ಕಲಬುರಗಿ: ಜಿಲ್ಲಾ ಜನತದಳ (ಜಾತ್ಯತೀತ) ಪಕ್ಷದ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಹಾಗೂ ಮಾಜಿ ಶಾಸಕರು ಮತ್ತು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರ ಆದೇಶದ ಮೇರೆಗೆ ಜೆಡಿಎಸ್ ಪಕ್ಷದ ತತ್ವಸಿದ್ದಂತಗಳನ್ನು ಒಪ್ಪಿಕೊಂಡು ಹಲವಾರು ವಿವಿಧ ಸಂಘಟನೆಯ ಮುಖಂಡರುಗಳು ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಾ. ಸಿದ್ದಣ್ಣ ಎಸ್ ಪಾಟೀಲ ಹಾಗೂ ಪಕ್ಷದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಸೇರ್ಪಡೆಯಾದರು.
ಜೆಡಿಎಸ್ ಪಕ್ಷಕ್ಕೆ ವಿಲಾಸ ಕಣ್ಣಮಸ್ಕರ್, ಕಾಶೀನಾಥ ಉಡಗಿ, ಪ್ರಕಾಶ್ ಹರವಾಳಕರ್, ಭೀಮಾಶಂಕರ ಹಡಪದ, ಸತೀಶಕುಮಾರ್ ದೊಡ್ಡಮನಿ, ಬಸವರಾಜ ರದ್ದೇವಾಡಿಗಿ, ನಾಗರಾಜ ಕಂತಿಮಠ, ಮಲ್ಲಿಕಾರ್ಜುನ ಬಗಲಿ, ಚೇತನ ದರ್ಗಿ, ವೆಂಕಟೇಶ ದರ್ಗಿ, ಶ್ರೀಕಾಂತ ಚಂದ್ರಕಿ, ಅಲೋಕ್ ದರ್ಗಿ, ಶಿವಲಿಂಗಪ್ಪಾ ದೇಸಾಯಿ, ವೈಜನಾಥ ಚಿಂಚೋಳಿ, ಶಿವಲಿಂಗಪ್ಪಾ ದೇಸಾಯಿ, ಚಂದ್ರಕಾಂತ ಕೊಂಡಪುರ ಇವರು ಸೇರ್ಪಡೆಯಾದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ವಿಭಾಗ ಜೆಡಿಎಸ್ ಪಕ್ಷದ ಅಧ್ಯಕ್ಷ ಸಂಜುಕುಮಾರ ಮಡಕ್ಕಿ, ಪಕ್ಷದ ರಾಜ್ಯ ಕಾರ್ಯದರ್ಶಿ ಹಣಮಂತ ಕಂದಳಿ, ಸುನೀಲ್ ಗಾಜರೆ, ಯೇಷುನಾಥ, ನರಸಯ್ಯ ಗುತ್ತೇದಾರ, ಸಿದ್ರಾಮಪ್ಪಾ ಹೋದಲೂರ್, ನಾಗಣ್ಣ ವಾರದ, ಮಾರುತಿ ಕಲಗೂರ್ತಿ, ಸೈಯದ್ ಜಾಕೀರ್ ಹುಸೇನ್, ಕಾಶೀನಾಥ ನಾಗರಮ ಸೇರಿದಂತೆ ಪಕ್ಷದ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…