ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

0
58

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಜಮಾತೆ-ಇ-ಉಲಮಾ ಹಿಂದ್ ಶಾಖೆಯ ಪದಾಧಿಕಾರಿಗಳು ಹಾಗೂ ಚಿಂಚೋಳಿಯ ಮುಸ್ಲಿಮರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸ್ವಾಮಿ ನರಸಿಂಹಾನಂದ ಸರಸ್ವತಿ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಅವಮಾನಿಸಿದ್ದಾರೆ, ಮುಸ್ಲಿಮರು ಮತ್ತು ಭಾರತದ ಶಾಂತಿಪ್ರಿಯ ಜನರ ಭಾವನೆಗಳಿಗೆ ಜಾತಿ ಮತ್ತು ಸಮುದಾಯವನ್ನು ಲೆಕ್ಕಿಸದೆ ನೋವುಂಟು ಮಾಡಿದ್ದಾರೆ.

Contact Your\'s Advertisement; 9902492681

ನಮ್ಮ ದೇಶದ ಕೋಮು ಸೌಹಾರ್ದತೆಯನ್ನು ಕದಡಲು ಮತ್ತು ರಾಷ್ಟ್ರೀಯ ಸಮಗ್ರತೆಗೆ ಹಾನಿ ಉಂಟುಮಾಡಲು ಯತ್ನಿಸಿರುವ ಸ್ವಾಮಿ ನರಸಿಂಹಾನಂದ ಸರಸ್ವತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಪ್ರಮುಖರು ಒತ್ತಾಯಿಸದರು.

ಸೈಯದ್‌ ಅಕ್ಟರ್ ಹುಸೇನಿ ಬಡಿ ದರ್ಗಾ, ಮುಫ್ತಿ ಅಬ್ದುಲ್ ಆಹಾದ ಖಾಸಮಿ, ಕೆ ಎಂ ಬಾರಿ, ಅಬ್ದುಲ್ ಬಾಸಿದ,ಅನ್ವರ್ ಖತಿಬ್, ಪುರಸಭೆ ಅಧ್ಯಕ್ಷ ಆನಂದ ಟೈಗರ್,ಶಬೀರ್ ಆಹೆಮದ,ಅಬ್ದುಲ್ ಹಮಿದ ಹಾಫೀಜ್, ಮತೀನ್ ಸೌದಾಗರ್, ಹಸನೇನ ಹಾಶಮಿ,ಲಕ್ಷಮಣ ಅವುಂಟಿ, ಹಣಮಂತ್ ಪೂಜಾರಿ, ಜಗನಾಥ್ ಗುತೆದಾರ, ಅಬ್ದುಲ್ ಹಾದಿ, ಶೈಖ್ ಫರಿದ, ನುಮಾನ್ ಪಟೇಲ್, ಎಸ್ಕೆ ಮುಕ್ತಾರ್, ಖಾಲಿಲ್ ಪಟೇಲ್,ಝಿಯಾ ಉರ್ ರೆಹೇಮನ್, ಅಸ್ಲಾಂ ಬಾಗವನ, ರೆಹಮನ್ ಪಟೇಲ್,ಜಾಕಿರ್ ಪೂಲ್ಕ್ ಪಳಿ,ತೊಫೀಕ್ ಖುರೇಶಿ,ಮೊಖದುಮ್ ಜಬಾರ,ಇಸ್ಮಾಯಿಲ್ ಹಫೀಜ್ ಪೂಲ್ಕ್ ಪಳಿ, ಹಫೀಜ್ ಪಟೇಲ್, ಮೊಯಿಜ ಪಟೇಲ್, ಆಹೆಮದ್ ಬಾಗವಾನ್, ಸಮದ್ ಖಾನ್,ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here