ಕಲಬುರಗಿ:ಮಾನವನ ಬದುಕಿಗೆ ಅಧ್ಯಾತ್ಮದ ಜ್ಞಾನವು ಅರಿವು ಮೂಡಿಸುವುದಲ್ಲದೆ,ಬೆಳಕು ನೀಡುತ್ತದೆ ಎಂದು ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.
ಜಯನಗರ ಶಿವಮಂದಿರದಲ್ಲಿ ಸೋಮವಾರ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ “ಜ್ಞಾನ ಜ್ಯೋತಿ ಬೆಳಕು”ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಾನವನ ಪಾಪ,ಪುಣ್ಯ ಕೆಲಸಗಳು ಯೋಚನೆಗೆ ತಕ್ಕಂತೆ ಇರುತ್ತವೆ.ಅಂತರಾತ್ಮಕ್ಕೆ ಮಾಡುವ ವಂಚನೆ ಮಹಾಪಾಪ.ಪ್ರತಿಯೋಬ್ಬರೂ ವಿವೇಚನಾಶೀಲರಾದರೆ ಬದುಕು ಸುಂದರ ಗೊಳಿಸಬಹುದು.ಇದಕ್ಕೆಲ್ಲಾ ಅಧ್ಯಾತ್ಮದ ಜ್ಞಾನ ಮುಖ್ಯವಾಗಿದೆ ಎಂದ ಅವರು ಜಗದೋದ್ಧಾರಕ ಪರಮಾತ್ಮ ಶಾಂತಿಪ್ರಿಯ.ಅವನ ಮಕ್ಕಳಾದ ನಾವು,ನಮ್ಮ ಆತ್ಮವು ಶಾಂತ ಚಿತ್ತದಿಂದ ಕೂಡಿರಬೇಕು ಎಂದು ಅವರು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಮಾತನಾಡಿ ಆಸೆಯು ಹೆಚ್ಚಾದಂತೆ ಇಂದು ಎಲ್ಲೇಡೆ ಮೋಸ,ವಂಚನೆ, ದರೋಡೆಯಂಥ ಕೃತ್ಯಗಳು ನಡೆಯುತ್ತಿವೆ.ಇದಕ್ಕೆಲ್ಲಾ ಜ್ಞಾನದ ಕೊರತೆ ಕಾರಣವಾಗಿದೆ.ಆಸೆ ಬಿಟ್ಟು ಸರಳ ಜೀವನದೆಡೆ ಸಾಗಿದರೆ ಕಷ್ಟಗಳಿಂದ ಪಾರಾಗಬಹುದು.ಮುಂದೆಯೂ ಜಯನಗರ ಶಿವಮಂದಿರಲ್ಲಿ ಶ್ರಾವಣ ಮಾಸದಲ್ಲಿ ಪ್ರವಚನ ಜೊತೆಗೆ ಇಂಥ ಅಧ್ಯಾತ್ಮೀಕ ಕಾರ್ಯಕ್ರಮಗಳು ನಿರಂತರ ನಡೆಯಲಿವೆ ಎಂದರು.
ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ಮದಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ, ಶಿವಪುತ್ರಪ್ಪ ಮರಡಿ,ಶಿವಕುಮಾರ ಪಾಟೀಲ, ಬಂಡೆಪ್ಪ ಕೇಸೂರ, ಮಲ್ಲಯ್ಯ ಸ್ವಾಮಿ ಗಂಗಾಧರಮಠ , ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ,ಗುರುಪಾದಪ್ಪ ಕಾಂತಾ, ವೀರಪ್ಪ ಹುಡುಗಿ, ಮಲ್ಲಿಕಾರ್ಜುನ ಕಲ್ಲಾ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಬೀದಿಮನಿ, ವಿನೋದ ಪಾಟೀಲ, ಸುಭಾಷ್ ಅಮೋಜಿ ಮಹಿಳಾ ಸದಸ್ಯರಾದ ಅನುರಾಧ ಕುಮಾರಸ್ವಾಮಿ, ಸುಷ್ಮಾ ಮಾಗಿ,ಸುರೇಖಾ ಬಾಲಕೊಂದೆ, ಸುಜಾತಾ ಭೀಮಳ್ಳಿ, ಗೀತಾ ಸಿರಗಾಪೂರ ಸೇರಿದಂತೆ ಅನೇಕ ಹಿರಿಯರು,ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…
ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…
ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…
ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…
ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…