ಬಿಸಿ ಬಿಸಿ ಸುದ್ದಿ

ಕವಿತೆ: ಸೂರ್ಯಣ್ಣನಸ್ತಂಗತ

ಸಂಜೆ ಹೊತ್ತಿಗೆ
ಕೆಂಪು ಸೂರ್ಯನ
ಅಸ್ತಂಗತ,
ಕತ್ತಲಾಗುವ ಮೊದಲೇ
ವ್ಯೋಮಾವ್ಯೋಮದಲ್ಲಿ
ಮೂಡಿತೊಂದು
ಬದ್ಧ ಬುದ್ಧತ್ವದ
ಹೊಸ ನಕ್ಷತ್ರ.

ಉಂಡ ನೋವು
ಕೆಂಡವಾಗಿ
ಕೆಂಪೇರಿತ್ತು ನಡೆ-ನುಡಿ,
ಭಿಡೆಯಿಲ್ಲದ
ಬಂಡಾಯದ
ಭೀಮ ಹೆಜ್ಜೆಯಲ್ಲಿ
ನಿತ್ಯದ ನಡೆಯೂ ಚೆನ್ನ,
ಸತ್ಯದ ನುಡಿಯೂ ಚೆನ್ನ.
ಅಂಬಲಿಯ ನೇಮವಂತೂ
ಚಿನ್ನ-ಅಮೃತಕ್ಕೂ ಚೆನ್ನ.

ಬಾಯ್ತುಂಬ
ತಮ್ಮ, ತಂಗಿ, ಅಕ್ಕ, ಅವ್ವರ
ಶಬ್ದಾರ್ಥಗಳ ಹುಗ್ಗಿ,
ಆದರೂ,
ಅಂಗಿ-ಅಂಗ- ಸಂಗ
ಸಹವಾಸಗಳಲ್ಲೂ
ಕೆಂಪಿನದೇ ಸುಗ್ಗಿ.

ಹಂಪನಾಗೆ ಕೊಟ್ಟ
ಪರ್ಯಾಯದ ಕಾಟ,
ಚಂಪಾ ಮನೆಯ
ಶತಮಾನದ ಊಟ,
ಸಾವಿರದ ಏಕಲವ್ಯರ
ಬೆರಳುಳಿಸಿ ಕಲಿಸಿದ
ನಿತ್ಯ ಪಾಠ-

ಗೆಣೆಯ- ಗೆಣತಿಯರ
ಮಹಾಕೂಟ!!
ಅವರವರ ಭಾವಕ್ಕೆ
ಥರಥರಗುಡಿಸಿಯೂ
ನಾಡಿನೆಲ್ಲರ ಬಾಯಲ್ಲೂ
ಉಳಿದ ಒಬ್ಬನೇ ಅಣ್ಣ
ನೀ ಚೆನ್ನಣ್ಣ,

ಮುಂಜಾನೆಯ ಬೆಳಕಾಗುವುದನ್ನೇ
ಕಾಯುತ್ತಿರುವೆ ಚೆನ್ನಣ್ಣ,
ನೋಡಬೇಕಿದೆ ನಾಳಿನ
ಸೂರ್ಯನಿಗೆ ಇರಬಹುದೆ
ನಿ ಬಿಟ್ಟು ಹೋದ ಕೆಂಪು ಬಣ್ಣ!!
— + —

ಡಾ. ಬಸವರಾಜ ಸಾದರ.
24-11-2019
emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ವಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

28 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago