ವಾಡಿ: ಪಟ್ಟಣದ ಮಲ್ಲಿಕಾರ್ಜುನ ದೇವಾಲಯ ಬಡಾವಣೆಯಲ್ಲಿನ ಸಸ್ಯ ಪ್ರೇಮಿ ಜುಗಲ್ ಕಿಶೋರ್ ವರ್ಮಾ ಅವರನ್ನು ಗಿಡಮೂಲಿಕೆ ದಿನಾಚರಣೆ ಪ್ರಯುಕ್ತ ಪತಂಜಲಿ ಯೋಗ ಸಮಿತಿ ಪ್ರಭಾರಿ ವೀರಣ್ಣ ಯಾರಿ ಅಭಿನಂದಿಸಿದರು.
ಈ ವೇಳೆ ಪತಂಜಲಿ ಯೋಗ ಸಮಿತಿ ಪ್ರಭಾರಿ ವೀರಣ್ಣ ಯಾರಿ ಮಾತನಾಡಿ ಪತಂಜಲಿ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಆಯುರ್ವೇದ ಔಷಧದಲ್ಲಿ ಅಗಾಧ ಸಾಧನೆಯನ್ನು ಮಾಡಿದ ಶ್ರೀ ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನವನ್ನು ಗಿಡಮೂಲಿಕೆಗಳ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದರು.
ಮನುಕುಲಕ್ಕೆ ಮತ್ತು ಈ ಮಣ್ಣಿನ ಮೇಲಿರುವ ಸಕಲ ಜೀವಿಗಳಿಗು ಮರ ಗಿಡಗಳು ಜೀವವನ್ನು ನೀಡುತ್ತವೆ ಅದರ ಜೊತೆಗೆ ಗಿಡಮೂಲಿಕೆಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತಿವೆ ಎಂದು ಹೇಳಿದರು.
ಸಸ್ಯ ಪ್ರೇಮಿ ಜುಗಲ್ ಕಿಶೋರ್ ವರ್ಮಾ ಅವರು ತಮ್ಮಲ್ಲಿನ ಗಿಡಮೂಲಿಕೆಯ ಪತ್ರಿ, ಅಜಿವಾನ,ಅಮೃತ ಬಳ್ಳಿ,ತುಳಸಿ,ಅಲವೇರ ಇತ್ಯಾದಿ ಔಷಧೀಯ ಗುಣದ ಸಸ್ಯಗಳ ಮಾಹಿತಿ ನೀಡಿದರು. ಸುಮಾರು ಎರಡು ನೂರು ವಿವಿಧ ಸಸ್ಯಗಳನ್ನು ಸಂಗ್ರಹಿಸಿ ಪೋಷಿಸುತ್ತಿದ್ದು, ಬಡಾವಣೆಯ ಮತ್ತು ಪಟ್ಟಣದ ಸುಮಾರು ಜನರಿಗೆ ಸಸ್ಯಗಳ ಬಗ್ಗೆ, ಅದರಿಂದಾಗುವ ಪರಿಸರ ಸಂರಕ್ಷಣೆ ಬಗ್ಗೆ ಅವುಗಳನ್ನು ಮನೆಯ ಮುಂದೆ ಬೆಳೆಸುವುದರಿಂದ ಆಗುವ ಉಪಯೋಗಗಳನ್ನು ತಿಳಿಸುತ್ತಿದ್ದೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಅಶೋಕ ಹರನಾಳ, ಶಿವಶಂಕರ ಕಾಶೆಟ್ಟಿ, ಕಾಶಿನಾಥ ಶೆಟಗಾರ, ಅಭಯ ಪಾಟೀಲ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…