ಬಿಸಿ ಬಿಸಿ ಸುದ್ದಿ

ವಾಡಿ: ಜನಸ್ಪಂದನ ಸಭೆ ಹಕ್ಕುಪತ್ರ ಮೂಲಭೂತ ಸೌಕರ್ಯ ಒದಗಿಸಲು ಮನವಿ

ವಾಡಿ: ಕಳೆದ 40 ವರ್ಷಗಳ ನಮ್ಮ ಬೇಡಿಕೆಯಾದ ಸ್ಥಳೀಯ ನಿವಾಸಿಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಪುರಸಭೆ ಆಡಳಿತ ಕರ್ಯಪ್ರವರ್ತರಾಗಬೇಕು ಎಂದು ಬಸಪ್ಪ ಗುಡಿ (ಬಸವನ ಖಣಿ) ಏರಿಯಾದ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಸಿ.ಫಕ್ರುದ್ದೀನ್ ಸಾಬ್ ಅವರಿಗೆ ಮನವಿ ಸಲ್ಲಿಸಿದರು.

ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ವಾಡಿ ವತಿಯಿಂದ ಬಸಪ್ಪ ಗುಡಿ (ಬಸವನಖಣಿ) ಏರಿಯಾದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮನವಿ ಪತ್ರ ಸಲ್ಲಿಸಿದ ಸ್ಥಳೀಯ ನಿವಾಗಳು ಶುದ್ಧ ಕುಡಿಯಲು ನೀರು, ಬದುಕಲು ಸ್ವಂತ ಸೂರು ಒದಗಿಸುವಂತೆ ಆಗ್ರಹಿಸಿದ ಸ್ಥಳೀಯರು, ಬಡಾವಣೆಯಲ್ಲಿ ನಲ್ಲಿಗಳಿವೆ. ಆದರೆ ನೀರಿಲ್ಲ. ಬಾವಿ ನೀರು ಕುಡಿಯಲು ಯೋಗ್ಯವಿಲ್ಲ. ಆದಷ್ಟು ಬೇಗ ನಮ್ಮ ಮೂಲಭೂತ ಸೌಲಭ್ಯ ಮನೆಗಳ ಹಕ್ಕುಪತ್ರ ನೀಡಬೇಕು. ಸೂಕ್ತ ಸ್ಥಳಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕು ಎಂದು ಮನವಿ ಮಾಡಿದರು.

ಇದೇ ಸಣದರ್ಭದಲ್ಲಿ ಬಸವ ನಗರ ಹಾಗೂ ಸೇವಾಲಾಲ್ ನಗರ ತಾಂಡಾ ನಿವಾಸಿಗಳು ತಮ್ಮ ಬಡಾವಣೆಯ ಕುಂದುಕೊರತೆಗಳ ಕುರಿತು ಮನವಿ ಸಲ್ಲಿಸಿದರು.

ಪುರಸಭೆ ಮುಖ್ಯಾಧಿಕಾರಿ ಸಿ. ಫಕೃದ್ದೀನ್ ಸಾಬ್ ಮಾತನಾಡಿ, ಈಗಾಗಲೇ ಬಸವನಗುಡಿ ಬಡಾವಣೆಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಕರೆದು ನೀರಿನ ಸಮಸ್ಯೆ ಬಗೆಹರಿಸುತ್ತೇವೆ. ಬೀದಿ ದೀಪ ಹಾಗೂ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ. ಉಳಿದ ಬೇಡಿಕೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.

ಈ ವೇಳೆ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ, ಪರಿಸರ ಅಭಿಯಂತರ ಪೂಜಾ ಫುಲಾರೆ, ಈಶ್ವರ ಅಂಬೇಕರ್, ಮನೋಜ ಹಿರೊಳ್ಳಿ, ಬಸವರಾಜ ಪೂಜಾರಿ, ಶ್ರೀಮಂತ ಧುಮ್ಮನಸೂರ, ಕೆ. ವಿರೂಪಾಕ್ಷಿ, ಬಸಮ್ಮ ಪಾಟೀಲ, ಜ್ಯೋತಿ ಗುತ್ತೇದಾರ, ಸೂಯಕಾಂತ ಕೊಂಕನಳ್ಳಿ, ಮುಖಂಡರಾದ ಕಿಶನ್ ಜಾಧವ್, ಗಣೇಶ ರಾಠೋಡ, ರಾಜೇಶ್ ಜಾಧವ್, ಕಿಶನ್ ಪೂಜಾರಿ, ಶಂಕರ್ ಚಿನ್ನಾ ರಾಠೋಡ, ಪ್ರಭು ಜಾಧವ್, ಶ್ರೀಶೈಲಪುರಾಣಿಕ, ರಾಮು ರಾಠೋಡ, ರವಿ ಕಾರಬಾರಿ, ಪ್ರಕಾಶ ಪೂಜಾರಿ, ಹಣಮಂತ ಭೋವಿ, ಹೀರಾ ಚವ್ಹಾಣ, ವಿಜಯ ಪವಾರ, ಸುಭಾಷ ಜಾಧವ್, ಗೋಪಾಲ ರಾಠೋಡ, ಶಿವುಕಾಂತಮ್ಮ ಗಾಯಕವಾಡ, ರೇಣುಕಾ ನಿಂಬರ್ಗಾ ಇದ್ದರು.

emedialine

Recent Posts

ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಕೃಷಿ ಶಿಬಿರ

ಕಲಬುರಗಿ: "ಕಲಿಕೆಯೊಂದಿಗೆ ಕೌಶಲ್ಯ" ಧ್ಯೇಯದೊಂದಿಗೆ ನಗರದಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಹಾಗೂ ಜಿಲ್ಲಾ…

57 mins ago

ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಜೀರ್ಣೋದ್ದಾರದ ಉದ್ಘಾಟನೆ, ಪಲ್ಲಕ್ಕಿ ಉತ್ಸವ

ಕಲಬುರಗಿ: ನಗರದ ಜಗತ್ ಬಡಾವಣೆಯಲ್ಲಿರುವ ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಆವರಣದಲ್ಲಿ ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಜೀರ್ಣೋದ್ದಾರದ ಉದ್ಘಾಟನೆ…

20 hours ago

ಯುವಕ/ಯುವತಿಯರ ಸ್ವಾವಲಂಬನೆ ಜೀವನಕ್ಕೆ ಉದ್ಯಮಶೀಲ ಸಹಕಾರಿ: ಅಧ್ಯಕ್ಷ ಡಾ.ಅಜಯ್ ಸಿಂಗ್

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಉದ್ಯಮಶೀಲತಾಭಿವೃದ್ದಿ ತರಬೇತಿ…

20 hours ago

ಕಲಬುರಗಿ ಪಾಲಿಕೆ ವ್ಯಾಪ್ತಿಯಲ್ಲಿ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಮಹಾನಗರ ದಿನೇ ದಿನೇ ಬೆಳೆಯುತ್ತಿದ್ದು ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ‌ ಗಣನೀಯ ಅಭಿವೃದ್ದಿ ಹೊಂದುತ್ತಿದೆ. ಹಾಗಾಗಿ, ಬಹುಮಹಡಿ ಕಟ್ಟಡಗಳ…

20 hours ago

ವಿವಿಎಸ್ ಶಾಲೆಯಲ್ಲಿ ಸುಕಿ ಸಂಗೀತ ತಂಡದಿಂದ ಶ್ರಾವಣ ಸಂಗೀತ ಸಂಭ್ರಮ

ಕಲಬುರಗಿ: ಶ್ರಾವಣ ಮಾಸ ಪ್ರಕೃತಿ ಮೂಲಕ ಕಣ್ಣಿಗೆ ಹಬ್ಬ ಮನಸ್ಸಿಗೂ ನೆಮ್ಮದಿ ನೀಡಲು ಸಂಗೀತ ಬೇಕು ಅಂತಹ ಸಂಗೀತ ರಸದೌತಣ…

20 hours ago

ನಾಳೆಯಿಂದ ಗುಡ್ಡಾಪುರ ವರದಾನೇಶ್ವರಿ ಪುರಾಣ ಆರಂಭ

ಕಲಬುರಗಿ: ಜಿಲ್ಲಾ ಬಣಗಾರ ಸಮಾಜ ಹಾಗೂ ಶ್ರೀ ಜಡೆ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಮಕ್ತಂಪುರದ…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420