ದೇವರು ಸೃಷ್ಟಿಸಿದ ಜಗತ್ತು ಪ್ರೀತಿಸಬೇಕು

ಭಾಲ್ಕಿ; ಪಟ್ಟಣದ ಶ್ರೀ ಚನ್ನಬಸವಾಶ್ರಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳು ಪರ್ಯಂತ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರಿಂದ ನಡೆದಬಂದ ಅಲ್ಲಮಪ್ರಭುದೇವರ ವಚನ ದರ್ಶನ ಪ್ರವಚನ ಮಂಗಲ ಸಮಾರಂಭದ ನಡೆಯಿತು.

ಸಮಾರಂಭದ ಸಾನಿಧ್ಯ ವಹಿಸಿ, ದೇವರು ಈ ಸೃಷ್ಟಿಯನ್ನು ನಿರ್ಮಿಸಿದ್ದಾನೆ. ಅವನ ಲೀಲಾವಿನೋದದಿಂದ ಈ ಅದ್ಭುತವಾದ ಸೃಷ್ಟಿ ನಿರ್ಮಾಣಗೊಂಡಿವೆ. ನಾವು ದೇವರನ್ನು ಪ್ರೀತಿಸಲು ಕಲಿಯಬೇಕಾದರೆ ದೇವರು ಸೃಷ್ಟಿಸಿದ ಜಗತ್ತನ್ನು ಪ್ರೀತಿಸುವುದು ಕಲಿಯಬೇಕು. ಜಗತ್ತು ಪ್ರೀತಿಸಿದಾಗಲೇ ದೇವರನ್ನು ಪ್ರೀತಿಸಲು ಸಾಧ್ಯ. ಕಾರಣ ದೇವರು ಕಾಣುವುದಿಲ್ಲ. ದೇವರ ಸೃಷ್ಟಿಯಾದ ಜಗತ್ತು ಕಾಣಿಸುತ್ತದೆ. ಅದಕ್ಕಾಗಿ ಕಾಣಿಸುವುದನ್ನು ಪ್ರೀತಿಸುವ ಮೂಲಕ ಕಾಣಲಾರದ ಪರಮಾತ್ಮನನ್ನು ಪ್ರೀತಿಸಲು ಸಾಧ್ಯವಿದೆ.

ಅಂತಹ ಅನುಭವ ಬರಬೇಕಾದರೆ ನಾವು ನಿತ್ಯ ನಿತ್ಯ ಅರ್ಚನೆ, ಅರ್ಪಣೆ, ಅನುಭಾವ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಸಾನಿಧ್ಯ ವಹಿಸಿ, ಒಬ್ಬ ಮಠಾಧೀಶರಾಗಿ, ಕಳೆದ 40 ವರ್ಷಗಳಿಂದ ಶ್ರೀಮಠದಲ್ಲಿ ಪ್ರವಚನ ನೀಡುತ್ತಿರುವ ನಮ್ಮ ಪೂಜ್ಯರು ಏಕೈಕ ಮಠಾಧೀಶರೆಂದು ಹೇಳಲು ಸಂತೋಷವಾಗುತ್ತದೆ.

ಪೂಜ್ಯರ ಜೊತೆಗೆ ಈ ವರ್ಷ ಪೂಜ್ಯ ಶ್ರೀ ಬಸವಲಿಂಗ ದೇವರು ಅಲ್ಲಮಪ್ರಭುದೇವರ ವಚನ ಪ್ರವಚನ ಮಾಡಿರುವುದು ನಮ್ಮೆಲ್ಲರಿಗೆ ಅತ್ಯಂತ ಸಂತೋಷ ಉಂಟು ಮಾಡಿದೆ. ಪೂಜ್ಯರು ನಡೆ-ನುಡಿ ಒಂದಾಗಿಸಿಕೊಂಡು ಸರಳ ಮತ್ತು ಸಾತ್ವಿಕ ಜೀವನ ನಡೆಸುವ ಮೂಲಕ ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ. ಅವರು ಮತ್ತು ಗುರುಗಳು ಪ್ರವಚನವನ್ನು ಆಲಿಸಿದ ತಾವೆಲ್ಲರೂ ನಿಜಕ್ಕೂ ಧನ್ಯರು ಎಂದು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

ಪೂಜ್ಯ ಶ್ರೀ ಬಸವಲಿಂಗ ದೇವರು ಮಾತನಾಡಿ ನಾನು ಒಂದು ತಿಂಗಳು ಪ್ರವಚನ ಮಾಡಲಿಕ್ಕೆ ನನಗೆ ಮೂಲ ಪ್ರೇರಣೆ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಗಳು ಆಗಿದ್ದಾರೆ. ನಾನು ಪೂಜ್ಯರಲ್ಲಿ ಬಸವಣ್ಣನವರನ್ನು ಕಂಡರೆ, ಸಿದ್ಧೇಶ್ವರ ಅಪ್ಪಗಳಲ್ಲಿ ಅಲ್ಲಪ್ರಭುದೇವರನ್ನು ಕಂಡಿದ್ದೇನೆ ಈ ಉಭಯರ ಸಾನಿಧ್ಯದಿಂದ ನನ್ನ ಜೀವನ ಪಾವನವಾಗಿದೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ಡಾ.ಗೀತಾ ಈಶ್ವರ ಖಂಡ್ರೆ ವಹಿಸಿದ್ದರು. ಬಸವಗುರುಪೂಜೆ ಉಮಾ ಪ್ರಕಾಶ ಖಂಡ್ರೆ ಅವರಿಂದ ನೆರವೇರಿತು. ಶ್ರಾವಣ ಮಾಸ ಪ್ರವಚನ ಸೇವಾ ಸಮಿತಿ ಅಧ್ಯಕ್ಷರಾದ ನಿರ್ಮಲಾ ಚಂದ್ರಕಾಂತ ಪಾಟೀಲ ದಂಪತಿಗಳಿಗೆ ಸನ್ಮಾನಿಸಲಾಯಿತು. ಶಾರದಾ ಬಾಬುರಾವ ಹುಣಜೆ ಪ್ರಸಾದ ದಾಸೋಹ ಮಾಡಿದರು. ದೀಪಕ ಥಮಕೆ ನಿರೂಪಿಸಿದರು. ವೀರಣ್ಣ ಕುಂಬಾರ ಶರಣು ಸಮರ್ಪಣೆ ಮಾಡಿದರು. ಕು. ಸಮೃದ್ಧಿ ಚನ್ನಬಸವಣ್ಣ ಬಳತೆ ವಚನ ಪ್ರಾರ್ಥನೆ ನಡೆಸಿಕೊಟ್ಟರು.

emedialine

Recent Posts

ಕಲಾವಿದರಿಗೆ ಮಾಸಾಶನ ಮಂಜೂರು ಸದಸ್ಯರಾಗಿ ಬಾಬುರಾವ ಕೋಬಾಳ ನೇಮಕ

ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಹಿತಿ, ಕಲಾವಿದರಿಗೆ ಮಾಸಾಶನ ಮಂಜೂರು ಮಾಡುವ ರಾಜ್ಯಮಟ್ಟದ ಆಯ್ಕೆ ಸಮಿತಿ ಸದಸ್ಯರನ್ನಾಗಿ ಕಲಬುರಗಿಯ…

31 mins ago

ಸರ್ವರೂ ಸಹಕಾರಿ ತತ್ವದೊಂದಿಗೆ ನಡೆಯೋಣ

ಕಲಬುರಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವ್ಯವಸಾಯ ಸೇವಾ ಸಹಕಾರ ಸಂಘಗಳು) ಡಿ.ಸಿ.ಸಿ ಬ್ಯಾಂಕ್‌ನ ತಾಯಿ ಬೇರು. ಗ್ರಾಮೀಣ…

49 mins ago

ಸಚಿವರಿಂದ ಮನ್ನೂರ ಆಸ್ಪತ್ರೆಯ ದ ವೆಲ್ ನೇಸ್ ರೆವೂಲೇಷನ ಮ್ಯಾಗಝೀನ್ ಲೋಕಾರ್ಪಣೆ

ಕಲಬುರಗಿ: ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವತಿಯಿಂದ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಆರೋಗ್ಯ, ಕ್ಷೇಮ, ಯೋಗ, ಸದೃಢತೆಯ…

56 mins ago

ಡಾ. ಎಂ.ಎಂ. ಕಲಬುರ್ಗಿ ಸಂಸ್ಮರಣೆ ನಾಳೆ

ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಡಾ. ಎಂ.ಎಂ. ಕಲಬುರಗಿ ವಿಚಾರ ವೇದಿಕೆಯ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ…

1 hour ago

ಕಲಬುರಗಿ: ಅಂಗವಿಕಲ ಕಲ್ಯಾಣ ಅಧಿಕಾರಿಗೆ ಸನ್ಮಾನ

ಕಲಬುರಗಿ: ಅಂಗವಿಕಲ ಕಲ್ಯಾಣ ಇಲಾಖೆಯಿಂದ ಅಂಗವಿಕಲರು ಮತ್ತು ವಿಶೇಷ ಚೇತನರಿಗೆ ಸರಕಾರದದ ಸೌಲಭ್ಯಗಳು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾ…

3 hours ago

ಮಕ್ಕಳಿಗೆ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420