ಸುರಪುರ: ನರೇಂದ್ರ ಮೋದಿಯವರು ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ ಯೋಜನೆಯ ಕಾರ್ಡುಗಳ ವಿತರಣೆಯಲ್ಲಿ ರಾಜುಗೌಡ ಗ್ರೌಂಡ್ ವರ್ಕ ಟೀಂ ಇದುವರೆಗೆ ಮೂವತ್ತು ಸಾವಿರ ಜನರಿಗೆ ಕಾರ್ಡುಗಳ ಮಾಡಿ ಕೊಡುವ ಮೂಲಕ ಉತ್ತಮವಾದ ಸಾಧನೆ ಮಾಡಿದೆ ಎಂದು ಟೀಂ ಮುಖಂಡ ಮಲ್ಲಿಕಾರ್ಜುನರೆಡ್ಡಿ ಕೋಳಿಹಾಳ ತಿಳಿಸಿದ್ದಾರೆ.
ತಾಲೂಕಿನ ವಾಗಣಗೇರಾ ಗ್ರಾಮದಲ್ಲಿ ಅನೇಕ ಜನರಿಗೆ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫಲನುಭವಿಗಳಿಗೆ ಉಚಿತವಾಗಿ ಕಾರ್ಡುಗಳ ಮಾಡಿಕೊಡುವ ಸಂದರ್ಭದಲ್ಲಿ ಮಾತನಾಡಿ,ಇದುವರೆಗೆ ತಾಲೂಕಿನ ಹುಣಸಗಿ, ಕೊಡೇಕಲ್,ಪೇಠ ಅಮ್ಮಾಪುರ,ಅರಿಕೇರಿ,ಕಕ್ಕೇರಿ,ಖಾನಾಪುರ ಎಸ್.ಹೆಚ್ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ವ್ಯಾಪ್ತಿ ಹಾಗು ಸುರಪುರ ನಗರ ಸೇರಿ ಇದುವರೆಗೆ ಮೂವತ್ತು ಸಾವಿರ ಆಯುಷ್ಮಾನ್ ಭಾರತ ಯೋಜನೆಯ ಕಾರ್ಡುಗಳನ್ನು ಉಚಿತವಾಗಿ ಮಾಡಿ ಕೊಡಲಾಗಿದೆ.
ಅಲ್ಲದೆ ಮೂರು ನೂರಾ ಆರು ಜನರಿಗೆ ಕೃಷಿ ಸಮ್ಮಾನ ಯೋಜನೆ ಕಾರ್ಡುಗಳು, ಪ್ರಧಾನಮಂತ್ರಿ ಫಸಲ ಭೀಮ್ ಯೋಜನೆಯಲ್ಲಿ ಎರಡು ನೂರಾ ಎಪ್ಪತ್ಮೂರು ಜನರಿಗೆ ,ಪ್ರಧಾನಮಂತ್ರಿ ಜೀವನಜ್ಯೋತಿ ಯೋಜನೆಯಲ್ಲಿ ಮೂವತ್ತೊಂದು ಜನರಿಗೆ ಹೀಗೆ ಒಟ್ಟು ಮೂವತ್ತು ಸಾವಿರದ ಎರಡು ನೂರಾ ಅರವತ್ತೊಂದು ಜನರಿಗೆ ವಿವಿಧ ಯೋಜನೆಗಳ ಫಲಾನುಭವಿಗಳಾಗಲು ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಜುಗೌಡ ಗ್ರೌಂಡ್ ವರ್ಕ ಟೀಂ ನ ಅನೇಕ ಸದಸ್ಯರುಗಳಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…