ಎಂದಿನಂತೆ ಮತ್ತೆ ಇಂದು ಡಿಸೆಂಬರ್ ಮೂವತ್ತೊಂದರ ಮಧ್ಯರಾತ್ರಿ! ಬಹಳ ಮಂದಿ ಪಾಲಿಗದು ಮದ್ಯರಾತ್ರಿಯೇ ಆಗಿರ್ತದೆ. ನಟ್ಟ ನಡುರಾತ್ರಿ ಹನ್ನೆರಡು ಗಂಟೆ ಬಾರಿಸುತ್ತಿದ್ದಂತೆ ಮದ್ಯರಾತ್ರಿಗರ ಹುಳಿಮದ್ಯದ ಹುಳೀ ಕಿರುಚಾಟಗಳದ್ದೇ ಗೌಜು ಗದ್ದಲ !! ನಗರವಾಸಿಗಳ ತುಂಬೆಲ್ಲ. ಈ ರೋಗ ಈಗೀಗ ಹಳ್ಳಿಗಳಿಗೂ ಹಬ್ಬಿದೆ. ಇದು ಹೊಸವರ್ಷದ ಸ್ವಾಗತವಂತೆ.! ಟೀವಿಗಳ ತುಂಬೆಲ್ಲ ಇವುಗಳದ್ದೇ ಅಬ್ಬರದ ಪ್ರಚಾರ. ಲಿಂಗಭೇದ ಮರೆತ ಕುಡಿತ, ಕುಣಿತಗಳಿಂದಾಗಿ ಅವಗಡಗಳು ಘಟಿಸಬಾರದೆಂದು ಪೊಲೀಸರ ಗಸ್ತು!!

ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವರ್ಷಕ್ಕೆ ವಿದಾಯ, ಹೊಸದಕ್ಕೆ ಸ್ವಾಗತ. ತರಹೇವಾರಿ ಥ್ರಿಲ್ಲಿಂಗ್ ಭ್ರಮೆಯ ಡ್ರಿಲ್ಲಿಂಗ್ ಪೋಷ್ಟಗಳು. ಹೊಸ ಡೈರಿ, ಕ್ಯಾಲೆಂಡರ್ ಗಳು, ಈಗೀಗ ಹೊಸ ಗೆಳೆತನಗಳು. ಇವು ಯಾವೂ ನನಗೆ ಹೊಸ ವರ್ಷದ ಖುಷಿಯನ್ನು ಇದುವರೆಗೆ ನೀಡಿಲ್ಲ.

ನನ್ನ ಹಾಗೆ ಅನೇಕರಿಗೂ ನೀಡಿಲ್ಲದಿರಬಹುದು.? ಇನ್ನು ಕೆಲವರಂತೂ ” ನಾವು ಭಾರತೀಯರು ಅದರಲ್ಲೂ ಹಿಂದೂಗಳಿಗೆ ಯುಗಾದಿಯೇ ಹೊಸವರ್ಷ” ಮುಂತಾಗಿ ಸಂಸ್ಕಾರ ವರಸೆಯ ಕಮೆಂಟ್ಸ್ ಮಾಡುತ್ತಾರೆ. ಹೋಗಲಿ ಉಗಾದಿಗಾದರೂ ಅಂಥದೊಂದು‌ ತಾಜಾ ತಾಜಾ ಹುರುಪಿನ ಹೊಸ ವರ್ಷಾಚರಣೆಯ ಖುಷಿ ಉಕ್ಕಿ ಹರಿದೀತೆಂದರೆ, ಹುಂ,ಹೂಂ ಅಲ್ಲೂ ಇಲ್ಲ. ನಮ್ಮ ಕೂಡು ಕುಟುಂಬ ಪ್ರೀತಿಯ ಸಹಜ ಸಂತೃಪ್ತ ಬದುಕು ಹೈಜಾಕ್ ಆಗಿದೆ.

ಹಾಗಾದರೆ ಹ್ಯಾಪಿ ನ್ಯೂ ಈಯರ್ ಅಂದರೇನು? ಇಲ್ಲದಿರುವ, ಸಹಜವಾಗಿ ಉಂಟಾಗದಿರುವ ಸಂತಸ ಸಂಭ್ರಮಗಳ ಭ್ರಮೆಯ ಸಮೂಹಸನ್ನಿ ಸೃಷ್ಟಿಸುವುದೇ ಭಾಗಶಃ ನಿಜ. ಮತ್ತೆ ಮತ್ತೆ ಹೊಸ ವರ್ಷಾಚರಣೆ ಎಂಬ ಮಾಯಾವಿಯ ಹಿಂದೆ ಅಮಲಿನ ಲೋಕದ ಹುನ್ನಾರವೇ ಇದೆಯೆಂಬುದನ್ನು ಅಲ್ಲಗಳೆಯಲಾಗದು. ಅದೊಂದು ಬಿಸಿನೆಸ್ ಮ್ಯಾನೇಜಮೆಂಟ್ ಜಗದ ಹಿಡನ್ ಲೆಕ್ಕಾಚಾರ. ಗೋಳೀಕರಣ ಲೋಕದ ಬಂಡವಾಳಿಗರ ವ್ಯಾಪಾರಿ ಹುನ್ನಾರವಲ್ಲದೇ ಇನ್ನೇನೂ ಇಲ್ಲ. ಸಾಲಮಾಡಿಯಾದರೂ ತುಪ್ಪ ತಿನ್ನು ಎಂಬ ಹಳೆಯ ವ್ಯಸನದ ಮುಂದುವರಿದ ಹೊಸಭಾಗ… ನೀವೇನಂತೀರಿ..?

ಮಲ್ಲಿಕಾರ್ಜುನ ಕಡಕೋಳ
ಮೊ : 93410 10712
emedialine

Recent Posts

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

11 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

11 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

11 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

11 hours ago

ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…

11 hours ago

ಜುಡೋಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420