ನಗರದಲ್ಲಿ ಯಾದಗಿರಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಸಂಚಾರಿ ನಿಯಮಗಳ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಕಿರು ಮ್ಯಾರಾಥಾನ್ಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಹಾಗು ಎಸ್ಪಿ ರುಶಿಕೇಶ ಭಗವಾನ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.ಡಿವಾಯ್ಎಸ್ಪಿ ವೆಂಕಟೇಶ ಹುಗಿಬಂಡಿ,ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಇತರರಿದ್ದರು.
ಸುರಪುರ: ಇಂದು ಯುವಕರು ಮತ್ತು ವಿದ್ಯಾರ್ಥಿಗಳು ಸಂಚಾರಿ ನಿಯಮಗಳ ಮೀರಿ ಬೈಕ್ ಚಲಾಯಿಸುವುದರಿಂದ ಎಷ್ಟೋ ಅಪಘಾತಗಳು ಸಂಭವಿಸುತ್ತಿವೆ.ಎಲ್ಲರು ಸಂಚಾರಿ ನಿಯಮಗಳ ಪಾಲಿಸಿ ಅಪಾಯದಿಂದ ಪಾರಾಗುವಂತೆ ಶಾಸಕ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.
ಯಾದಗಿರಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಸಂಚಾರಿ ನಿಯಮಗಳ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಕಿರು ಮ್ಯಾರಾಥಾನ್ ಓಟಕ್ಕೆ ತಿಮ್ಮಾಪುರ ಬಸ್ ನಿಲ್ದಾಣದ ಬಳಿ ಚಾಲನೆ ನೀಡಿ ಮಾತನಾಡಿದರು.ನಂತರ ಪೋಲಿಸ್ ಠಾಣಾ ಆವರಣದಲ್ಲಿ ನಡೆದ ಮ್ಯಾರಾಥಾನ್ನಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿ,ಎಲ್ಲರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ,ಅಲ್ಲದೆ ಅನೇಕರು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಓಡಿಸುವಿರಿ,ಅಂತವರಿಗಾಗಿ ಲೈಸೆನ್ಸ್ ಮಾಡಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮ್ಯಾರಾಥಾನ್ಗೆ ಚಾಲನೆ ನೀಡಿ ಯಾದಗಿರಿ ಜಿಲ್ಲಾ ಪೋಲಿಸ್ ಅಧೀಕ್ಷಕ ರುಶಿಕೇಶ ಭಗವಾನ್ ಸೋನೆವಾನೆ ಮಾತನಾಡಿ,ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲೆಂದು ೫ ಕಿಲೋ ಮೀಟರ್ ವರೆಗೆ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದೆ.ಮ್ಯಾರಾಥಾನ್ಗೆ ಶಾಸಕ ರಾಜುಗೌಡರು ಸಹಕಾರ ನೀಡಿದ್ದು ಸಂತೋಷದಾಯಕವಾಗಿದೆ.ಯುವಕರು ಇದರ ಮೂಲಕ ಎಲ್ಲರು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಕರೆ ನೀಡಿದರು.
ತಿಮ್ಮಾಪುರದಿಂದ ಆರಂಭಗೊಂಡ ಮ್ಯಾರಾಥಾನ್ ಮರಗಮ್ಮ ಗುಡಿ ಮೂಲಕ,ಬಡಾ ಮಜೀದ್ ಮಾರ್ಕೆಟ್ ಮಾರ್ಗವಾಗಿ ಅಂಬೇಡ್ಕರ ವೃತ್ತದ ಮೂಲಕ ಸುರಪುರದ ಗಾಂಧೆ ವೃತ್ತದ ಮೂಲಕ ದರಬಾರ ರಸ್ತೆಯಿಂದ ಸರ್ದಾರ ವಲ್ಲಭಬಾಯಿ ಪಟೇಲ ಮೂರ್ತಿ ಮಾರ್ಗವಾಗಿ ಹನುಮಾನ್ ಟಾಕೀಸ್ ರಸ್ತೆಯಿಂದ ಪುನಃ ಗಾಂಧಿ ವೃತ್ತದಿಂದ ಪೋಲಿಸ್ ಠಾಣೆಗೆ ಬಂದು ಸಮಾಪ್ತಿಗೊಳಿಸಲಾಯಿತು.ಮ್ಯಾರಾಥಾನ್ಲ್ಲಿ ಶಾಸಕರು ಎಸ್ಪಿಯವರು,ಡಿವಾಎಸ್ಪಿ ವೆಂಕಟೇಶ ಹುಗಿಬಂಡಿ,ಪಿಐ ಎಸ್.ಎಂ.ಪಾಟೀಲ,ತಹಸೀಲ್ದಾರ ನಿಂಗಣ್ಣ ಬಿರಾದಾರ,ತಾ.ಪಂ ಇಒ ಅಂಬ್ರೇಶ,ಸಡಿಪಿಒ ಲಾಲಸಾಬ್,ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ(ತಾತಾ),ನಗರಸಭೆ ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿ,ಆರ್.ಐ ಗುರುಬಸಪ್ಪ,ಪಿಎಸ್ಐ ಶರಣಪ್ಪ, ಚಂದ್ರಶೇಖರ, ಚೇತನ್,ನಚಿಕೇತ ಜನಗೌಡ ಹಾಗು ಪೇದೆಗಳಾದ ಶಿವಪ್ಪ,ಶರಣು,ಬಸವರಾಜ ಮುದ್ಗಲ್,ಮಂಜುನಾಥ ಸ್ವಾಮಿ, ದಯಾನಂದ,ಉಮಾಕಾಂತ ಇತರರಿದ್ದರು.
ಪೋಲಿಸ್ ಠಾಣಾ ಆವರಣದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮ್ಯಾರಥಾನ್ನಲ್ಲಿ ಮೊದಲ ಹತ್ತು ಸ್ಥಾನ ಪಡೆದ ಯುವಕರಲ್ಲಿ ಪ್ರಥಮ ಸ್ಥಾನ ಪಡೆದ ಶರಣಬಸವ ದೇವಾಪುರ ಮತ್ತು ದ್ವೀತಿಯ ಸ್ಥಾನ ಪಡೆದ ಪರಶುರಾಮ ದೇವರಗೋನಾಲ,ತೃತಿತ ಸ್ಥಾನ ಪಡೆದ ವಿಜಯಕುಮಾರ ಡೊಣ್ಣಿಗೇರಾ ಇವರಿಗೆ ಶಾಸಕರು ಮತ್ತು ಪೋಲಿಸ್ ಇಲಾಖೆಯಿಂದ ನಗದು ಮತ್ತು ಹೆಲ್ಮೆಟ್ ನೀಡಲಾಯಿತು ಮತ್ತು ಇನ್ನುಳಿದ ಏಳು ಜನರಿಗೆ ಹೆಲ್ಮೆಟ್ ನೀಡಿ ಗೌರವಿಸಲಾಯಿತು.ಶಿಕ್ಷಕ ಶರಣಗೌಡ ನಿರೂಪಿಸಿದರು,ಪಿಐ ಎಸ್.ಎಮ್.ಪಾಟೀಲ ಸ್ವಾಗತಿಸಿದರು,ಮಹಾಂತೇಶ ಬಿರಾದಾರ ಪ್ರಾರ್ಥಿಸಿದರು. ದೇವು ಕನ್ನಳ್ಳಿ ವಂದಿಸಿದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…