ಕಲಬುರಗಿ; ಸರಕಾರ ನಿಜವಾದ ಕಲಾವಿದರನ್ನು ಗುರುತಿಸಿ ಅವರ ಕುಟುಂಬಕ್ಕೆ ಭದ್ರತೆ ಒದಗಿಸುವುದರೊಂದಿಗೆ ಕಲಾವಿದರಿಗಾಗಿ ಗ್ಯಾರಂಟಿ ಯೋಜನೆ ಜಾರಿಗೆ ಮಾಡಲಿ ಎಂದು ಶರಣ ಚಿಂತಕರಾದ ಅಂಬಾರಾಯ ಬಿರಾದಾರ ಹೇಳಿದರು.
ತಾಲೂಕಿನ ಜಂಬಗಾ(ಬಿ) ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ವಿಶ್ವ ಜಾನಪದ ದಿನಾಚರಣೆಯ ನಿಮಿತ್ಯ ಕನ್ನಡ ಜಾನಪದ ಪರಿಷತ್ ತಾಲೂಕ ಉತ್ತರ ವಲಯದ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅರ್ಜಿ ಹಾಕಿದವರನ್ನು ಕಾರ್ಯಲಯದಲ್ಲಿ ಕುಳಿತುಕೊಂಡು ಫೋಟೋಗಳನ್ನು ನೋಡಿ ಕೆಲವರಿಗೆ ಧನ ಸಹಾಯ ಮಾಡುತ್ತಿದೆ ಆದರೆ ನಿಜವಾದ ಕಲಾವಿದರನ್ನು ಗುರುತಿಸದಿರುವದು ವಿಷಾದಕರ ಸಂಗತಿ. ಗ್ರಾಮೀಣ ಭಾಗದಲ್ಲಿ ಅನೇಕ ಜನ ಕಲಾವಿದರು ತಮ್ಮ ಕಲೆಗಾಗಿ ಹಗಲಿರುಳು ಸೇವೆ ಮಾಡಿ ತಮ್ಮ ಜೀವನವೇ ಸಮರ್ಪಣೆ ಮಾಡಿದ್ದಾರೆ ಅಂತವರಿಗೆ ಯಾವುದೇ ಸೌಲಭ್ಯ ಇರದೆ ಸಂದೀಗ್ಧ ಪರಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಅಂಥವರನ್ನು ಸರಕಾರ ಹಾಗೂ ಸಾರ್ವಜನಿಕರು ಗುರುತಿಸಲಿ. ಕಲಾವಿದರಿಗೆ ಕಲೆಯಿಂದ ಗುರ್ತಿಸಲಿ ರಿಕ್ಮೆಂಡ್ ಬೇಡ ಎಂದು ಮಾರ್ಮಿಕವಾಗಿ ನುಡಿದರು.
ಕನ್ನಡ ಜಾನಪದ ಪರಿಷತ್ ಉತ್ತರ ವಲಯದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಪ್ರಾಸ್ತಾವಿಕವಾಗಿ ಮಾತನಾಡುತ್ತ ಜನಪದ ಕಲಾವಿದರು ಸಮಯಕ್ಕೆ ಸರಿಯಾಗಿ ತಮ್ಮ ಗೀತೆಗಳು ರಚನೆ ಮಾಡಿ ಆಧುನಿಕ ಸಮಾಜದ ಪರಿಕಲ್ಪನೆಯನ್ನು ನೀಡುತ್ತಿದ್ದಾರೆ. ಇಂತಹ ಜನಪದ ಕಲಾವಿದರನ್ನು ಗೌರವಿಸಿ ಸಮಾಜಕ್ಕೆ ಪರಿಚಯ ಮಾಡುವುದು ಕನ್ನಡ ಜಾನಪದ ಪರಿಷತದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ವೇದಿಕೆ ಮೇಲೆ ಮುಖಂಡರಾದ ಜಗನ್ನಾಥ ಮಂಠಾಳ, ಗಿರಿರಾಜ ಬಿರಾದಾರ, ನಾಗೇಂದ್ರಪ್ಪಾ ಬಾಬನ ಗೋಳ, ಗುಂಡೆರಾಯ ಪಾಟ್ಲಿ, ಉದಯಕುಮಾರ ಹತಗುಂದಿ, ಅಟ್ಟೂರ ಗ್ರಾಮದ ಯುವ ಮುಖಂಡರಾದ ಪರಶುರಾಮ ಎಸ್. ಜಡಗೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಂಬಗಾ(ಬಿ)ಗ್ರಾಮದ ಹಿರಿಯ ಜನಪದ ಕಲಾವಿದರಾದ ಶಿವರಾಯ ಎಸ್ ಬಾಬನಗೋಳ, ಚಂದ್ರಕಾಂತ ಎಸ್ ಬಿರಾದಾರ, ಯಶವಂತರಾವ ಎಮ. ಭೂತಿ,ಬಸವರಾಜ ಬಿ. ಗುತ್ತೇದಾರ ಹಾಗೂ ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದ ಕಲಾವಿದರಾದ ವಿಠಲ ನಿಂಬಾಳೆ, ಶರಣಪ್ಪ ಬಿರಬಿಟ್ಟೆ ಎಲದಗುಂಡಿ ಗ್ರಾಮದ ಕಲಾವಿದರಾದ ಚಂದ್ರಕಾಂತ ಪಾಟೀಲ, ಬಸವರಾಜ ಪಾಟೀಲ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಅನೇಕ ಜನರು ಭಾಗವಹಿಸಿದರು.
ಕಲಬುರಗಿ: ಬಾಕಿ ವೇತನ ಪಾವತಿಸಲು ಸಿಬ್ಬಂದಿ ಕಡಿತ ಮಾಡಿದ ಆದೇಶವನ್ನು ವಾಪಸ್ ಪಡೆಯಬೇಕು. ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸುವುದು…
ಕಲಬುರಗಿ: ಬದುಕಿನಲ್ಲಿ ಮುಂದೆ ಬರಬೇಕಾದರೆ ಒಳ್ಳೆ ಭವಿಷ್ಯ ಕಾಣಬೇಕಾಗಿದ್ದರೆ ನೀವು ನಿಷ್ಠೆ, ಪರಿಶ್ರಮ ಮತ್ತು ಸಂಕಲ್ಪ ಹೊಂದಿರಬೇಕು. ಕೇವಲ ಪದವಿಗಾಗಿ ಓದುವುದನ್ನು…
ಬೆಂಗಳೂರು; ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 2024-25ನೇ ಸಾಲಿನ ಅರ್ಹ ನೋಂದಾಯಿತ ಕಟ್ಟಡ…
ಕಲಬುರಗಿ: ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ ಸುಪ್ರಸಿದ್ದ ಆರಾಧ್ಯ ದೈವರಾದ ಹಜರತ್ ಸಾತು ಶಹೀದ್ (ಆಚ್.ಎಚ್)ರವರ ಉರುಸ್ (ಜಾತ್ರೆ) 19…
ಕಲಬುರಗಿ: ಭಾರತೀಯ ಮಜ್ದೂರ್ ಸಂಘ ಜಿಲ್ಲಾ ಘಟಕದ ವತಿಯಿಂದ employees pension scheme (EPS) 1995 ಅನ್ವಯ ಕಾರ್ಮಿಕರಿಗೆ ನೀಡುತ್ತಿರುವ…
ಕಲಬುರಗಿ: ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಹಕ್ಕು ಪತ್ರಕ್ಕಾಗಿ ಡಿ.ಡಿ ಕಟ್ಟಿ ಒಂದು ವರ್ಷ ಕಳೆದರೂ ಸಹ ಹಕ್ಕು…