ಅಲ್ಲಮನ ಕಟುವಾದ ಪ್ರಶ್ನೆಗಳಿಗೆ ಅಷ್ಟೇ ಗಟ್ಟಿಯಾಗಿ ದಿಟ್ಟತನದಿಂದ ಉತ್ತರಿಸಿದ ಮಹಾದೇವಿಯ ಅಧ್ಯಾತ್ಮದ ಔನ್ನತ್ಯ ಕಂಡು ಅಲ್ಲಮನಿಗೂ ಅಕ್ಕನ ಹಸಿವು ಹೌದೆನಿಸಿ ನಮೋ! ನಮೋ!! ಎಂದು ಕೈ ಮುಗಿದರಲ್ಲದೆ ತ್ರಿಕೂಟ ಗಿರಿಯಾಚೆ ಬಯಲಿದೆ. ಅಲ್ಲಿಗೆ ನಡೆ ತಾಯಿ ಎಂದು ಮಾರ್ಗದರ್ಶನ ಸಹ ಮಾಡುತ್ತಾರೆ. ಎಲ್ಲ ಶರಣರು ಸೇರಿ ಅಕ್ಕನನ್ನು ಬೀಳ್ಕೊಡುತ್ತಾರೆ.
ಶರಣರ ದರ್ಶನದಿಂದ ಜೀವನ ಪಾವನ ಮಾಡಿಕೊಂಡ ಅಕ್ಕನಿಗೆ ಮತ್ತೆ ಹಳೆಯ ನೆನಪುಗಳು ಬಂದವು. ಕಲ್ಯಾಣಕ್ಕೆ ಬರುವ ಮುನ್ನ ಕಿನ್ನರಿ ಬೊಮ್ಮಯ್ಯ, ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳು ಬಿಡಲಿಲ್ಲ. ಅವರ ಪ್ರಶ್ನೆಗಳಿಗೆ ಯೋಧನಂತೆ, ಬಟ್ಟದಂತೆ, ಭಕ್ತನಂತೆ ಉತ್ತರಿಸಿದ್ದಳು. ಶರಣರ ಸಂಗದಲ್ಲಿದ್ದ ಆಕೆಗೆ ಅಲ್ಲಿಂದ ತೆರಳಲು ಮನಸ್ಸು ಒಪ್ಪಲೇ ಇಲ್ಲ. ಆದರೂ ಶರಣರನ್ನು ಅಗಲುವುದಕ್ಕಿಂತ ಸಾವೆ ಪರಲೇಸು ಎನ್ನುವಂತಾಯಿತು ಆಕೆಗೆ. ಆದರೂ ತನ್ನ ಜೀವನದ ಮುಖ್ಯ ಉದ್ದೇಶಕ್ಕಾಗಿ ಅಲ್ಲಿಂದ ಕದಳಿಯೆಡೆಗೆ ತೆರಳಿದಳು.
“ಕದಳಿಯೆಂಬುದು ತನು, ಕದಳಿಯೆಮಬುದು ಮನ, ಕದಳಿಯೆಂಬುದು ವಿಯಂಗಳು. ಕದಳಿಯೆಂಬುದು ಭವಘೋರಾರಣ್ಯ. ಈ ಕದಳಿಯೆಂಬುದು ಗೆದ್ದು ತವೆ ಬದುಕಿ ಬಂದು, ಕದಳಿಯ ಬವನದಲ್ಲಿ ಭವಹರನ ಕಂಡೆನು. ಭವ ಗೆದ್ದು ಬಂದ ಮಗಳೆ ಎಂದು ಕರುಣದಿ ತೆಗೆದು ಬಿಗಿಯಪ್ಪಿದಡೆ, ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು” ಎನ್ನುವ ಅಕ್ಕನ ಈ ವಚನ ಅಕ್ಕನ ಕದಳಿವನದ ವಾಸ ಮತ್ತು ಅನುಭವವನ್ನು ವಿವರಿಸುತ್ತದೆ.
ಹೀಗೆ ಒಂದು ದಿನ, ಲಿಂಗಧ್ಯಾನದಲ್ಲಿದ್ದು, ಮರದುಯ್ಯಾಲೆಯಲ್ಲಿ ಕುಳಿತು ಹಾಡು ಹಾಡುತ್ತಿರುವಾಗ ಧಡೂತಿ ವ್ಯಕ್ತಿ ಹಾಗೂ ಆತನ ಜತೆ ಹೆಣ್ಣುಮಗಳೊಬ್ಬಳು ತನ್ನ ಕಡೆಯೇ ಬರುತ್ತಿರುವುದನ್ನು ಗಮನಿಸಿದಳು. ಇದೆಲ್ಲವನ್ನೂ ದಾಟಿ ಬಂದರೆ ಕದಳಿ ಹೊಕ್ಕರೆ ಇಲ್ಲಿಯೂ ಮತ್ತದೆ ಕಾಟ ಎನ್ನುತ್ತಿರುವಾಗಲೇ ಆ ವ್ಯಕ್ತಿಗಳು ಅಕ್ಕನ ಕಾಲಿಗೆರಗಿ ತಾನು ಕೌಶಿಕ, ಈಕೆ ಲಿಂಗರತಿ ಎಂದು ಹೇಳಿ ಪರಿಚಯ ಮಾಡಿಕೊಳ್ಳುತ್ತಾರೆ.
ಗುರು ಲಿಂಗದೇವರಿಂದ ಲಿಂಗದೀಕ್ಷೆ ಪಡೆದು ತಮ್ಮ ಕ್ಷನಮಾಪಣೆಗೆ ಬಂದಿದ್ದೇನೆ. ನನ್ನನ್ನು ಈ ಭವ ಬಂಧನದಿಂದ ಮುಕ್ತ ಮಾಡು ಎಂದು ಅಂಗಲಾಚಿದಾಗ ಅಕ್ಕ ಅವನನ್ನು ಕ್ಷಮಿಸುತ್ತಾಳೆ. ತಾನು ಮತ್ತೊಂದು ದೂರದ ಬೆಟ್ಟದ ತುದಿಯಲ್ಲಿ ಕುಳಿತು ಕೈಯಲ್ಲಿ ಲಿಂಗವಿಡಿದು ಲಿಂಗಾನುಭಾವಿಯಾಗಿ ಕಾಯ ಜೀವದ ಹೊಲಿಗೆ ಬಿಚ್ಚಿ ಇಚ್ಛಾಮರಣಿಯಾಗಿ ಬಯಲಲ್ಲಿ ಬಯಲಾಗಿ ಲೋಕಕ್ಕೆ ಬೆಳಗಾಗುತ್ತಾಳೆ.
ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)
ಕಲಬುರಗಿ: ಈ ಕಥಾ ಸಂಕಲವನ್ನು ಓದಿದರೆ ಮಾತು ಬಾರದ ಮೌನ ಆವರಿಸುತ್ತದೆ. ಉತ್ತರ ಕರ್ನಾಟಕದ ಜನ ಮತ್ತೆ ಮತ್ತೆ ಬರೆದು…
ಕಲಬುರಗಿ: ವಿಶ್ವ ಹಿಂದೂ ಪರಿಷತ್, ಕಲಬುರಗಿ ಮಹಾನಗರ, ಗೋರಕ್ಷಾ ವಿಭಾಗ ವತಿಯಿಂದ ಸೆ.30.ರಂದು ಬೆಳಿಗ್ಗೆ 10.ರಿಂದ ಸಂಜೆ 5ರ ವರೆಗೆ…
ಕಲಬುರಗಿ: “ಸ್ವಚ್ಚತೆಯೇ ಆರೋಗ್ಯದ ಮೂಲ ಮಂತ್ರ” ಎಂದು ಶಾಂತಾ ಆಸ್ಪತ್ರೆಯ ವೈದ್ಯೆ ಡಾ. ಅಂಬಿಕಾ ಪಾಟಿಲ್ ಹೇಳಿದರು. ಇಂದು ಅವರು ಕರ್ನಾಟಕ…
ಅಫಜಲಪುರ: ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ಅಫಜಲಪೂರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರಾದೇಶಿಕ ಕೇಂದ್ರ ಕಲಬುರಗಿಯ…
ಆಳಂದ; ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಗಳಿಗೆ ಮಂಜೂರಿಯಾಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಬಿಜೆಪಿ ಬೆಂಬಲಿತ…
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಹಲವು ಹಿರಿಮೆಗಳಿಗೆ ಪ್ರಸಿದ್ಧಿಯಾಗಿದೆ. ಸ್ವತಂತ್ರ ಪೂರ್ವದ ಇತಿಹಾಸ ನೋಡಿದರೆ ಈ ಪ್ರದೇಶದಲ್ಲಿ ಅನೇಕ ರಾಜ…