ಜೇವರ್ಗಿ: ಕನ್ನಡ ಭವನಕ್ಕೆ ಹೆಚ್ಚುವರಿ 10ಲಕ್ಷ ಅನುದಾನ: ಮನು ಬಳಿಗಾರ

ಜೇವರ್ಗಿ: ಕನ್ನಡಕ್ಕೆ ಹಿಂದೂ-ಮುಸ್ಲಿಂ ಭೇದವಿಲ್ಲ. ಇದು ಸೂಫಿ ಸಂತರುˌ ಶರಣರು ನಡೆದಾಡಿದ ಪವಿತ್ರ ನೆಲವಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಶ ಪರಿಷತ್ ರಾಜ್ಶಾಧ್ಶಕ್ಷ ಮನು ಬಳಿಗಾರ ಅಭಿಪ್ರಾಯಪಟ್ಟರು.

ಪಟ್ಟಣದ ಹಳೆ ತಹಸೀಲ ಕಛೇರಿ ಆವರಣದಲ್ಲಿ ಸೋಮವಾರ ಸುಮಾರು 50ಲಕ್ಷ ವೆಚ್ಚದ ನೂತನ ಕನ್ನಡ ಭವನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡದ ಕೆಲಸಗಳಿಗಾಗಿ ದಾನಿಗಳಿಂದˌ ಸಂಘ ಸಂಸ್ಥೆಗಳಿಂದ 5 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ. ರಾಜ್ಶದಾದ್ಶಂತ ಒಟ್ಟು 22 ಕನ್ನಡ ಭವನಗಳು ನಡೆಯುತ್ತಿದ್ದು ಎಲ್ಲವೂ ಪೂರ್ಣಗೊಳಿಸಲಾಗುವುದು. ಅಲ್ಲದೆ ಪಟ್ಟಣದ ಕನ್ನಡ ಭವನಕ್ಕೆ ಇನ್ನು ಹೆಚ್ಚುವರಿ 10ಲಕ್ಷ ಅನುದಾನ ನೀಡಲಾಗುವುದು ಎಂದರು.

ನಂತರ ಶಾಸಕ ಡಾ. ಅಜಯಸಿಂಗ್ ಮಾತನಾಡಿˌ ಕಸಾಪ ಭವನಕ್ಕೆ ಮಾಜಿ ಲೋಕಸಭಾ ಸದಸ್ಶರಾದ ಡಾ.ಮಲ್ಲಿಕಾರ್ಜುನ ಖರ್ಗೆಯವರ ಅನುದಾನದಿಂದ 10ಲಕ್ಷˌ ಸ್ಥಳೀಯ ಶಾಸಕರ ಅನುದಾನˌ ಕನ್ನಡ ಮತ್ತು ಸಾಂಸ್ರ್ಕತಿ ಇಲಾಖೆ ಹಾಗೂ ದಾನಿಗಳಿಂದಲೂ ಹಣ ಸಂಗ್ರಹಿಸಿ ಸುಂದರವಾದ ಭವನ ನಿರ್ಮಿಸಲಾಗಿದೆ. ತಾಲೂಕಿನ ಜನತೆ ಕನ್ನಡದ ಚಟುವಟಿಕೆಗಳಿಗೆ ಈ ಭವನವನ್ನು ಬಳಸಿಕೊಳ್ಳಬೇಕು ಎಂದರು.

ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನˌ ಟೌನ್ ಹಾಲ್ ಕಟ್ಟಡವನ್ನು ಪೂರ್ಣಗೊಳಿಸಲಾಗುವುದು. ಇದೇ 5, 6, 7ರಂದು ಕಲಬುರಗಿ ವಿಶ್ವವಿದ್ಶಾಲಯದ ಆವರಣದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಶ ಸಮ್ಮೇಳನದಲ್ಲಿ ತೆರಳಲು ಜೇವರ್ಗಿಯಿಂದ 2ˌ ಯಡ್ರಾಮಿಯಿಂದ 2 ಬಸ್ ಗಳ ವ್ಶವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಶಕ್ಷ ವಿರಭಂದ್ರ ಸಿಂಪಿˌ ಕಸಾಪ ತಾಲೂಕಾಧ್ಶಕ್ಷ ಶಿವನಗೌಡ ಹಂಗರಗಿˌ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸ ರಾಜ್ ಪ್ರಸನ್ನˌ ಶಿವಾನಂದ ಶೆಟ್ಟಿˌ ಚಿ.ಸಿ. ನಿಂಗಣ್ಣˌ ಸಂಗಣ್ಣ ಇಟಗಿˌ ಹಿಂದುಳಿದ ವರ್ಗಗಳ ತಾಲೂಕ ವಿಸ್ತೀರ್ಣಾಧಿಕಾರಿ ವಿ.ಬಿ.ಹಿರೇಗೌಡ ಕಸಾಪ ಪದಾಧಿಕಾರಿಗಳಾದ ವಿರೇಶ ಕಂದಗಲ್ˌ ಗಿರೀಶ್ ರಾಠೋಡˌ ಭಗವಂತ್ರಾಯ ಬೆಣ್ಣೂರˌ ಪುರಸಭೆ ಸದಸ್ಶ ಸಂತೋಷ ಪಾಟೀಲ ಮಲ್ಲಾಬಾದˌ ರಾಜಶೇಖರ ಸೀರಿˌ ಖಾಸೀಂಪಟೇಲ ಮುದಬಾಳˌ ನೀಲಕಂಠ ಅವಂಟಿˌ ಶರಣಬಸವ ಕಲ್ಲಾˌ ಶಿವಕುಮಾರ ಕಲ್ಲಾˌ ಭೀಮರಾಯ ನಗನೂರˌ ಶ್ರೀಮಂತ ಧನ್ನಕರ್ ಇದ್ದರು.

ಕನ್ನಡಪರ ಸಂಘಟನೆಗಳ ಮುಖಂಡರಾದ ಶಿವಲಿಂಗ ಹಳ್ಳಿˌ ಕಂಠೆಪ್ಪ ಹರವಾಳˌ ಶ್ರೀಹರಿ ಕರಕಿಹಳ್ಳಿˌ ಸುಧೀಂದ್ರ ಇಜೇರಿˌ ಶಂಕರಗೌಡ ಹಾಲಗಡ್ಲಾˌ ಸಂತೋಷ ಪೂಜಾರಿˌ ಬಸವರಾಜ ಬಾಗೇವಾಡಿˌ ಸಂತೋಷಗೌಡ ಪಾಟೀಲˌ ˌಅಮಿನಪ್ಪ ಹೊಸಮನಿˌ ನಿಜಲಿಂಗ ದೊಡ್ಮನಿˌ ಮರೆಪ್ಪ ಕೋಬಾಳಕರ್ˌ ಸುನೀಲ ಹಳ್ಳಿˌ ಮರೆಪ್ಪ ಸರಡಗಿ ಸೇರಿದಂತೆ ಇತರರು ಇದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420