ಸುರಪುರ: ನಗರ ಸೇರಿದಂತೆ ತಾಲೂಕಿನಾದ್ಯಂತ ಎಳ್ಳು ಅಮಾವಾಸ್ಯೆಯನ್ನು ರೈತ ಸಮುದಾಯ ಅತ್ಯಂತ ಸಂಭ್ರಮ ಸಡಗರದಿಂದ ಚರಗ ಚೆಲ್ಲುವುದರ ಮೂಲಕ ಹಬ್ಬವನ್ನು ಆಚರಿಸಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅತ್ಯಂತ ಸಂಭ್ರಮ ತರುವ ಹಬ್ಬವೆಂದರೇ ಎಳ್ಳು ಅಮಾವಾಸ್ಯೆ, ಗ್ರಾಮೀಣ ಭಾಗದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬವೂ ಇಂಗಾರು ಹಂಗಾಮಿನ ವೇಳೆ ಆಗಮಿಸುವದರಿಂದ ರೈತರು ಬಿತ್ತುವ ಫಸಲುಗಳಾದ ಜೋಳ, ಗೋದಿ, ನೆಲ ಗಡಲೆ, ಇತ್ಯಾದಿ ಬೆಳೆಗಳು ಅತ್ಯಂತ ಉಲುಸಾಗಿ ಬೆಳೆಯಲೆಂದು ಚರಗ ಚೆಲ್ಲಿ ಭೂಮಿಗೆ ಪೂಜೆ ಸಲ್ಲಿಸಿ ಆಚರಿಸುವುದು ಸಂಪ್ರದಾಯವಾಗಿದೆ. ಮುಂಜಾನೆ ಮಹಿಳೆಯರು ಮಕ್ಕಳು ಸಂಭ್ರಮ ಸಡಗರದಿಂದ ಹೊಸ ಹೊಸ ಬಟ್ಟೆಗಳನ್ನು ತೊಟ್ಟು, ವಿವಿಧ ಆಹಾರ ಪದಾರ್ಥಗಳಾದ ಮೆಂತ್ಯೆ ಕಡುಬು, ಭರ್ತ, ಭಜ್ಜಿ, ಶೇಂಗಾದ ಹೊಳಿಗೆ, ಕರಿಗಡುಬು, ನುಚ್ಚು, ಅಂಬಲಿ ಹುಗ್ಗಿ ತಯಾರಿಸಿಕೊಂಡು ತಮ್ಮ ತಮ್ಮ ಹೊಲ ಗದ್ದೆಗಳಿಗೆ ತೆರಳಿ ಬನ್ನಿ ಮರದ ಹತ್ತಿರ ಕಲ್ಲುಗಳನ್ನು ಹಾಗೂ ಲಕ್ಷ್ಮೀಯನ್ನು ಕೂಡಿಸಿ ಕುಪ್ಪಸ, ಬಳೆ ತೊಡಿಸಿ, ಅರಿಶಿಣ ಕುಂಕುಮ ಹಾಗೂ ಹೂವನ್ನು ಮುಡಿಸಿ ಭೂದೇವಿಗೆ ಪೂಜಿಸಿದ ನಂತರ ತಮ್ಮ ಹೊಲದಲ್ಲಿ ಬೆಳೆದ ಫಸಲು ಸಮೃದ್ಧವಾಗಿ ಬರಲಿ ಎಂದು ಆಶಿಸಿ ಹೊಲದ ನಾಲ್ಕು ದಿಕ್ಕುಗಳಲ್ಲಿ ಚರಗವನ್ನು ಚೆಲ್ಲಿದರು.
ಇದೇ ವೇಳೆ ಸುತ್ತಮುತ್ತಲಿನ ಬಂಧು ಮಿತ್ರರನ್ನು, ಸಂಬಂಧಿಕರನ್ನು ಕರೆದು ಸಾಮೂಹಿಕ ಸಹಪಂಕ್ತಿ ಭೋಜವನ್ನು ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ಹೆಮನೂರು ಗ್ರಾಮದ ಪ್ರಗತಿ ಪರ ರೈತರಾದ ಚಂದ್ರಯ್ಯಗೌಡ ಹೇಳಿದರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…