ವಚನಗಳು ಸಾಹಿತ್ಯ ಲೋಕಕ್ಕೆ ವಿಶೇಷ ಸಂಪತ್ತಾಗಿವೆ-ಬಸಣ್ಣ ಶರಣ

ಸುರಪುರ: ವಚನ ಸಾಹಿತ್ಯ ಯಾವುದೇ ಕಾಲ್ಪನಿಕವಾಗಿ ರಚಿಸಿ ಬೆಳಸಿದ ಸಾಹಿತ್ಯ ವಲ್ಲ. ಶರಣರು ತಮ್ಮ ಜೀವನದಲ್ಲಿ ಅನುಭವಿಸಿದ ನುಡಿಗಳೆ ಮುಂದೆ ವಚನಗಳಾಗಿ, ತತ್ವಪದಗಳಾಗಿ ವಿಶಿಷ್ಟವಾದ ಮೌಲ್ಯ ಗಳನ್ನು ಹೊತ್ತು ಜಗತ್ತಿಗೆ ಚಿರಪರಿಚಿತ ಸಾಹಿತ್ಯವಾಗಿವೆ.ವಚನಗಳು ಕನ್ನಡ ಸಾಹಿತ್ಯ ಲೋಕದ ವಿಶೇಷ ಸಂಪತ್ತಾಗಿವೆ ಎಂದು ವಾಗಣಗೇರಾದ ಬಸಣ್ಣ ಶರಣ ನುಡಿದರು.

ತಾಲೂಕಿನ ರುಕ್ಮಾಪೂರದಲ್ಲಿ ಮಹರ್ಷಿ ವಾಲ್ಮೀಕಿ ಸೋಸಿಯೊ ಲಿಗಲ್ ಎಜುಕೇಶನ್ ಸೊಸೈಟಿ ಆವರಣದಲ್ಲಿ ವಿಶ್ವಗಂಗಾ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಆಯೋಜಿಸಿದ್ದ ಸಗರನಾಡಿನ ವಚನಕಾರರು ಹಾಗೂ ಶಿವಶರಣರು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಅಂದು ಧಾರ್ಮಿಕ ಕ್ಷೇತ್ರದಲ್ಲೂ ಭೂತವಾಗಿ ನಿಂತಿದ್ದ ಅಂಧ ಶ್ರದ್ದ, ಮೂಢನಂಬಿಕೆ , ವಿರುದ್ದ ಸೆಟೆದು ನಿಂತು ತಲೆ ಎತ್ತಿ ಮರೆದು ಪ್ರಭಾವಳಿಯನ್ನು ಪಡೆದರು. ಸಾಮಾಜಿಕ ರಂಗದಲ್ಲಿ ಗಂಡು ಹೆಣ್ಣು , ಮೇಲು ಕೀಳು , ಶ್ರೇಷ್ಠ ಕನಿಷ್ಠ, ಬಡವ-ಬಲ್ಲಿದ , ಜಾತಿ-ಮತ ಎಂಬ ಬೇಧವನ್ನು ಮಾಡದೆ ನಿರಂತರವಾಗಿ ಸಮಾಜದ ಏಳಿಗೆಗೆ ದುಡಿದು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.

ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ರುಕ್ಮಾಪೂರ ಹಿರೇಮಠ ಸಂಸ್ಥಾನದ ಗುರುಶಾಂತ ಮೂರ್ತಿ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಎಷ್ಟೋ ಜನ ಹೆಣ್ಣು ಮಕ್ಕಳು ಶರಣೆಯರಾಗಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರು. ಹಲವಾರು ವಚನಗಳು ರಚಿಸಿ ಅನುಭವ ಮಂಪಟದಲ್ಲಿ ಪಾಲ್ಗೊಂಡು ಅನುಭವ ಪಡೆದರು.

ಸ್ವಂತ ಜನರ ಮದ್ಯ ಹೋಗಿ ಕಾಯಕದ ಭಾವನೆಗಳು ಬೆಳೆಸಿ ಕೆಟ್ಟ ನಿರ್ಣಯಗಳನ್ನು ಅಳಿಸಿ ಹಾಕಿ ಸನ್ಮಾರ್ಗಕ್ಕೆ ತರಲು ಪ್ರಯತ್ನಿಸಿದರು . ಹಾಗೇಯೆ ಜಾತಿ ಪದ್ದತಿಯಂತಹ ಅನಿಷ್ಠತೆ ವಿರುದ್ದ ಹೋರಾಡಿದರು ಎಂದು ತಿಳಿಸಿದರು.

ವೇದಿಕೆ ಮೇಲೆ ಸಗರನಾಡು ಶಿಕ್ಷಣ ಸಂಸ್ಥೆ ಪ್ರಧಾನಗುರು ಚಂದಪ್ಪ ಎಸ್. ಯಾದವ್ , ಮಹೇಶ್ ಕುಂಟೇಜ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಈರಪ್ಪ ಸಿಂಪಿ ಹಾಗೂ ಸ್ವಾಗತ ಮಹಾಂತೆಶ ಹೀರೆಮಠ ಹಾಗೂ ವಂದರ್ನಾಪಣೆ ಶರಣಪ್ಪ ಹೊಸಮನಿ ಮಾಡಿದರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

1 hour ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

1 hour ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

1 hour ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

1 hour ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

1 hour ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420