ಬಿಸಿ ಬಿಸಿ ಸುದ್ದಿ

ಯಡ್ರಾಮಿ ಎಂಬ ಮೊಗಲಾಯಿ ನೆಲ

ನಮ್ಮವ್ವ ಹೇಳುತ್ತಿದ್ದ ನಮ್ಮ ಮೊಗಲಾಯಿ ನೆಲದ ದೃಷ್ಟಾಂತಗಳು ಹೂಬಾ ಹೂಬಾ ಕಣ್ಮುಂದೆ ನಡೆದಂತೆ ನೆನಪಿವೆ. ಕಳೆದೊಂದು ವರುಷದಿಂದ ತಾಲೂಕು ಪಾತ್ರವನ್ನು ಬದುಕುತ್ತಿರುವ ಯಡ್ರಾಮಿಗೆ ಮೊಗಲಾಯಿತನದಿಂದ ವಿಮುಕ್ತಿ ದೊರಕಿಲ್ಲ. ಅವ್ವ ಅನಕ್ಷರಸ್ಥೆ. ಅಕ್ಷರ ಅಹಂಕಾರಕೋರರ ಭಾಷೆಯ ಅನ್ಪಡ್ ಅಲ್ಲ.

ಆದರೆ ಅವಳಿಗಿದ್ದ ಸಾಮಾಜಿಕ ಸಂವೇದನೆ, ಕಳಕಳಿಯ ಅರ್ಧದಷ್ಟು ಹೊಣೆಗಾರಿಕೆ ನಮಗೀಗಿಲ್ಲ ಅನಸ್ತದೆ. ಆಕೆಗೆ ಪತ್ರಿಕೆ ಓದುವ, ಅವಕ್ಕೆ ಬರೆಯುವ ಉಮೇದಿನ ಪರಿಚಯದ ಮಾತೇ ಗಾವುದ, ಗಾವುದ ದೂರದ ಮಜಕೂರ. ಆದರೆ ಅಗಾಧ ನೆನಪಿನ ಶಕ್ತಿಯ ಅನನ್ಯ ಜೀವ ನನ್ನವ್ವ.

ಎಡ್ರಾಮಿಗೆ ಹೋದಳೆಂದರೆ ತನ್ನ ತವರೂರಿನ ಬಾಲ್ಯದ ಗೆಳತಿ ಅವ್ವಮ್ಮ ಸಾಹುಕಾರ್ತಿಯ (ಮಲ್ಲೇದ ನಿಂಗಪ್ಪ ಸಾಹುಕಾರರ ಪತ್ನಿ ) ಮನೆಭೇಟಿ ಖಾಯಂ. ಇವರಿಬ್ಬರ ತವರೂರಿನ ( ಜಾಲಿಬೆಂಚಿ ) ಈರ್ಬಸಯ್ಯಣ್ಣ, ಗುರ್ತಾಯವ್ವರ ಜಗಳ.. ಗಜುಗದಾಟದಿಂದ ಹಿಡಿದು ಬಾಲ್ಯದ ಕೋಟ್ಯಾನುಕೋಟಿ ನೆನಪುಗಳ ರೀ ಕಾಲ್. ನನ್ನ ಅಪ್ಪ ತೀರಿ ಹೋದ ಮೇಲೆ ಅವ್ವ ( ನಿಂಗಮ್ಮ ) ನಮ್ಮ ಬಳಿಯೇ ಬಂದಿದ್ದಳು.

ರವಿ ಬೆಳಗೆರೆಯಂತಹ ಅನೇಕ ಪತ್ರಕರ್ತ, ಸಾಹಿತಿ ಮಿತ್ರರು ದಾವಣಗೆರೆಯ ನಮ್ಮನೆಗೆ ಬಂದಾಗೆಲ್ಲ ನಮ್ಮವ್ವಗೆ ಅತ್ಯಂತ ಪ್ರೀತಿಯಿಂದ ಮಾತಾಡಿಸಿ, ಅವಳು ಹಾಡುವ ಕಡಕೋಳ ಮಡಿವಾಳಪ್ಪನ ತತ್ವ ಜ್ಞಾನಪದ, ಉರ್ದುವಿನ ಚಕ್ಕಿ ಪದ, ಜಾನಪದಗಳನ್ನು ಜೇನುಪದಗಳಂತೆ ಸವಿಯುತ್ತಿದ್ದರು.

ಹೈ.ಕ.ಗೆ ಸೇರಿದ ನಮ್ಮ ಯಡ್ರಾಮಿಯಿಂದ ನಮ್ಮೂರ ಮೂಲಕ ಮೂರು ಹರದಾರಿ ಸಾಗಿ ಮುಂಬೈ ಕರ್ನಾಟಕದ ಬ್ರಿಟಿಷರ ಆಡಳಿತವಿರುವ ಸಿಂದಗಿ ಮಾರ್ಗ ಉಪಕ್ರಮಿಸಿದರೆ ಸಾಕು ಸುಂಟ್ಯಾಣ., ಇದು ಇಂಗ್ರೇಜಿ ಪ್ರಾಂತ್ಯ. ನಾವು ಮೊಗಲಾಯಿ ಮಂದಿ ಮದಡರು. ಇಂಗ್ರೇಜಿ ಮಂದಿ ಕಂಡಾಪಟಿ ಹುಶೇರಿ. ಸುಂಟ್ಯಾಣ ಅದು ನಮ್ಮ ಹೈ.ಕ. ಭಾಗದ ಗಡಿಭಾಗ. ಸುಂಕದ ಠಾಣೆ ಅದಾಗಿತ್ತು.

ಉರ್ದು, ಮೋಡಿ, ದಖನಿ ಭಾಷೆಯ ಪರಿಚಿತರಾದ ನಮ್ಮನೆ ಮುಂದಿನ ಸಯದಲಿ, ಅಬ್ದುಲ್ಲ ಕಾಕಾ, ಪೊಲೀಸ ಹಣಮಂತ್ರಾಯಗೌಡ ಅವರೆಲ್ಲ ಆಗಿನ ಕಾಲದ ಎರಡೂ ಪ್ರಾಂತ್ಯಗಳ ಕಾನೂನು ಕಟ್ಟಳೆಗಳನ್ನು ಕೆಲಮಟ್ಟಿಗೆ ಬಲ್ಲವರಾಗಿದ್ದರು.

ನಿಜಾಮನ ಮೊಗಲಾಯಿಯ ಗಡಿ ಬಾರ್ಡರಿನ ನಮ್ಮ ಪ್ರಾಂತ್ಯದ ಮಾಲು ಮಾಸೀಲು, ವ್ಯವಹಾರಗಳನ್ನು ಸುರಳೀತ ಮಾಡುವಲ್ಲಿ ಇವರ ನೆರವಿನ ಅಗತ್ಯವಿತ್ತು. ಆಗಿನ ಬಹಳಷ್ಟು ವ್ಯವಹಾರಗಳು ಯಡ್ರಾಮಿ ವರ್ತಕರವೇ ಆಗಿರ್ತಿದ್ದವು. ಕುದುರೆ ಎತ್ತಿನ ಗಾಡಿಗಳೇ ಆಗಿನ ಸರಕು ಸಾಗಾಣಿಕೆ ಮಾಧ್ಯಮಗಳು.

ನಮ್ಮ ಭಾಗದ ಊರುಗಳಿಂದ ಯಳಮೇಲಿ ಎತ್ತಿನ ಸಂತೆಗೆ ಹೋಗುವುದು.. ಸಿಂದಗಿ ಕಳ್ಳರು ಯಡ್ರಾಮಿ ದುಕಾನಗಳಲ್ಲಿ ಮಾಡಿದ ತುಡುಗುತನ.. ಇದೇ ಕಳ್ಳರು ರಾತ್ರೋರಾತ್ರಿ ನಮ್ಮೂರಿನ ಮುರ್ನಾಕು ಹಗೇ ತೆಗೆದು ಕತ್ತೆಗಳ ಮೇಲೆ ಜೋಳ ಸಾಗಿಸಿದ್ದು.. ಇದೆಲ್ಲವನ್ನು ಪ್ರಶ್ನಿಸಿ ಇಂಗ್ರೇಜಿ ಪ್ರಾಂತ್ಯದಲ್ಲಿ ಕಟ್ಲೆ ಕಾರ್ವಾಯಿ ಹೂಡುವುದು ಮೊಗಲಾಯಿಯ ನಮ್ಮವರಿಗೆ ಕಷ್ಟವೇ ಆಗಿತ್ತು.


ಇವತ್ತಿಗೂ ಇಂಗ್ರೇಜಿ ಮಂದಿ ಭಾಳ ಶ್ಯಾಣೇರು. ನಾವು, ನಮಗಾಗುವ ಅನ್ಯಾಯದ ಖಬರು ಇಲ್ಲದವರು. ಪ್ರಾಯಶಃ ಯಡ್ರಾಮಿ ತಾನು ತಾಲೂಕು ಆದ ಮೇಲೂ ಅದು ಹಾಗೇ ಇದೆ.

ಅವ್ವ ಹೇಳುತ್ತಿದ್ದ ಮೇಲಿನ ಈ ಎಲ್ಲ ಸಂಗತಿಗಳಿಗಿಂತ ರಜಾಕಾರರ ಹಾವಳಿಯದು ರೋಚಕಾತಿರೋಚಕ ಕತೆಗಳಿವೆ. ನನ್ನವ್ವನ ಬಾಯಿಯಿಂದಲೇ ನಾನು ಖುದ್ದು ಕೇಳಿ ತಿಳಿದ ಕುತೂಹಲದ ಅನೇಕ ಸಂಗತಿಗಳನ್ನು ಇನ್ನೊಮ್ಮೆ ಹೇಳುವೆ.

ಮಲ್ಲಿಕಾರ್ಜುನ ಕಡಕೋಳ

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

1 hour ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

2 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

4 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

15 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

17 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

17 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420