ಕಲಬುರಗಿ: ಬಂಜಾರ ಸಮುದಾಯಕ್ಕೆ ಪರೀಕ್ಷೆ ಎದುರಾಗಿದೆ. ಕಾಂಗ್ರೇಸ್ ಪಕ್ಷಕ್ಕೆ ಜಾಧವ್ ದೋಖಾ ಮಾಡಿದ್ದರಿಂದ ಈ ಪರೀಕ್ಷೆ ಎದುರಾಗಿದೆ. ಕಾಂಗ್ರೇಸ್ ಪಕ್ಷ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ಹಾಗಾಗಿ ಸುಭಾಷ್ ರಾಠೋಡ್ ಅವರಿಗೆ ಟಿಕೇಟ್ ಕೊಟ್ಟಿದೆ ನೀವು ಆಶೀರ್ವದಿಸಿ ಎಂದರು ಶಾಸಕ ನಾರಾಯಣರಾವ್ ಕರೆ ನೀಡಿದರು.
ಅವರು ಚಿಂಚೋಳಿಯಲ್ಲಿ ಏರ್ಪಡಿಸಲಾಗಿದ್ದ ಬಂಜಾರ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿ, ಮೇ 23 ರ ನಂತರ ಮೋದಿಯಾಗಲೀ ಇರುವುದಿಲ್ಲ ರಾಜೀನಾಮೆ ನೀಡಿ ತನ್ನ ಮೊದಲು ಕೆಲಸ ಮಾಡಲು ಗುಜರಾತ್ ಗೆ ವಾಪಸ್ ಹೋಗಲಿದ್ದಾರೆ. ಈ ಸಲದ ಚುನಾವಣೆಯಲ್ಲಿ ಯಡಿಯೂರಪ್ಪ ಹಾಗೂ ಅವರ ಮಗ ಇಬ್ಬರೂ ಸೋಲಲಿದ್ದಾರೆ.
ಬಂಜಾರ ಸಮುದಾಯದ ಜನರು ಪ್ರಮಾಣ ಮಾಡಿ ನೀವು ಸುಭಾಷ್ ರಾಠೋಡ್ ಅವರನ್ನು ನೀವು ಗೆಲ್ಲಿಸಿ. ನಿಮ್ಮ ಬೆನ್ನಿಗೆ ಲಿಂಗಾಯತ ಸಮುದಾಯ, ಮುಸಲ್ಮಾನರು ಹೀಗೆ ಎಲ್ಲ ಪ್ರಮುಖ ಸಮುದಾಯದವರು ಇದ್ದಾರೆ, ಎಂದರು. ಸಂವಿಧಾನ ರಕ್ಷಿಸುವವರನ್ನು ನೀವು ಆರಿಸಿತನ್ನಿ ಜಾಧವ್ ಹಾಗೂ ಅವರ ಮಗನನ್ನು ಸೋಲಿ ಎಂದು ಕರೆ ನೀಡಿದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಮಾತನಾಡಿ ನಾನು ಮೊದಲು ಕಾಂಗ್ರೇಸ್ ನಲ್ಲಿ ಇದ್ದೆ ಯಾವುದೋ ಕಾರಣಕ್ಕೆ ಮುನಿಸಿಕೊಂಡು ಹೊರಗೆ ಹೋಗಿದ್ದೆ. ಈಗ ಮತ್ತೆ ಬಂದಿದ್ದೇನೆ ಇದಕ್ಕೆ ಕಾರಣ, ಮಲ್ಲಿಕಾರ್ಜುನ ಖರ್ಗೆ ಅವರ ಅಭಿವೃದ್ದಿ ಪರ ಚಿಂತನೆ.
ಈ ಚುನಾವಣೆ ಉಮೇಶ್ ಜಾಧವ್ ರಾಜೀನಾಮೆ ಕಾರಣ ಬಂದಿದೆ. ನಾನು ಚವ್ಹಾಣ್, ಬೆಳಮಗಿ, ಜಾಧವ್ ಎಲ್ಲರೂ ಶಾಸಕರಾಗಿದ್ದೇವೆ. ಈ ಸಲ ನೀವು ಸುಭಾಷ್ ರಾಠೋಡ್ ಅಚರಿಗೆ ಆಶೀರ್ವಾದ ಮಾಡಿ ಎಂದು ಕರೆ ನೀಡಿದರು.
ವೇದಿಕೆಯ ಮೇಲೆ ಡಿಸಿಎಂ ಡಾ ಜಿ ಪರಮೇಶ್ವರ, ಸಚಿವರಾದ ಪ್ರಿಯಾಂಕ್ ಖರ್ಗೆ, ಪಿ.ಟಿ.ಪರಮೇಶ್ವರ ನಾಯಕ್, ರಹೀಂಖಾನ್, ಶಾಸಕರಾದ ಎಚ್ ಟಿ ಸೋಮಶೇಖರ್, ಅಜಯ್ ಸಿಂಗ್ ಮಾಜಿ ಸಚಿವರಾದ ಬಾಬುರಾವ್ ಚವ್ಹಾಣ್, ಮಾಜಿ ಶಾಸಕಿ ಜಲಜಾ ನಾಯಕ್ ಸೇರಿದಂತೆ ಮತ್ತಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…