ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನಕರಗದವರಲ್ಲಿ ಪುಷ್ಟಪವನೊಲ್ಲೆಯಯ್ಯ ನೀನು
ಹದುಳಿಗದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯ ನೀನು
ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ

ಅಕ್ಕನ ಜೀವನ ಒಂದು ದನಿಕ್ಕೆ ರೂಪುಗೊಂಡದ್ದಲ್ಲ. ತಕ್ಷಣಕ್ಕೆ ಆಕಾಶದಿಂದ ಬಿದ್ದ ಮಳೆ ಹನಿಯೂ ಅಲ್ಲ. ಮಳೆಹನಿಯೊಂದು ಸಿಂಪಿನಲ್ಲಿ ಬಿದ್ದು ರತ್ನವಾದಂತೆ ಅವಳ ಬದುಕು.ಒಂದು ಸುದಂರ, ಉನ್ನತ ಉಜ್ಜೀವನ ಅವಳದು. ಹಂಬಲದುಂಬಿದ ಪ್ರಾರ್ಥನೆ, ಸತ್ಯ, ತ್ಯಾಗ, ಪ್ರೀತಿಯಿಂದ ರೂಪುಗೊಂಡದ್ದು ಅವಳ ಜೀವನ. ಯಶಸ್ಸು ನಿರಾಯಾಸವಾಗಿ ಸಿಗುವುದಿಲ್ಲ. ಅಕ್ಕನ ಯಶಸ್ಸಿನ ಹಿಂದೆ ಬಹು ದೊಡ್ಡ ಪರಿಶ್ರಮವಿದೆ. ಅರಮನೆಯಲ್ಲಿದ್ದ ಅಕ್ಕ ಸದಾ ಧ್ಯಾನಮಗ್ನಳಾಗಿ, ಲಿಂಗಪೂಜೆಯಲ್ಲಿ ನಿರತಳಾಗಿದ್ದರೂ ಅದೇನೋ ಕೊರತೆ, ಅದೆಂಥದೋ ತಳಮಳ ಕಾಡುತ್ತಿತ್ತು.

ಅಕ್ಕನ ವೈರಾಗ್ಯದ ಜೀವನ ಕಂಡ ಮಂತ್ರಿ ವಸಂತಕನಿಗೆ ಮಹಾದೇವಿ ಒಮ್ಮೊಮ್ಮೆ ತನ್ನ ಮಗಳಂತೆ ಕಂಡು ಬರುತ್ತಿದ್ದಳು. ಸಾಧನೆಗೆ ಮುಖ ಮಾಡಿ ನಿಂತಿದ್ದ ಅಕ್ಕನಿಗೆ ಬಿದ್ದಷ್ಟು ಪುಟಿದೇಳುವ ಉತ್ಸಾಹ, ಹುಮ್ಮಸ್ಸು ಇತ್ತು. ಹಗಲೆನ್ನೆ, ಇರುಳೆನ್ನೆ.. ಮನ ಘನವಾದುದಿಲ್ಲ” ಎಂದು ವಚನ ಬರೆಯುತ್ತಾಳೆ. ಕತ್ತಲೆಯಲ್ಲಿ ಕನ್ನಡಿ ನೋಡಿ ಕಳವಳಗೊಂಡಂತಾದ ಅಕ್ಕ ಬಸವಣ್ಣನವರನ್ನು ನೆನೆಯುತ್ತ, ನೆನೆಯುತ್ತ ಹರನೇ ತನ್ನ ರೂಪ ತೋರಲು ಬಂದ ಬಸವ ಕರುಣೆಗಾಗಿ ಬಸವನ ನೆನೆ ಮನವೆ, ಸಂಗನ ಬಸವನ ನೆನೆ ಮನವೆ ಎಂದು ಆರ್ತತೆಯಿಂದ ಕರೆಯುತ್ತಾಳೆ. ಗುರುವೆ ನಿನ್ನಡಿಗೆ ಬಯಸುವ ಹೂ ಮಣ್ಣಲ್ಲಿ ಬಿದ್ದು ದೂಲಾಗುವ ಮುನ್ನ ಕೌಶಿಕನ ಮುಂದೆ ಆಹಾರವಾಗುವ ಮುಂಚೆ ಎತ್ತಿಕೋ ಎಂದು ಬೇಡಿಕೊಳ್ಳುತ್ತಾಳೆ.

ಅರಮನೆಯಿಂದ ತವರು ಮನೆಗೆ ಹೋಗಿದ್ದ ಲಿಂಗರತಿ (ಮದನರತಿ) ಉಡುತಡಿಯ ಚರ ಜಂಗಮರಿಂದ ಕೇಳಿ ಪಡೆದ ತಾಡೋಲೆಯೊಂದನ್ನು ಅಕ್ಕಮಹಾದೇವಿಯ ಕೈಗಿತ್ತಾಗ ಅದನ್ನು ಓದಿ ಆನಂದವಾಯಿತು. ಅವರು ಎಲ್ಲಿಯವರು? ಇಲ್ಲಿಗ್ಯಾಕೆ ಬಂದಿದ್ದಾರಂತೆ? ಇನ್ನೆಷ್ಟು ದಿನ ಅಲ್ಲಿರುತ್ತಾರೆ ಎಂದೆಲ್ಲ ಕೇಳಿ ತಿಳಿದಳು. ಅವರಿಗೆ ಮುಖ್ಯವಾದ ಕೆಲಸವೊಂದು ಇದೆಯಂತೆ! ಅದನ್ನು ಮುಗಿಸಿಕೊಂಡೇ ಹೋಗುತ್ತಾರಂತೆ ಎಂದು ಲಿಂಗರತಿ ಹೇಳಿದಾಗ ಮಹಾದೇವಿಗೆ ಖುಷಿಯೋ ಖುಷಿ. ಆನಂದವೋ ಆನಂದ. ಅವಳ ಮನಸ್ಸು ಪ್ರಫುಲ್ಲಿತವಾಗುತ್ತದೆ.

ವಸಂತಕನ್ನು ಕರೆ ಕಳುಹಿಸಿ, ಕಲ್ಯಾಣದ ಜಂಗರನ್ನು ನೋಡುವ ಆಸೆಯಿದೆ. ನಿಮ್ಮ ರಾಜನಿಗೆ ಹೇಳಿ ಅವರನ್ನು ಅರಮನೆಗೆ ಕರೆಯಿಸಿ ಎಂದು ಹೇಳುತ್ತಾಳೆ. ಇತ್ತ ತಾನು ಕೃಷಿ, ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ, ತನು ಕರಗದವರ ಮುಂದೆ ಮುಂತಾದ ವಚನಗಳನ್ನು ಹಾಡುತ್ತ ಅಣ್ಣ ಬಸವಣ್ಣನವರು ಜಗತ್ತಿಗೆ ಪ್ರೀತಿಯ ಪಾಠ ಹೇಳಿಕೊಡಲು ಬಂದಿದ್ದಾರೆ. ಅವರಿಗಿಂತ ಮುಂಚೆ ಇವನಾರವ, ಇವನಾರವ ಎನ್ನುವಂತಿದ್ದ ಸಮಾಜದಲ್ಲಿ ಇವನಮ್ಮವ, ಇವ ನಮ್ಮವ ಆಯಿತು. ಕಾಯಕದಿಂದ ಈ ಜಗತ್ತನ್ನು ಸುಂದರಗೊಳಿಸಿದಾತ. ವ್ರತ ತಪ್ಪಿದಡೆ ಸಹಿಸಬಹುದು. ಕಾಯಕ ತಪ್ಪಿದಡೆ ಸಹಿಸಲಾಗದು ಎಂದು ಶರಣರು ಹೇಳಿದ್ದು ನಿಜ ಎಂದುಕೊಂಡು ಅಣ್ಣ ಬಸವಣ್ಣ ಹಾಗೂ ವಚನಕಾರರನನ್ನು ಮನದಲ್ಲಿ ಕೊಂಡಾಡಿದಳು.

ಅದೊಂದು ದಿನ ಕಲ್ಯಾಣದ ಜಂಗಮರು ಮನೆಗೆ ಅರಮನೆಗೆ ಬಂದರು. ಅವರನ್ನು ಕಂಡ ಕೂಡಲೇ ಆನಂದತುಂದಿಲಳಾದ ಅಕ್ಕ “ಶರಣು-ಶರಣಾರ್ಥಿ” ಹೇಳಿದಳು. ಪೂಜೆ-ಪ್ರಸಾದ ಮಾಡಿದ ಜಂಗಮರು, ಬಸವಣ್ಣ ದೇಹಧಾರಿ. ಜಡ ಮನುಷ್ಯರಲ್ಲಿ ಚೈತನ್ಯ ತುಂಬಿದ ಸದ್ಗುರುದೇವ. ಘನಲಿಂಗದೇವ. ಭ-ಎಂಬಲ್ಲಿ ಎನ್ನ ಭವ ಹರಿಯುತ್ತು. ಸ-ಎಂಬಲ್ಲಿ ಸರ್ವಜ್ಞಾನಿಯಾದೆನು. ವ-ಎಂದು ವಚಿಸುವೊಡೆ ಚೈತನ್ಯಾತ್ಮಕನಾದೆನು, “ಗಿಳಿಯ ಹಂಜರವನ್ನಿಕ್ಕಿ…” ಎಂಬಿತ್ಯಾದಿ ವಚನ ಹಾಗೂ ಅವರ ವ್ಯಕ್ತಿತ್ವವನ್ನು ಹಾಡಿ ಹೊಗಳಿದರು ಮಾತ್ರವಲ್ಲ ಕೈಲಾಸವೆ ಕಲ್ಯಾಣಕ್ಕಿಳಿದಿದೆ. ನಿಮ್ಮೊಬ್ಬರ ಕೊರತೆ ಮಾತ್ರ ಎದ್ದು ಕಾಣುತ್ತಿದೆ ಎಂದರು. ಈ ಸಂಗತಿಯನ್ನು ತಿಳಿದ ಅಕ್ಕನಿಗೆ ರೋಮಾಂಚನವಾಗುತ್ತದೆ.

ಪ್ರತಿ ಎರಡ್ಮೂರು ದಿನಕ್ಕೊಮ್ಮೆ ಅರಮನೆಗೆ ಬರುತ್ತಿದ್ದ ಕಲ್ಯಾಣದ ಜಂಗಮರ ವಚನೋಪದೇಶ ಕೇಳಿ ಧ್ಯಾನಮಗ್ನಳಾಗಿರುತ್ತಿದ್ದ ಅಕ್ಕ ಮೈಮರೆತು ಹಾಡುತ್ತಿದ್ದಳು. ಒಂದೊಮ್ಮೆ ಮೈಮೇಲಿನ ಸೆರಗು ಜಾರಿದ್ದರೂ ಚನ್ನಮಲ್ಲಿಕಾರ್ಜುನನ ಧ್ಯಾನದಲ್ಲಿ ಮುಳಗಿದ್ದಳು. ಇದನ್ನು ಮೇಲಿನಿಂದಲೇ ನೋಡೊದ ಕೌಶಿಕ, ಬಹುಶಃ ಈ ಜಂಗಮರಲ್ಲೆ ಒಬ್ಬಾತ ಚನ್ನಮಲ್ಲಿಕಾರ್ಜುನ ಇರಬೇಕು. ಅಂತೆಯೇ ಮಹಾದೇವಿ ಮೈಮರೆತಿದ್ದಾಳೆ ಎಂದುಕೊಂಡು ಸಿಟ್ಟಿಗೆದ್ದು ಕೆಳಗಿಳಿದು ದಡದಡನೆ ಬರುತ್ತಾನೆ. ಹೆದರಿದ ಅಕ್ಕ ಹರಿಣಿಯಂತಾಗುತ್ತಾಳೆ.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ

(ಸ್ಥಳ:ಎಚ್.ಸಿ.ಜಿ.ಆಸ್ಪತ್ರೆ ಎದುರು,ಖೂಬಾ ಪ್ಲಾಟ್,ಕಲಬುರಗಿ)

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

3 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

3 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

3 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

3 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

3 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420