಮಾತನಾಡಿ, ಕಾಯಕ ಸಂಸ್ಕøತಿಗೆ ಹೆಚ್ಚಿನ ಮಹತ್ವ ನೀಡಿದ ಶರಣರು ಪ್ರತಿಯೊಬ್ಬರನ್ನು ಸಮಾನವಾಗಿ ಪ್ರೀತಿಸಿದರು. ಗೌರವ ನೀಡಿದರು. ಸಮಾನ ಬದುಕುವ ಹಕ್ಕು ನೀಡಿದರು. ಇದುವೇ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿತ್ತು ಎಂದರು.

ಪ್ರಜಾಪ್ರಭುತ್ವಮನುಷ್ಯರೆಲ್ಲರೂ ಸಮಾಜದ ಭಾಗವೆಂದು ಹೇಳುವುದಾಗಿದೆ. ಅದು ಪ್ರತಿಯೊಬ್ಬರೂ ಒಪ್ಪಿಕೊಳ್ಳುವ ವ್ಯವಸ್ಥೆಯಾಗಿದೆ. ಆದರೆ, ಧರ್ಮವನ್ನು ಎಲ್ಲರೂ ಒಪ್ಪಬೇಕಿಲ್ಲ. ಬಸವಾದಿ ಶರಣರು ಉಪದೇಶ ಮಾಡಿದ್ದು ಧರ್ಮವಲ್ಲ. ಅವರು ಉತ್ತಮ ಹಾದಿ ಹಾಕಿಕೊಟ್ಟಿದ್ದಾರೆ. ಅದರಲ್ಲಿ ಯಾರೂ ಬೇಕಾದರೂ ನಡೆಯಬಹುದು. ಈ ಬಸವ ಜ್ಯೋತಿ ಯಾತ್ರೆಯ ಮೂಲಕ ಶರಣ ಸಂದೇಶವನ್ನು ಸರ್ವರಿಗೂ ತಲುಪಿಸುವುದೇ ಮುಖ್ಯ ಗುರಿಯಾಗಿದೆ ಎಂದರು.

ಶರಣರಾದ ಮಲ್ಲಿಕಾರ್ಜುನ ಚಂದನಕೇರಿ,ಪ್ರವೀಣ ರಾಜನ್,ಮಹಾಂತೇಶ ಅವಂಟಿ,ಬಸವಣ್ಣಪ್ಪ ವಾಲಿ, ಶರಣಗೌಡ ಪಾಟೀಲ, ಗಿರಿಮಲ್ಲಪ್ಪ ವಳಸಂಗ, ರಮೇಶ ಜೋಗದನಕರ್, ಚನ್ನಮಲ್ಲಪ್ಪ ಸಿನ್ನೂರ್,ಮಹಾಂತೇಶ ಪಾಟೀಲ, ಶರಣಪ್ಪ ಕೊಡದೂರ,ಬಸವರಾಜ ದಂಡಗುಲಕರ್,ಶಾಂತಪ್ಪ ಹಡಪದ,ಸಂತೋಷ ಪಾಟೀಲ,ಶಂಕರ ವಳಸಂಗ,ಶರಣು ವಸ್ತ್ರದ್, ಅರುಣ ಜಾಯಿ, ಬಸವರಾಜ ಶಹಾಪೂರ,ಕುಪೇಂದ್ರ ತುಪ್ಪದ್,ಅಣ್ಣಾರಾವ ಹುಗ್ಗಿ,ಸುಧೀರ್ ದ್ಯಾಮಗೌಡ,ಶ್ರವಣ ರಾವೂರ, ಬಸವರಾಜ ಪಾಟೀಲ, ಸೋಮಶೇಖರ ಕರಿಭಾವಿ,ಶರಣಪ್ಪ ದ್ಯಾಮಾ, ಮಲ್ಲಿಕಾರ್ಜುನ ವಾಲಿ, ರಾಹುಲ್ ಪೋತನಕರ್, ವಿರೇಶ ಕುಂಬಾರ ಇತರರು ಇದ್ದರು.

emedialine

Recent Posts

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

1 hour ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

4 hours ago

ತುರ್ತಾಗಿ ಬರ ಪರಿಹಾರ ಒದಗಿಸಲು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಒತ್ತಾಯ

ಕಲಬುರಗಿ: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ…

4 hours ago

ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗಪ್ರಶಸ್ತಿಗೆ ಆಹ್ವಾನ

ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ…

4 hours ago

ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಸಾವು

ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಮೃತಪಟ್ಟಿರುವ ಘಟನೆ ಬೆಳಕ್ಕಿಗೆ ಬಂದಿದಿದ್ದು, ಘಟನಾ ಸ್ಥಳಕ್ಕೆ…

4 hours ago

ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಚಿತ್ತಾಪುರ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನಾರ್…

5 hours ago