ನಮ್ಮಲ್ಲಿ ಎರಡು ಕ್ಷೇತ್ರಗಳನ್ನು ವಿಶ್ವದ ಅತ್ಯಂತ ಸುಂದರ ತಾಣಗಳು, ರಮಣೀಯ ತಾಣಗಳು ಎಂದು ಗುರುತಿಸುತ್ತೇವೆ. ಒಂದು ಭಾರತದ ಉತ್ತರದಲ್ಲಿರುವ ಭೂಸ್ವರ್ಗವೆಂದು ಕರೆಯಲಾಗುವ ಕಾಶ್ಮೀರ. ಇನ್ನೊಂದು ಭಾರತದ ದಕ್ಷಿಣದ ಶಿವಮೊಗ್ಗೆ. ನಿಸರ್ಗದ ಮಡಿಲಿನ ಅಲ್ಲಿನ ಉಡುತಡಿ ಗ್ರಾಮದಲ್ಲಿ ಲಿಂಗಮ್ಮ ಹಾಗೂ ಓಂಕಾರ ದಂಪತಿಗಳಾಗಿದ್ದರು. ಅವರು ವ್ಯಾಪಾರಸ್ಥರಾಗಿದ್ದರು. ಮನೆಯೆಲ್ಲ ದವಸ ಧಾನ್ಯಗಳಿಂದ, ಮೈಯೆಲ್ಲ ಒಡೆವೆಗಳಿಂದ, ಮನೆ ತುಂಬ ಅನ್ನ ತುಂಬಿದ್ದರೂ ಅವ್ವಾ ಎನ್ನುವ ಮಗುವಿಲ್ಲದ ಕಾರಣ ಲಿಂಗಮ್ಮ ಸದಾಕಾಲ ಚಿಂತಾಕ್ರಾಂತಳಾಗಿದ್ದಳು.
ಆ ಚರ ಜಂಗಮರ ಮೂಲಕ ಬಸವಣ್ಣ, ವಚನ, ಅನುಭವ ಮಂಟಪದ ವೈಭವ ತಿಳಿದು ಅವರಿಗೆ ಹಣೆ ಮಣಿದ ದಂಪತಿಗಳು ತಮ್ಮ ಮಠದಲ್ಲಿಯೂ ಅನುಭವ ಮಂಟಪ ನಡೆಯಬೇಕು ಎಂದು ತಿಳಿಸುತ್ತಾರೆ. ಆಗ ಆ ಚರ ಜಂಗಮರು, ಬಸವಣ್ಣ ಕರುಣಿಸಿದ ಇಷ್ಟಲಿಂಗ, ಅವರು ಕೊಟ್ಟ ಲಿಂಗಾಯತವೆಂಬ ಪ್ರತಿವ್ರತಾ ಧರ್ಮ ಇವುಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತಾರೆ. ಶರಣರ ವಚನಗಳಿಂದ, ತತ್ವದ ವಿಚಾರಗಳಿಂದ ಪ್ರಭಾವಿತರಾದ ದಂಪತಿ, ತಮ್ಮ ಕುಲಗುರು ಲಿಂಗ ದೇವರು ಕೂಡ ಬಸವಣ್ಣವರಿಂದ ಅನುಗ್ರಹಿತರಾಗಿ ಬಂದಿದ್ದಾರೆ. ತಾವು ಕೂಡ ಗುರುಗಳಿಂದ ಲಿಂಗದೀಕ್ಷೆ ಪಡೆದುಕೊಳ್ಳುತ್ತಾರೆ. ಆಗ ಗುರುಗಳು, ಅಂಗದ ಮೇಲೆ ಲಿಂಗ ಬಂದ ಬಳಿಕ ಅನ್ಯ ದೈವಗಳತ್ತ, ಮೂರ್ತಿಗಳತ್ತ ನೋಡಿದರೆ ವ್ಯಭಿಚಾರವಾಗುತ್ತದೆ. “ಹಾಡಿದೊಡೆ ಎನ್ನೊಡೆಯನ ಹಾಡುವೆ, ಬೇಡಿದೊಡೆ ಎನ್ನೊಡೆಯನ ಬೇಡುವೆ”, ಬಸವಣ್ಣನೆ ತಂದೆ, ಬಸವಣ್ಣನೆ ತಾಯಿ ಎನ್ನುವಂತೆ ಬದುಕು ಸಾಗಿಸಬೇಕು ಎಂದು ಆಜ್ಞೆ ವಿಧಿಸುತ್ತಾರೆ.
ಅಂತೆಯೇ ಪ್ರತಿ ದಿನ ತ್ರಿಕಾಲ ಪೂಜೆ, ಧ್ಯಾನಗಳಲ್ಲಿ ತೊಡಗುತ್ತಾಳೆ. ಒಮ್ಮೆ ಗುರುಲಿಂಗ ದೇವರ ಧ್ಯಾನಾಸಕ್ತರಾಗಿ ಕುಳಿತಿದ್ದಾಗ ಅವರ ಎದುರು ಮಂಡಿಯೂರಿ ಕುಳಿತ ಲಿಂಗಮ್ಮನಿಗೆ, ಗುರುಗಳ ಮುಡಿಯಿಂದ ತನ್ನ ಉಡಿಗೆ ಬಿದ್ದ ಆ ಹೂ ಮಗುವಾಗಿ ಅಂಬೆಗಾಲಿಡುವುದು ಗೋಚರಿಸುತ್ತದೆ. ಮತ್ತೆ ಅದು ಅವರೆಡೆಗೆ ಹೋಗುವುದು ಕಂಡು ದುಃಖಿತಳಾಗುತ್ತಾಳೆ. ಇದನ್ನು ಕಂಡ ಗುರುಗಳು, ಮಗು ಹುಟ್ಟದೆ ಎನ್ನುವುದಕ್ಕೆ ಸಂತಸಪಡಬೇಕು ಹೊರತು ದುಃಖಪಡಬಾರದು.
ಎಂದು ಚೆನ್ನಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೇಳಿಲ್ಲವೇ? ಗುರುವಿಲ್ಲದವರಿಗೆ ಗುರಿ ಇರುವುದಿಲ್ಲ. ಬಸವಣ್ಣನಂಥ ಗುರುವನ್ನು ಪಡೆದವರು ಗುರಿ ಹೊಂದಿರುತ್ತಾರೆ. ಲಿಂಗ ಪೂಜಿಸಿ ಲಿಂಗವಾಗಬೇಕು. ಶಿವಪಥ ಅರಿಯಲು ಗುರುಪಥವೆ ಮೊದಲು. ಗುರು ತಾಯಿ ಇದ್ದಂತೆ; ದೇವರು ತಂದೆ ಇದ್ದಂತೆ! ಅಂತಹ ಗುರುವನ್ನು ಪಡೆಯದವರು ದಿಕ್ಕೆಟ್ಟು ಹೋಗುತ್ತಾರೆ. ನಾವೆಲ್ಲ ಒಂದು ರೀತಿಯಲ್ಲಿ ದಿಕ್ಕು ದೆಸೆಗೆಟ್ಟ ಮನುಜರು. ಜೀವಕೋಶದ ಶಕ್ತಿ ಇರುವವರೆಗೆ ತಿರುಗುವ ನಾವು ಒಂದೊಮ್ಮೆ ತಿರುಗುವುದನ್ನು ನಿಲ್ಲಿಸುತ್ತೇವೆ. ಈ ಹಿಂದೆ ನಾನು ಕಲ್ಯಾಣದಲ್ಲಿದ್ದಾಗ ಶರಣರು, “ನಿಮ್ಮೂರಲ್ಲಿ ಚಿತ್ಕಳೆ ಹುಟ್ಟುತ್ತದೆ ಎಂದು ಹೇಳಿದ್ದ ನೆನಪು. ಅದೀಗ ನನಸಾಗುತ್ತಿರಬಹುದು ಎಂಬುದನ್ನು ನೆನಪಿಸಿಕೊಂಡು ಲಿಂಗಮ್ಮನನ್ನು ಸಂತೈಸುತ್ತಾರೆ.
ಚರಜಂಗಮರಿಂದ, ಗುರುಲಿಂಗದೇವರಿಂದ ತನ್ನ ತನು,ಮನ,ಭಾವ ಶುದ್ಧಗೊಳಿಸಿಕೊಂಡ ಲಿಂಗಮ್ಮ, ಸದಾಕಾಲ ಇಷ್ಟಲಿಂಗ ಪೂಜೆಯಲ್ಲಿಯೇ ನಿರತಳಾಗುಳಾತ್ತಾಳೆ, ಬಸವಣ್ಣನನ್ನು ಕನವರಿಸುತ್ತಾಳೆ. ಕಲ್ಯಾಣದ ಶರಣರ ಕನಸು ಕಾಣುತ್ತಾಳೆ. ಇಷ್ಟಲಿಂಗ ಪೂಜೆಯೇ ಗರ್ಭಿಣಿಯ ಬಯಕೆ ಎನ್ನುವಂತೆ ಸದಾ ಪೂಜೆ, ಪ್ರಾರ್ಥನೆಯಲ್ಲಿ ತೊಡಗುತ್ತಾಳೆ. ಈ ಲಿಂಗಪೂಜೆಯ ಫಲದಿಂದಾಗಿ ಕೊನೆಗೊಮ್ಮೆ ಗರ್ಭ ಕಟ್ಟುತ್ತದೆ. ಆಗ ಲಿಂಗಮ್ಮ, ಬದುಕಿನಲ್ಲಿ ಸಂಕಟಗಳೇ ಇಲ್ಲ ಎನ್ನುವಂತೆ ಅತ್ಯಂತ ಗೆಲುವಾಗಿ ಕಂಡು ಬರುತ್ತಾಳೆ. ಗರ್ಭಸ್ಥ ಶಿಶುವಿರುವಾಗಲೇ ಶಿಕ್ಷಣ ಕೊಡಬೇಕು ಎನ್ನುವ ಲಿಂಗಾಯತ ಧರ್ಮದ ತತ್ವದಂತೆ ೮ನೇ ತಿಂಗಳಿಗೆ ಆಕೆಯ ಗರ್ಭಕ್ಕೆ ಲಿಂಗಧಾರಣೆ ಮಾಡಲಾಗುತ್ತದೆ.
ಅದು ಆ ವರ್ಷದ ದವನದ ಹುಣ್ಣಿಮೆಯ ದಿನ. ನಭದಲ್ಲಿ ಚಂದ್ರ ಹೊಳೆಯುತ್ತಿದ್ದ. ಇತ್ತ ಲಿಂಗಮ್ಮನ ಉದರದಲ್ಲಿ ಚಂದ್ರಮುಖಿ ಕೂಡ ಉದಯಿಸಿದಳು. ಬಟ್ಟಲು ಕಣ್ಣಿನ ಆ ಚಲುವೆ, ನಿಜಕ್ಕೂ ಕಾರಣಿಕ ಪುರುಷನಂತೆ ಕಂಡು ಬಂದಳು.
(ಸ್ಥಳ: ಎಚ್.ಸಿ.ಜಿ. ಕ್ಯಾನ್ಸರ್ ಆಸ್ಪತ್ರೆ ಎದುರಿಗೆ, ಖೂಬಾ ಪ್ಲಾಟ್, ಕಲಬುರಗಿ)
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…