ಅಂಕಣ ಬರಹ

ಜೇಡರ ದಾಸಿಮಯ್ಯನವರ ವಚನಗಳ ಕುರಿತಾಗಿ ,ಅವುಗಳ ಸಾಹಿತ್ಯಿಕ ಸೊಬಗು

ಜೇಡರ ದಾಸಿಮಯ್ಯನವರ ವಚನಗಳ ಕುರಿತಾಗಿ ,ಅವುಗಳ ಸಾಹಿತ್ಯಿಕ ಸೊಬಗು, ನೇರ ನಿಷ್ಠುರ ನೀತಿನಡಾವಳಿಗಳ ನಿಲುವು, ಗುರು(ತತ್ವಬೋಧಕ) ಶಿಷ್ಯಸಂಬಂಧಗಳು. ಇತ್ಯಾದಿ ನಿಲುವುಗಳ ಕುರಿತು ಪೂಜ್ಯ ಶಿವಮೂರ್ತಿ ಮುರುಘಾಶರಣರು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಬಗೆಗೆ ಸಹಮತಿ ಹಾಗೂ ಅದೇ ಭಾವದ ಗೌರವ ದಾಸಿಮಯ್ಯತಂದೆಗಳ ಬಗೆಗಿದೆ.

ಆದರೆ ವಚನಗಳ ಮಹದನಿಲುವಿನ ಕುರಿತಾಗಿ ಅವರು ಅಭಿಪ್ರಾಯಗಳನ್ನು  ವ್ಯಕ್ತಪಡಿಸುವ ಭರದಲ್ಲಿ ಯಾವುದೇ ಐತಿಹಾಸಿಕ ಆಧಾರಗಳನ್ನು, ಪ್ರಮೇಯಗಳನ್ನು ನೀಡದೇ ಬಸವಣ್ಣನವರಿಗಿಂತ ಮೊದಲೇ ಶರಣತತ್ವವನ್ನು ಆಚರಿಸಿ ಉಳಿದವರಿಗೆ ಪ್ರೇರಕರಾಗಿದ್ದಾರೆ, ಅವರ ಚಳುವಳಿಯನ್ನು ಉಳಿದವರು ಮುಂದುವರೆಸಿದರು ಎಂಬುದರ ಕುರಿತು ಆಧಾರಗಳನ್ನು ನೀಡುವುದು ಅವರದೇ ಜವಾಬ್ದಾರಿಯಾಗಿದೆ.

ಚರಿತ್ರೆಯಲ್ಲಿ ದಾಸಿಮಯ್ಯ ಎಂಬ ಹೆಸರಿರುವ ಹಲವಾರು ಮಹಾನುಭಾವರು, ಹಲವಾರು ಜಯಸಿಂಹ, ವಿಕ್ರಮಾದಿತ್ಯ ಎಂಬ ಹೆಸರಿನವರ ಜತೆ ತಳಕು ಹಾಕಿಕೊಂಡಿರುವ ಈ ಗೊಂದಲವನ್ನು ಪೂಜ್ಯ ಡಾ.ಎಂ ಎಂ ಕಲಬುರ್ಗಿಯವರಂತಹ ಸಂಶೋಧಕರು ಸೇರಿದಂತೆ ಹಲವಾರು ವಿದ್ವಾಂಸರು ಈ ಗೊಂದಲದ ಬಗೆಗೆ ತೆರೆ ಎಳೆದದ್ದು ಪೂಜ್ಯ ಶಿಮುಶರಿಗೂ ತಿಳಿದಿದೆ. ಆದಾಗ್ಯೂ ಮಾಡಲು ಬಸವಧರ್ಮದ ಅನುಷ್ಠಾನದ ಕುರಿತು ಬೇಕಾದಷ್ಟು ಕೆಲಸಗಳಿದ್ದಾಗ್ಗಯೂ  ಅದನ್ನು ಬಿಟ್ಟು, ಒಳ್ಳೆಯ ಒಮದು ಲೇಖನದ ಮದ್ಯೆ ಇಂತಹ ಗೊಂದಲಗಳನ್ನು ಮೂಡಿಸುವುದು ಸರಿಯೆ ಎಂಬುದನ್ನು ಅವರೇ ಚಿಂತಿಸಬೇಕು.

ದಾಸಿಮಯ್ಯ ತಂದೆಗಳು ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ ತಂದೆಗಳನ್ನು ನೆನೆದರೆ , ಕಕ್ಕಯ್ಯ ಚೆನ್ನಯ್ಯ ತಂದೆಗಳು ಬಸವತಂದೆಯನ್ನಯ ಸ್ಮರಿಸುತ್ತಾರೆ. ಇದು ದುಗ್ಗಳೆ ತಾಯಿಯ ವಚನಗಳಲ್ಲೂ ಪುನರಾವರ್ತನೆಯಾಗುತ್ತದೆ. ತವನಿಧಿ ಪಡೆದ ದಾಸಿಮಯ್ಯ ತಂದೆಗಳ ಗರ್ವ ಹರಣ ಮಾಡಿದ ಶಂಕರದಾಸಿಮಯ್ಯನವರು ಬಸವಾದಿಗಳನ್ನು ಸ್ಮರಿಸುತ್ತಾರೆ. ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ಪೂಜ್ಯರಿಗೆ ನಾವು ಹೇಳಬೇಕೆ?.

ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತೊಡೆ ನಿಮ್ಮನಿತ್ತೆ ಕಾಣಾ….ಎನ್ನುವ ದಾಸಿಮಯ್ಯ ತಂದೆಗಳಿಗೆ ಶರಣರ ಸಂಪರ್ಕ ಬಂದಿತ್ತೆಂಬುದನ್ನು ಸೂಚಿಸುತ್ತದೆ. ಹೀಗಾಗಿ ಜೇಡರ ದಾಸಿಮಯ್ಯತಂದೆಗಳು ಬಸವಾದಿ ಶರಣರ ಸಮಕಾಲೀನರು;ಹಿರಿಯ ಸಮಕಾಲೀನರಾಗಿರುವ ಸಾಧ್ಯತೆಯೂ ಇದೆ. ಲಿಂ.ಇಲಕಲ್ಲ ಅಪ್ಪಗಳು, ಲಿಂ. ಮಲ್ಲಿಕಾರ್ಜುನ ಜಗದ್ಗುರುಗಳು,ಗದುಗಿನ ಜಗದ್ಗುರುಗಳು ಪೂ.ಶಿವಮೂರ್ತಿ ಶರಣರು, ಪೂ. ಗುರುಮಹಾಂತ ಶ್ರೀಗಳು ಒಂದೇ ಕಾಲಘಟ್ಟದವರು ಎಂಬ ಮಾದರಿಯನ್ನು ಕೇವಲ ಉದಾಹರಣೆಗಾಗಿ ಹೆಸರಿಸಬಹುದು

ಈ ಹಿನ್ನೆಲೆಯಲ್ಲಿ ವಚನಕಾರ ಜೇಡರ ದಾಸಿಮಯ್ಯ ಬಸವಾದಿ ಶರಣರ (ಹಿರಿಯ)ಸಮಕಾಲೀನರು. ಮಾರ್ಗಸಂಪುಟಗಳನ್ನು ಮತ್ತೊಮ್ಮೆ ಗಮನಿಸಲು ವಿನಂತಿಸಿದೆ. ಬಸವಧರ್ಮವನ್ನು ಮಠೀಯ ಸಂಪ್ರದಾಯಕ್ಕೆ ಸಿಲುಕಿಸಿದ ಪರಿಣಾಮವಾಗಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸಿಕೊಂಡು ಶರಣರ ನಿಜದ ನೆಲೆಯೊಂದಿಗೆ ಮುನ್ನುಗ್ಗಬೇಕಾದ ಈ ಪ್ರಸಂಗದಲ್ಲಿ ಗೊಂದಲಗಳನ್ನು ಮತ್ತೆಮತ್ತೆ ಕೆದಕಿ ಹಿನ್ನುಗ್ಗುವಂತೆ ಮಾಡುವುದು(ಯಾರು ಮಾಡಿದರೂ ಸರಿಯೆ) ಸರಿಯಲ್ಲ.

ಅಶೋಕ ಬ ಬರಗುಂಡಿ

ಗುಳೇದಗುಡ್ಡ

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

9 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

12 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

12 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

12 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

12 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420