ಕಲಬುರಗಿ; ಹತ್ತು ರೂಪಾಯಿಗಳ ನಾಣ್ಯಗಳು ಕಾನೂನು ಬದ್ಧವಾಗಿ ಚಲಾವಣೆಯಲ್ಲಿವೆ. ಸಾರ್ವಜನಿಕರು, ವ್ಯಾಪಾರಿಗಳು, ಉದ್ಯೋಗಿಗಳು, ಬ್ಯಾಂಕ್ಗಳು ಹಾಗೂ ಜನಸಾಮಾನ್ಯರು 10 ರೂ.ಗಳ ನಾಣ್ಯಗಳನ್ನು ಚಲಾವಣೆ ಮಾಡಲು ಬಳಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಗೂ ಬ್ಯಾಂಕುಗಳು 10 ರೂ. ನಾಣ್ಯಗಳು ಸ್ವೀಕರಿಸಬೇಕು ಹಾಗೂ ಜನ ಸಾಮಾನ್ಯರಿಗೆ ನೀಡಬೇಕು. ಸಾರ್ವಜನಿಕ ವಹಿವಾಟಿನ ಅಗತ್ಯ ಪೂರೈಸುವ ಸಲುವಾಗಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ವಿಷಯಗಳೊಂದಿಗೆ ವಿಶಿಷ್ಟ ಲಕ್ಷಣಗಳುಳ್ಳ ನಾಣ್ಯಗಳನ್ನು ಆರ್.ಬಿ.ಐ. ಹೊರತಂದಿದೆ. ನಾಣ್ಯಗಳಾದ 1 ರೂ., 2 ರೂ., 5 ರೂ., 10 ರೂ. ಹಾಗೂ 20 ರೂಪಾಯಿಗಳ ಮುಖ ಬೆಲೆಯ ನಾನಾ ಗಾತ್ರ ಮತ್ತು ವಿನ್ಯಾಸದ ನಾಣ್ಯಗಳು ಚಲಾವಣೆಯಲ್ಲಿವೆ ಎಂದಿದ್ದಾರೆ.
ನಾಣ್ಯ ಸ್ವೀಕರಿಸದಿದ್ದರೆ ಶಿಕ್ಷೆ: ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದ ಪ್ರಕಾರ ಯಾರಾದರೂ ಒಂದು ವೇಳೆ 10 ರೂ. ನಾಣ್ಯಗಳು ಸ್ವೀಕರಿಸದೇ ಹೋದಲ್ಲಿ ನಾಣ್ಯ ಕಾಯ್ದೆ-2011ರ ಸೆಕ್ಷನ್ 6(1)ರ ಉಲ್ಲಂಘನೆಯಾಗಲಿದ್ದು, ಕಾಯ್ದೆಯನ್ವಯ ಶಿಕ್ಷೆಗೆ ಅರ್ಹರಾಗುತ್ತಾರೆ. ನಾಣ್ಯ ಕಾಯ್ದೆ-2011ರಲ್ಲಿ ಒದಗಿಸಿದಂತೆ ಎಲ್ಲಾ ನಾಣ್ಯಗಳು ಕಾನೂನುಬದ್ದವಾಗಿ ಚಲಾವಣೆಯಲ್ಲಿರುತ್ತದೆ. ಅಲ್ಲದೆ ಅಸ್ತಿತ್ವದಲ್ಲಿರುವ ಎಲ್ಲಾ ನಾಣ್ಯಗಳು ಕಾನೂನುಬದ್ಧವಾಗಿ ಮುಂದುವರೆಯುತ್ತವೆ ಎಂದಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆ ದಿ.02.07.2012ರ ಪ್ರಕಾರ ಎಲ್ಲಾ ನೋಟುಗಳು (ಹಾಳಾದ/ ವಿಕೃತವಾದ/ ಹರಿದ) ಮತ್ತು ಹಾಳಾದ ನಾಣ್ಯಗಳನ್ನು ಬ್ಯಾಂಕಿನಿಂದ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…