ಜೇವರ್ಗಿ: ಕನ್ನಡ ಭವನಕ್ಕೆ ಹೆಚ್ಚುವರಿ 10ಲಕ್ಷ ಅನುದಾನ: ಮನು ಬಳಿಗಾರ

0
144

ಜೇವರ್ಗಿ: ಕನ್ನಡಕ್ಕೆ ಹಿಂದೂ-ಮುಸ್ಲಿಂ ಭೇದವಿಲ್ಲ. ಇದು ಸೂಫಿ ಸಂತರುˌ ಶರಣರು ನಡೆದಾಡಿದ ಪವಿತ್ರ ನೆಲವಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಶ ಪರಿಷತ್ ರಾಜ್ಶಾಧ್ಶಕ್ಷ ಮನು ಬಳಿಗಾರ ಅಭಿಪ್ರಾಯಪಟ್ಟರು.

ಪಟ್ಟಣದ ಹಳೆ ತಹಸೀಲ ಕಛೇರಿ ಆವರಣದಲ್ಲಿ ಸೋಮವಾರ ಸುಮಾರು 50ಲಕ್ಷ ವೆಚ್ಚದ ನೂತನ ಕನ್ನಡ ಭವನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಕನ್ನಡದ ಕೆಲಸಗಳಿಗಾಗಿ ದಾನಿಗಳಿಂದˌ ಸಂಘ ಸಂಸ್ಥೆಗಳಿಂದ 5 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ. ರಾಜ್ಶದಾದ್ಶಂತ ಒಟ್ಟು 22 ಕನ್ನಡ ಭವನಗಳು ನಡೆಯುತ್ತಿದ್ದು ಎಲ್ಲವೂ ಪೂರ್ಣಗೊಳಿಸಲಾಗುವುದು. ಅಲ್ಲದೆ ಪಟ್ಟಣದ ಕನ್ನಡ ಭವನಕ್ಕೆ ಇನ್ನು ಹೆಚ್ಚುವರಿ 10ಲಕ್ಷ ಅನುದಾನ ನೀಡಲಾಗುವುದು ಎಂದರು.

ನಂತರ ಶಾಸಕ ಡಾ. ಅಜಯಸಿಂಗ್ ಮಾತನಾಡಿˌ ಕಸಾಪ ಭವನಕ್ಕೆ ಮಾಜಿ ಲೋಕಸಭಾ ಸದಸ್ಶರಾದ ಡಾ.ಮಲ್ಲಿಕಾರ್ಜುನ ಖರ್ಗೆಯವರ ಅನುದಾನದಿಂದ 10ಲಕ್ಷˌ ಸ್ಥಳೀಯ ಶಾಸಕರ ಅನುದಾನˌ ಕನ್ನಡ ಮತ್ತು ಸಾಂಸ್ರ್ಕತಿ ಇಲಾಖೆ ಹಾಗೂ ದಾನಿಗಳಿಂದಲೂ ಹಣ ಸಂಗ್ರಹಿಸಿ ಸುಂದರವಾದ ಭವನ ನಿರ್ಮಿಸಲಾಗಿದೆ. ತಾಲೂಕಿನ ಜನತೆ ಕನ್ನಡದ ಚಟುವಟಿಕೆಗಳಿಗೆ ಈ ಭವನವನ್ನು ಬಳಸಿಕೊಳ್ಳಬೇಕು ಎಂದರು.

ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನˌ ಟೌನ್ ಹಾಲ್ ಕಟ್ಟಡವನ್ನು ಪೂರ್ಣಗೊಳಿಸಲಾಗುವುದು. ಇದೇ 5, 6, 7ರಂದು ಕಲಬುರಗಿ ವಿಶ್ವವಿದ್ಶಾಲಯದ ಆವರಣದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಶ ಸಮ್ಮೇಳನದಲ್ಲಿ ತೆರಳಲು ಜೇವರ್ಗಿಯಿಂದ 2ˌ ಯಡ್ರಾಮಿಯಿಂದ 2 ಬಸ್ ಗಳ ವ್ಶವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಶಕ್ಷ ವಿರಭಂದ್ರ ಸಿಂಪಿˌ ಕಸಾಪ ತಾಲೂಕಾಧ್ಶಕ್ಷ ಶಿವನಗೌಡ ಹಂಗರಗಿˌ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸ ರಾಜ್ ಪ್ರಸನ್ನˌ ಶಿವಾನಂದ ಶೆಟ್ಟಿˌ ಚಿ.ಸಿ. ನಿಂಗಣ್ಣˌ ಸಂಗಣ್ಣ ಇಟಗಿˌ ಹಿಂದುಳಿದ ವರ್ಗಗಳ ತಾಲೂಕ ವಿಸ್ತೀರ್ಣಾಧಿಕಾರಿ ವಿ.ಬಿ.ಹಿರೇಗೌಡ ಕಸಾಪ ಪದಾಧಿಕಾರಿಗಳಾದ ವಿರೇಶ ಕಂದಗಲ್ˌ ಗಿರೀಶ್ ರಾಠೋಡˌ ಭಗವಂತ್ರಾಯ ಬೆಣ್ಣೂರˌ ಪುರಸಭೆ ಸದಸ್ಶ ಸಂತೋಷ ಪಾಟೀಲ ಮಲ್ಲಾಬಾದˌ ರಾಜಶೇಖರ ಸೀರಿˌ ಖಾಸೀಂಪಟೇಲ ಮುದಬಾಳˌ ನೀಲಕಂಠ ಅವಂಟಿˌ ಶರಣಬಸವ ಕಲ್ಲಾˌ ಶಿವಕುಮಾರ ಕಲ್ಲಾˌ ಭೀಮರಾಯ ನಗನೂರˌ ಶ್ರೀಮಂತ ಧನ್ನಕರ್ ಇದ್ದರು.

ಕನ್ನಡಪರ ಸಂಘಟನೆಗಳ ಮುಖಂಡರಾದ ಶಿವಲಿಂಗ ಹಳ್ಳಿˌ ಕಂಠೆಪ್ಪ ಹರವಾಳˌ ಶ್ರೀಹರಿ ಕರಕಿಹಳ್ಳಿˌ ಸುಧೀಂದ್ರ ಇಜೇರಿˌ ಶಂಕರಗೌಡ ಹಾಲಗಡ್ಲಾˌ ಸಂತೋಷ ಪೂಜಾರಿˌ ಬಸವರಾಜ ಬಾಗೇವಾಡಿˌ ಸಂತೋಷಗೌಡ ಪಾಟೀಲˌ ˌಅಮಿನಪ್ಪ ಹೊಸಮನಿˌ ನಿಜಲಿಂಗ ದೊಡ್ಮನಿˌ ಮರೆಪ್ಪ ಕೋಬಾಳಕರ್ˌ ಸುನೀಲ ಹಳ್ಳಿˌ ಮರೆಪ್ಪ ಸರಡಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here