ಕಲಬುರಗಿ: ಕಲ್ಯಾಣ ಕರ್ನಾಟಕ ಸೇನೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ದತ್ತು ಹಯ್ಯಾಳಕರ್, ರಾಜ್ಯ ಗೌರವಾಧ್ಯಕ್ಷ ರಮೆಶ ಬೀದರ್ಕರ ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಮಹಿಳಾ ಘಟಕ ನೇಮಕ ಮಾಡಲಾಯಿತು.
(ಶ್ರೀಮತಿ ಗೋರಂಪಳ್ಳಿ ಅಧ್ಯಕ್ಷೆ), (ನೀಲಮ್ಮ ಕಮಲಾಪೂರಕರ ಉಪಾಧ್ಯಕ್ಷೆ), (ಶ್ರೀದೇವಿ ಮುತ್ತಂಗಿ ಪ್ರಧಾನಕಾರ್ಯದರ್ಶಿ), (ಸುಜಾತಾ ಸಹ ಕಾರ್ಯದರ್ಶಿ), (ಸಾವಿತ್ರಿ ಸಂಘಟನಾ ಕಾರ್ಯದರ್ಶಿ) ನೇಮಕ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ದತ್ತು ಹಯ್ಯಾಳಕರ್ ಮಾತನಾಡಿದ ಸಂಘಟನೆ ಬೆಳೆಯ ಬೇಕಾದರೆ ಸ್ತ್ರೀ ಶಕ್ತಿ ಅತಿ ಅವಶ್ಯಕ, ಸ್ತ್ರೀಯರ ವಿರುದ್ಧ ನಡೆಯುತ್ತಿರುವ ಶೋಷಣೆ, ಅತ್ಯಾಚಾರ ಮುಂತಾದವುಗಳನ್ನು ಮೆಟ್ಟಿ ನಿಂತು ಹೋರಾಡಬೇಕಿದೆ. ಅದಕ್ಕೆ ಸ್ತ್ರೀಯರು ಮುಂದೆ ಬರಬೇಕಾಗಿದೆ. ಗ್ರಾಮ ಮಟ್ಟ ದಿಂದ ಹಿಡಿದು ಕೊಂಡು ರಾಜ್ಯಮಟ್ಟದವರೆಗೆ ಮಹಿಳೆಯರು ಶಸಕ್ತವಾಗಿ ನಿಲ್ಲಬೇಕಿದೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರ, ಶೋಷಿತರ, ದಮನಿತರ ಬೆಂಬಲವಾಗಿ ನಾವು ಸದಾ ಇರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ರವೀಂದ್ರ ಟಿ. ವರ್ಮಾ, ಕಾಶೀನಾಥ, ಮುಖಂಡರಾದ ಗುಂಡೇಶ ಶಿವನೂರ, ಮೌನೇಶ ಹಯ್ಯಾಳಕರ್ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಹಿತಿ, ಕಲಾವಿದರಿಗೆ ಮಾಸಾಶನ ಮಂಜೂರು ಮಾಡುವ ರಾಜ್ಯಮಟ್ಟದ ಆಯ್ಕೆ ಸಮಿತಿ ಸದಸ್ಯರನ್ನಾಗಿ ಕಲಬುರಗಿಯ…
ಕಲಬುರಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವ್ಯವಸಾಯ ಸೇವಾ ಸಹಕಾರ ಸಂಘಗಳು) ಡಿ.ಸಿ.ಸಿ ಬ್ಯಾಂಕ್ನ ತಾಯಿ ಬೇರು. ಗ್ರಾಮೀಣ…
ಕಲಬುರಗಿ: ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವತಿಯಿಂದ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಆರೋಗ್ಯ, ಕ್ಷೇಮ, ಯೋಗ, ಸದೃಢತೆಯ…
ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಡಾ. ಎಂ.ಎಂ. ಕಲಬುರಗಿ ವಿಚಾರ ವೇದಿಕೆಯ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ…
ಕಲಬುರಗಿ: ಅಂಗವಿಕಲ ಕಲ್ಯಾಣ ಇಲಾಖೆಯಿಂದ ಅಂಗವಿಕಲರು ಮತ್ತು ವಿಶೇಷ ಚೇತನರಿಗೆ ಸರಕಾರದದ ಸೌಲಭ್ಯಗಳು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾ…
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ…