ಕಾಂಗ್ರೆಸ ಪಕ್ಷದ ವರಿಷ್ಠರಲ್ಲಿ ರಾಜು ಕಟ್ಟಿಮನಿ ಮನವಿ

ಕಲಬುರಗಿ: ಮಾದಿಗ ಸಮುದಾಯದ ಹಿರಿಯ ನಾಯಕರಾದ ಕೆ.ಹೆಚ್.ಮುನಿಯಪ್ಪ ಅವರಿಗೆ ರಾಜ್ಯದ ಮುಖ್ಯಮಂತ್ರಿ ಮಾಡಬೇಕೆಂದು ಜಿಲ್ಲಾ ಮಾಧಿಗ ಸಮಾಜದ ಯುವ ಹೋರಾಟಗಾರ ರಾಜು ಎಸ್.ಕಟ್ಟಿಮನಿ ಅವರು ರಾಜ್ಯದ ಕಾಂಗ್ರೆಸ ಪಕ್ಷದ ವರಿಷ್ಠರಲ್ಲಿ ಮತ್ತು ಸಚಿವರು ಹಾಗೂ ಶಾಸಕರಲ್ಲಿ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಸ್ಥಾನ ಬದಲಾವಣೆಯಾದರೆ ಮಾದಿಗ ಸಮುದಾಯದ ಹಿರಿಯ ನಾಯಕರು ಮತ್ತು ಸತತ 7 ಸಲ ಸಂಸದರಾದ ಹಾಗೂ ಪ್ರಸ್ತುತ ರಾಜ್ಯದ ಹಾಲಿ ಸಚಿವರಿದ್ದು ಸುಮಾರು 50 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಸಕ್ರೀಯರಾಗಿದ್ದು, ಕಾಂಗ್ರೇಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಟಮಾಡಲು ಇವರ ಶ್ರಮ ಬಹಳಷ್ಟು ಇರುತ್ತದೆ. ಮುಂದೆ ರಾಜ್ಯದಲ್ಲಿ “ದಲಿತ ಮುಖ್ಯಂತ್ರಿ ಮಾಡಬೇಕೆಂದು” ಕೂಗೂ ಇದೆ. ಇಲ್ಲಿ ಒಂದು ವೇಳೆ ದಲಿತ ಮುಖ್ಯಮಂತ್ರಿ ಮಾಡಬೇಕೆಂದು ಸಂದರ್ಭ ಬಂದರೆ “ಮಾದಿಗ ಸಮುದಾಯದ ಹಿರಿಯ ನಾಯಕರಾದ ಕೆ.ಹೆಚ್.ಮುನಿಯಪ್ಪಾರವರನ್ನು ರಾಜ್ಯದ ಮುಖ್ಯಮಂತ್ರಿಗಳಾಗಿ ಎಲ್ಲಾ ಕಾಂಗ್ರೆಸ ಪಕ್ಷದ ಕೇಂದ್ರದ ವರಿಷ್ಠರು ಮತ್ತುಉ ರಾಜ್ಯದ ವರಿಷ್ಠರು ಹಾಗೂ ಸಚಿವರು ಉ, ಶಾಸಕರು ಸರ್ವಾನುಮತಿಂದ ಆಯ್ಕೆ ಮಾಡಬೇಕಂದು ಮನವಿ ಮಾಡಿದ್ದಾರೆ.

ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇರ್ಶವರ ರವರು 2013ರ ವಿಧಾನ ಸಭೆ ಚುನಾವಣೆಯಲ್ಲಿ ಸೋತರು ಕೂಡ ಅವರನ್ನು ಕಾಂಗ್ರೆಸ ಪಕ್ಷದ ರಾಜ್ಯಧ್ಯಕ್ಷರಾಗಿ ಮತ್ತು 2018ರಿಂದ 2020ರ ಅವಧಿಯವರೆಗೆ ಉಪ ಮುಖ್ಯಮಂತ್ರಿಯಾಗಿ ಮಾಡಿರುತ್ತಿರಿ. ಆದರೆ ರಾಜ್ಯದಲ್ಲಿ ದಲಿತರಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಮಾದಿಗ ಸಮುದಾಯದವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಮಾನ ಕೊಟ್ಟಿರುವುದಿಲ್ಲ. ಕಾಂಗ್ರೆಸ ಪಕ್ಷ ಮಾದಿಗ ಸಮಾಜಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದೆ. ಆದ್ದರಿಂದ ತಾವುಗಳು ಮಾದಿಗ ಸಮುದಾಯದ ಸಂಘಟನೇ ಚತುರ ರಾಜಕೀಯ ಚಾಣಕ್ಯ ಮತ್ತು ಕರ್ನಾಟಕ ರಾಜ್ಯದ ಸಚಿವರಾದ ಕೆ.ಹೆಚ್.ಮುನಿಯಪ್ಪಾರವರನ್ನು “ರಾಜ್ಯದ ಮುಖ್ಯಮಂತ್ರಿ” ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ರಾಜು ಎಸ್. ಕಟ್ಟಿಮನಿ ಯವರು ಕಾಂಗ್ರೇಸ ಪಕ್ಷದ ಪ್ರಮುಖರಾದ ಸೋನಿಯಾ ಗಾಂಧಿಜಿ ಮತ್ತು ರಾಹುಲ ಗಾಂಧಿಜಿ ಮತ್ತು ರಾಜ್ಯದ ಕಾಂಗ್ರೆಸ ಪಕ್ಷದ ವರಿಷ್ಠರಲ್ಲಿ ಮತ್ತು ಸಚಿವರು ಹಾಗೂ ಶಾಸಕರಲ್ಲಿ ಮನವಿ ಮಾಡಿದ್ದಾರೆ.

emedialine

Recent Posts

ಮಹಿಳೆಯರು ಸ್ವಾವಲಂಬಿಗಳಾಗಬೇಕು: ರೇಣುಕಾ

ಶಹಾಪುರ : ಧರ್ಮಸ್ಥಳ ಮಂಜುನಾಥ ಸಂಘದ ವತಿಯಿಂದ ಮಹಿಳೆಯರು ಸಾಲ ಪಡೆದು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು…

3 hours ago

ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಮೂವರ ಸಾವು

ವಾಡಿ: ನಿಂತಿದ್ದ ಟ್ರ್ಯಾಕ್ಟರ್ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಸಂಜೆ ವಾಡಿ ಪೊಲೀಸ್ ಠಾಣೆ…

3 hours ago

ಮೊಹಮ್ಮದ್ ಪೈಗಂಬರ್ ಅವಹೇಳನ: ಯತಿ ನರಸಿಂಹಾನಂದ ಸ್ವಾಮಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಸೇಡಂ; ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿಗಳ ವಿರುದ್ಧ ಹಾಗೂ ಪ್ರಚೋದನ ಕಾರಿ ಹೇಳಿಕೆ ನೀಡಿರುವ…

3 hours ago

ದಕ್ಷ ಅಧಿಕಾರಿಗಳಿಗೆ ಮಣಿಕಂಠ ರಾಠೋಡ ಕಿರುಕುಳ

ಚಿತ್ತಾಪುರ; ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ವಿಧಾನಸಭೆ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಕಿರುಕುಳ, ಬ್ಲ್ಯಾಕ್…

4 hours ago

ದಸರಾ ಹಬ್ಬದ ನಿಮಿತ್ತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ಸೇಡಂ ರಸ್ತೆಯಲ್ಲಿರುವ ಶ್ರೀ ಇಂಗುಲಾಂಬಿಕ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಸರಾ ಹಬ್ಬದ ನಿಮಿತ್ತ…

4 hours ago

ಈಜು ಸ್ಪರ್ಧೆಯಲ್ಲಿ ಡಾ.ಮಲ್ಲಿಕಾರ್ಜುನ ಚಿಕ್ಕಪಾಟೀಲ ದ್ವಿತೀಯ ಸ್ಥಾನ

ಕಲಬುರಗಿ: ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಯೋಜಿಸಿದ್ದ ಈಜು ಸ್ಪರ್ಧೆಯಲ್ಲಿ ಹೆಚ್- ಗುಂಪಿನಲ್ಲಿ ಕಲಬುರಗಿಯ ಅಕ್ವಾ ಅಸೋಸಿಯೇಷನ್ ನ ಸದಸ್ಯರು…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420