ಸಂವಿಧಾನ ಅರ್ಥಮಾಡಿಕೊಳ್ಳದಿದ್ದರೆ ದೇಶಕ್ಕೆ ಗಂಡಾಂತರ: ಡಾ.ಅಪ್ಪುಗೇರೆ

ಜೇವರ್ಗಿ: ಸಂವಿಧಾನ ರಚಿಸುವಾಗ ಪ್ರತಿಯೊಂದು ವಿಷಯವನ್ನು ಕುಲಂಕಷವಾಗಿ ಚರ್ಚಿಸಿ, ಸಾವಿರಾರು ಪ್ರಶ್ನೆಗಳಿಗೆ ಉತ್ತರ ನೀಡುವುದರ ಮೂಲಕ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿದ್ದಾರೆ ಎಂದು ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪುಗೇರೆ ಸೋಮಶೇಖರ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕ ದಲಿತ ಸಮನ್ವಯ ಸಮಿತಿ ವತಿಯಿಂದ ಸಂವಿಧಾನ ಜಾರಿಯಾದ ದಿನ ಹಾಗೂ ಬೌದ್ಧ ಧಮ್ಮ ಪ್ರಚಾರ ಅಭಿಯಾನ ಕುರಿತು ರವಿವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ದೇಶದ ಜನರ ಮೇಲೆ ಧ್ವೇಷವನ್ನು ಭಿತ್ತಲಾಗುತ್ತಿದೆ. ಸಮಸ್ತ ಭಾರತಿಯರು ಸಂವಿಧಾನವನ್ನು ಓದುವುದರ ಮೂಲಕ ಡಾ.ಬಾಬಾ ಸಾಹೇಬರ ಚಿಂತನೆಗಳು ಮತ್ತು ಅವರ ಕಲ್ಪನೆಯ ಭಾರತವನ್ನು ಅರ್ಥಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಸಂವಿಧಾನವನ್ನು ಹಂತ ಹಂತವಾಗಿ ನಾಶ ಮಾಡಲಾಗುತ್ತಿದೆ. ಮೀಸಲಾತಿ, ದೌರ್ಜನ್ಯ ಕಾಯ್ದೆಗಳು, ಸಮಾನತೆಯನ್ನು ನಾಶ ಮಾಡಲು ಹೊರಟಿರುವುದು ಕಳವಳಕಾರಿ ಎಂದರು. ಈಗಾಗಲೇ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳ ಶಿಷ್ಯವೇತನಗಳಿಗೆ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದರು. ನಂತರ ಮಾತನಾಡಿದ ಪ್ರಾಚಾರ್ಯ ಡಾ. ವಿಜಯಕುಮಾರ ಸಾಲಿಮನಿ, ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಮಾಡುವುದರ ಮೂಲಕ ಪ್ರಭುದ್ಧ ಭಾರತ ನಿರ್ಮಾಣ ಮಾಡಬೇಕು. ಬಾಬಾ ಸಾಹೇಬರ ಚಿಂತನೆಗಳು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.

ನಂತರ ಮಾತನಾಡಿದ ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ, ಭಾರತದಲ್ಲೇ ಹುಟ್ಟಿದ ಮಾನವೀಯ ಧರ್ಮವಾದ ಬೌದ್ಧ ಧಮ್ಮವನ್ನು ಜಗತ್ತಿನ ನಾನಾ ದೇಶಗಳಾದ ಚೀನಾ, ಜಪಾನ, ಬ್ಯಾಂಕಾಕ್, ಹಾಂಕಾಂಗ್, ಟಿಬೆಟ್, ಥೈಲ್ಯಾಂಡ, ಶ್ರೀಲಂಕಾ, ಇತ್ಯಾದಿ ರಾಷ್ಟ್ರಗಳು ಜಾತಿ ರಹಿತ, ವರ್ಗರಹಿತ, ವರ್ಣರಹಿತ, ಸಮಾಜವನ್ನು ಸ್ಥಾಪಿಸಿ ಮುಂದುವರೆದ ರಾಷ್ಟ್ರಗಳಾಗಿವೆ. ಹಾಗಾಗಿ ಭಾರತೀಯರಾದ ನಾವು ಕೂಡಾ ಹಿಂದೂ ಧರ್ಮದಿಂದ ಶೋಷಿತರಾದ ನಾವು ಬೌದ್ಧ ಧಮ್ಮವನ್ನು ಅನುಸರಿಸುವುದರ ಮೂಲಕ ಬುದ್ಧನ ಚಿಂತನೆಗಳನ್ನು ಮೈಗೂಡಿಸಿಕೊಂಡು ಭಾರತವನ್ನು ಪ್ರಭುದ್ದ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವುದಕ್ಕೆ ಪಣ ತೊಡುವ ಉದ್ದೇಶದಿಂದ ಬೌದ್ಧ ಧಮ್ಮ ಪ್ರಚಾರ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮವನ್ನು ಜಿಪಂ ಸದಸ್ಯ ಕಮಲಾಬಾಯಿ ಮರೆಪ್ಪ ಬಡಿಗೇರ ಅವರು ಸಂವಿಧಾನದ ಪುಸ್ತಕವನ್ನು ನೆರೆದಿದ್ದ ಜನರತ್ತ ತೋರಿಸುವುದರ ಮೂಲಕ ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ ಅಧ್ಯಕ್ಷತೆ ವಹಿಸಿದ್ದರು. ಮಲ್ಲಣ್ಣ ಕೊಡಚಿ ಸ್ವಾಗತಿಸಿದರು. ದವಲಪ್ಪ ಮದನ ಪ್ರಾಸ್ತಾವಿಕ ಮಾತನಾಡಿದರು. ಶರಣು ಬಡಿಗೇರ ನಿರೂಪಿಸಿದರು. ಶ್ರೀಹರಿ ಕರಕಿಹಳ್ಳಿ ವಂದಿಸಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮರೆಪ್ಪ ಬಡಿಗೇರ, ದಲಿತ ಮುಖಂಡರಾದ ಭೀಮರಾಯ ನಗನೂರ, ಶಾಂತಪ್ಪ ಯಲಗೋಡ, ಬಾಬು ಹಿಪ್ಪರಗಿ, ಪ್ರಧಾನಿ ಅಂಬರಖೇಡ, ಸುಭಾಸ ಚನ್ನೂರ, ನಿಜಲಿಂಗ ದೊಡ್ಡಮನಿ, ಪುಂಡಲೀಕ ಗಾಯಕವಾಡ, ರವಿ ಕುಳಗೇರಿ, ಮರೆಪ್ಪ ಬೇಗಾರ, ಡಾ. ಅಶೋಕ ದೊಡ್ಡಮನಿ, ರಮೇಶ ಆಲೂರ, ರೇವಣಸಿದ್ದ ಎಸ್ ಹೆಗಡೆ, ಮಲ್ಲಿಕಾರ್ಜುನ ಕಟ್ಟಿ ಕೆಲ್ಲೂರ, ಗುರಣ್ಣ ಕಾಚಾಪೂರ, ಶಿವಯೋಗಿ ಯಾಳವಾರ, ಗುರಣ್ಣ ಐನಾಪೂರ, ಬೆಣ್ಣೆಪ್ಪ ಕೊಂಬಿನ, ರಾಜಶೇಖರ ಶಿಲ್ಪಿ, ಶಾಂತಪ್ಪ ಕಟ್ಟಿಮನಿ, ಗೊಲ್ಲಾಳಪ್ಪ ಕಡಿ, ಶ್ರೀಮಂತ ಧನಕರ್, ಚಂದ್ರು ಕೊಡಚಿ, ಮಲ್ಲಪ್ಪ ಹೊಸಮನಿ ಮಾರಡಗಿ, ಶಿವುಬಾಯಿ ಕೊಂಬಿನ, ಮಲ್ಲಮ್ಮ ಕೊಂಬಿನ್, ಜಗದೇವಿ ಜಟ್ನಾಕರ, ದೊಡ್ಡೇಶ ಕೊಂಬಿನ, ಸಂಗಮೇಶ ಕೊಂಬಿನ, ದೊಡ್ಡೇಶ ಬಾರಿಗಿಡ, ಮರೆಪ್ಪ ಕೂಡಲಗಿ, ಯಶವಂತ ಆಂದೊಲಾ, ಚನ್ನಪ್ಪ ಮಂದೇವಾಲ, ಶ್ರೀಶೈಲ ಮಂದೇವಾಲ, ಚಿದಾನಂದ ಇಟಗಾ, ಹೈಯಾಳಪ್ಪ ಗಂಗಾಕರ, ಬಸವರಾಜ ಹೆಗಡೆ, ಮಹಾದೇವ ಕೋಳಕೂರ, ಮಲ್ಕಣ್ಣ ಶಿಡ್ಲಿ, ಸೈದಪ್ಪ ಇಜೇರಿ, ಸಿದ್ದಪ್ಪ ಆಲೂರ, ಭಾಗಣ್ಣ ಸಿದ್ನಾಳ, ರಾಯಪ್ಪ ಬಾರಿಗಿಡ, ವಿಶ್ವರಾಧ್ಯ ಮಾಯಿ ಗಂವ್ಹಾರ, ಸೋಮಶೇಖರ ಗೋಪಾಲಕರ್, ಸಿದ್ರಾಮ ಕಟ್ಟಿ, ಬಾಲಣ್ಣ ಕೊಬ್ಬಿನ, ಬಸಣ್ಣ ಸರಕಾರ, ಸಂಗಣ್ಣ ಗುಡೂರ, ಗುರಲಿಂಗಪ್ಪ ಗುಡೂರ, ಶಂಕರಲಿಂಗ ಕಟ್ಟಿ, ಸಿದ್ರಾಮ ಯಳಸಂಗಿ, ಗಂಗುಬಾಯಿ ಮಂದ್ರವಾಡ, ಭಾಗಣ್ಣ ರದ್ದೇವಾಡಗಿ, ಭೀಮರಾಯ ಬಳಬಟ್ಟಿ, ಶಾಂತಕುಮಾರ ಜಮಖಂಡಿ, ಗೌತಮ ಇಟಗಾ, ಭೀಮಶಾ ಸಾಗರ, ಮಲ್ಲಿಕಾರ್ಜುನ ಹಂದನೂರ, ಕಾಂತು ಮುರಗಾನೂರ, ಮರೆಪ್ಪ ರಂಜಣಗಿ, ಶರಣಬಸವ ಬೊಮ್ಮನಳ್ಳಿ ಸೇರಿದಂತೆ ಅನೇಕರು ಇದ್ದರು. ಶಿವಶರಣಪ್ಪ ಮಾರಡಗಿ, ಮಹೇಶ ಕೋಕಿಲೆ, ಭಾಗಣ್ಣ ಕಟ್ಟಿ, ಶರಣಬಸಪ್ಪ ಲಖಣಾಪೂರ, ಶಿವಕುಮಾರ ಗೋಲಾ, ದೇವಿಂದ್ರಪ್ಪ ವರ್ಮಾ, ಅಮೀನಪ್ಪ ಮಂದೇವಾಲ, ಬಸವರಾಜ ಇಜೇರಿ, ನಿಂಗಪ್ಪ ಗೂಗಿಹಾಳ, ಭೀಮಾಶಂಕರ ಹರನಾಳ, ಡಾ. ಪ್ರಕಾಶ ಬಡಿಗೇರ ಸೇರಿದಂತೆ ಇತರರು ಇದ್ದರು.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

11 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420