ಎಂದಿನಂತೆ ಮತ್ತೆ ಇಂದು ಡಿಸೆಂಬರ್ ಮೂವತ್ತೊಂದರ ಮಧ್ಯರಾತ್ರಿ! ಬಹಳ ಮಂದಿ ಪಾಲಿಗದು ಮದ್ಯರಾತ್ರಿಯೇ ಆಗಿರ್ತದೆ. ನಟ್ಟ ನಡುರಾತ್ರಿ ಹನ್ನೆರಡು ಗಂಟೆ ಬಾರಿಸುತ್ತಿದ್ದಂತೆ ಮದ್ಯರಾತ್ರಿಗರ ಹುಳಿಮದ್ಯದ ಹುಳೀ ಕಿರುಚಾಟಗಳದ್ದೇ ಗೌಜು ಗದ್ದಲ !! ನಗರವಾಸಿಗಳ ತುಂಬೆಲ್ಲ. ಈ ರೋಗ ಈಗೀಗ ಹಳ್ಳಿಗಳಿಗೂ ಹಬ್ಬಿದೆ. ಇದು ಹೊಸವರ್ಷದ ಸ್ವಾಗತವಂತೆ.! ಟೀವಿಗಳ ತುಂಬೆಲ್ಲ ಇವುಗಳದ್ದೇ ಅಬ್ಬರದ ಪ್ರಚಾರ. ಲಿಂಗಭೇದ ಮರೆತ ಕುಡಿತ, ಕುಣಿತಗಳಿಂದಾಗಿ ಅವಗಡಗಳು ಘಟಿಸಬಾರದೆಂದು ಪೊಲೀಸರ ಗಸ್ತು!!
ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವರ್ಷಕ್ಕೆ ವಿದಾಯ, ಹೊಸದಕ್ಕೆ ಸ್ವಾಗತ. ತರಹೇವಾರಿ ಥ್ರಿಲ್ಲಿಂಗ್ ಭ್ರಮೆಯ ಡ್ರಿಲ್ಲಿಂಗ್ ಪೋಷ್ಟಗಳು. ಹೊಸ ಡೈರಿ, ಕ್ಯಾಲೆಂಡರ್ ಗಳು, ಈಗೀಗ ಹೊಸ ಗೆಳೆತನಗಳು. ಇವು ಯಾವೂ ನನಗೆ ಹೊಸ ವರ್ಷದ ಖುಷಿಯನ್ನು ಇದುವರೆಗೆ ನೀಡಿಲ್ಲ.
ನನ್ನ ಹಾಗೆ ಅನೇಕರಿಗೂ ನೀಡಿಲ್ಲದಿರಬಹುದು.? ಇನ್ನು ಕೆಲವರಂತೂ ” ನಾವು ಭಾರತೀಯರು ಅದರಲ್ಲೂ ಹಿಂದೂಗಳಿಗೆ ಯುಗಾದಿಯೇ ಹೊಸವರ್ಷ” ಮುಂತಾಗಿ ಸಂಸ್ಕಾರ ವರಸೆಯ ಕಮೆಂಟ್ಸ್ ಮಾಡುತ್ತಾರೆ. ಹೋಗಲಿ ಉಗಾದಿಗಾದರೂ ಅಂಥದೊಂದು ತಾಜಾ ತಾಜಾ ಹುರುಪಿನ ಹೊಸ ವರ್ಷಾಚರಣೆಯ ಖುಷಿ ಉಕ್ಕಿ ಹರಿದೀತೆಂದರೆ, ಹುಂ,ಹೂಂ ಅಲ್ಲೂ ಇಲ್ಲ. ನಮ್ಮ ಕೂಡು ಕುಟುಂಬ ಪ್ರೀತಿಯ ಸಹಜ ಸಂತೃಪ್ತ ಬದುಕು ಹೈಜಾಕ್ ಆಗಿದೆ.
ಹಾಗಾದರೆ ಹ್ಯಾಪಿ ನ್ಯೂ ಈಯರ್ ಅಂದರೇನು? ಇಲ್ಲದಿರುವ, ಸಹಜವಾಗಿ ಉಂಟಾಗದಿರುವ ಸಂತಸ ಸಂಭ್ರಮಗಳ ಭ್ರಮೆಯ ಸಮೂಹಸನ್ನಿ ಸೃಷ್ಟಿಸುವುದೇ ಭಾಗಶಃ ನಿಜ. ಮತ್ತೆ ಮತ್ತೆ ಹೊಸ ವರ್ಷಾಚರಣೆ ಎಂಬ ಮಾಯಾವಿಯ ಹಿಂದೆ ಅಮಲಿನ ಲೋಕದ ಹುನ್ನಾರವೇ ಇದೆಯೆಂಬುದನ್ನು ಅಲ್ಲಗಳೆಯಲಾಗದು. ಅದೊಂದು ಬಿಸಿನೆಸ್ ಮ್ಯಾನೇಜಮೆಂಟ್ ಜಗದ ಹಿಡನ್ ಲೆಕ್ಕಾಚಾರ. ಗೋಳೀಕರಣ ಲೋಕದ ಬಂಡವಾಳಿಗರ ವ್ಯಾಪಾರಿ ಹುನ್ನಾರವಲ್ಲದೇ ಇನ್ನೇನೂ ಇಲ್ಲ. ಸಾಲಮಾಡಿಯಾದರೂ ತುಪ್ಪ ತಿನ್ನು ಎಂಬ ಹಳೆಯ ವ್ಯಸನದ ಮುಂದುವರಿದ ಹೊಸಭಾಗ… ನೀವೇನಂತೀರಿ..?
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…