ಕಲಬುರಗಿಯ ರಾಜಕೀಯ, ಸಮಾಜಿಕ ಧುರೀಣರಾದ ಅತ್ಯಂತ ಸಿದಾ-ಸಾದಾ, ಸರಳ, ಸಜ್ಜನ ವ್ಯಕ್ತಿ, ಏಳು ಅಡಿ ಎತ್ತರ, ಗೋಧಿ ಬಣ್ಣ, ಬಿಳಿ ಬಣ್ಣದ ಬಟ್ಟೆ , ಹೆಗಲು ಮೇಲೆ ಒಂದು ಟವೆಲ್ ಹಾಕಿಕೊಂಡು, ಹಣೆಯ ಮೇಲೆ ವಿಭೂತಿ, ಬಿಳಿಯ ಕಾರಿನ ನಂಬರ್ ಒಂದು,1,1,1,1 ನಲ್ಲಿ ಬರುವರು. ಎಲ್ಲಾ ಜನರು ನಮ್ಮ ಗೌಡರು ಬಂದರು ಎನ್ನುವ ಶಬ್ದಗಳು ಕೇಳುವ ಜನರ ಮಧ್ಯೆ 24×7 ಸಮಯ, 365 ದಿನಗಳು, ನಿತ್ಯ ನಿರಂತರ ಜನಸಾಮಾನ್ಯರ ಸೇವೆ ಮಾಡುವರು.
ನಮ್ಮ ಗೌಡರು, ಅಲ್ಲಮಪ್ರಭು ಪಾಟೀಲ ನೆಲೋಗಿ ಅವರು. ಇವರು ನಿತ್ಯ ನಿರಂತರ ಹೋರಾಟ, ಸಮಸ್ಯೆ, ಪರಿಹಾರ, ಜನರ ನಡುವೆ ಕೆಲಸ ಮಾಡುವ ಮೃದು ಮನಸ್ಸಿನ, ನೇರ, ದಿಟ್ಟ ಮಾತುಗಳ ಜೊತೆಗೆ, ಮಾತೃ ಹೃದಯದ ನಮ್ಮ ಗೌಡರು, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಕ ಮತ್ತು ರೈತ ನಾಯಕರು ಮಾನ್ಯ ಅಲ್ಲಮಪ್ರಭು ಪಾಟೀಲ ಜೀ ಅವರು. ಅಂದಿನ ಕಾಲದಲ್ಲಿ ಅಜಾತಶತ್ರು ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್. ಧರ್ಮಸಿಂಗ್ ಅವರು ಇವರಿಗೆ ರಾಜಕೀಯ ಗುರುಗಳು ಮತ್ತು ಅವರ ಗರಡಿಯಲ್ಲಿ ಬೆಳೆದ ರಾಜಕೀಯ ವ್ಯಕ್ತಿ ಅಲ್ಲಮಪ್ರಭು ಪಾಟೀಲ ನೆಲೋಗಿ ಅವರು. ಕಾಂಗ್ರೆಸ್ ಪಕ್ಷದಲ್ಲಿ ಮಂಡಲ ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು, ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಮತ್ತು ವಿಧಾನ ಪರಿಷತ್ ನ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಈಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕಾಂಗ್ರೆಸ್ ಪಕ್ಷದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು.
ನಮ್ಮ ಗೌಡರು. ಹೈದರಾಬಾದ್ ಕರ್ನಾಟಕ(ಕಲ್ಯಾಣ ಕರ್ನಾಟಕ) ಕಾಂಗ್ರೆಸ್ ಪಕ್ಷದ ನಾಯಕರಾದ ಮಾಜಿ ಕೇಂದ್ರ ಸಚಿವರು, ಹಿರಿಯರಾದ ಡಾ.ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಡಿ.ಕೆ.ಶಿವಕುಮಾರ, ಕೆಪಿಸಿಸಿ, ಅಧ್ಯಕ್ಷರು ದಿನೇಶ ಗುಂಡುರಾವ, ಕೆಪಿಸಿಸಿ ಕಾಯ೯ಧ್ಯಕ್ಷರು, ಈಶ್ವರ ಖಂಡ್ರೆ, ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಚಿರಪರಿಚಿತರು. ಇಡೀ ಕಲಬುರಗಿ ಜಿಲ್ಲೆಯ ಜನರು ಶ್ರೀ ಅಲ್ಲಮಪ್ರಭು ಪಾಟೀಲ ನೆಲೋಗಿ ಅವರಿಗೆ ಜನಸಾಮಾನ್ಯರ ಗುರುತಿಸಿ ಮಾತನಾಡುತ್ತಾರೆ. ನಾಳೆ 5, ರಂದು ಅವರ 64 ನೇಯ ಹುಟ್ಟು ಹಬ್ಬದ ಶುಭಾಶಯಗಳು.
ಬಿ.ಎಂ.ಪಾಟೀಲ ಕಲ್ಲೂರ,
9845268676.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…