ಸುರಪುರ: ಶನಿವಾರ ಸಂಜೆ ಏಳು ಗಂಟೆಯ ನಂತರ ಸುರಿದ ಗುಡುಗು ಮಿಂಚು ಹಾಗು ಸಿಡಿಲು ಭರಿತ ಮಳೆಗೆ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ತಾಲೂಕಿನ ಬಿಜಾಸ್ಪುರ ಗ್ರಾಮದ ರೈತ ದುರ್ಗಪ್ಪ ಎಂಬುವವರು ಎರಡು ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ಮಳೆ ಗಾಳಿಗೆ ಸಿಕ್ಕು ಬಹುತೇಕ ಪಪ್ಪಾಯಿ ಗಿಡಗಳು ನೆಮಕ್ಕುರಳಿ ರೈತನಿಗೆ ಲಕ್ಷಾಂತರ ರೂಪಾಯಿ ಹಾನಿ ಮಾಡಿದೆ.
ಚಂದ್ಲಾಪುರ ಗ್ರಾಮದ ಬಳಿಯಲ್ಲಿ ಐದು ಎಕರೆಯಲ್ಲಿ ರೈತ ಜಗದೀಶ ನಂಬಾ ಎನ್ನುವವರು ಬೆಳೆದ ಪಪ್ಪಾಯಿ ಗಿಡಗಳು ನೆಲಕ್ಕುರಳಿ ಇಲ್ಲಿಯೂ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.ಅಲ್ಲದೆ ತಾಲೂಕಿನ ಹೆಮನೂರ ಗ್ರಾಮದ ರೈತ ಬಸನಗೌಡ ಪೊಲೀಸ್ ಪಾಟೀಲ ಎನ್ನುವವರು ತಮ್ಮ ನಲವತ್ತು ಎಕರೆ ಜಮೀನಲ್ಲಿ ಭತ್ತ ಬೆಳೆದಿದ್ದು ಕಟಾವಿಗೆ ಬಂದಿತ್ತು.ಅಕಾಲಿಕವಾಗಿ ಸುರಿದ ಮಳೆ ಗಾಳಿಗೆ ಸಿಕ್ಕ ಭತ್ತದ ಬೆಳೆ ಸಂಪೂರ್ಣ ನೆಲಕ್ಕುರಳಿ ಭತ್ತ ಮಳೆಯ ನೀರಲ್ಲಿ ನೆನೆಯುತ್ತಿದೆ.ಇದನ್ನು ಕಂಡ ರೈತ ಬಸನಗೌಡ ಸುಮಾರು ಹತ್ತು ಲಕ್ಷ ರುಪಾಯಿ ವರೆಗೆ ಸಾಲ ಮಾಡಿ ಭತ್ತ ಬೆಳೆದಿದ್ದೆ ಇನ್ನೇನು ಕಟಾವು ಮಾಡಬೇಕೆಂದಿರುವಾಗ ಮಳೆ ಬಿದ್ದು ಎಲ್ಲಾ ನಷ್ಟವಾಗಿದೆ,ಸರಕಾರ ಸಹಾಯ ಮಾಡಿದರೆ ಬದುಕುತ್ತೇವೆ,ಇಲ್ಲವಾದರೆ ನಮಗೆ ಸಾವೆ ಗತಿಯಾಗಲಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ ನಗರದ ಹಸನಾಪುರದ ರೈತ ಹಣಮಂತ್ರಾಯಗೌಡ ಎಂಬುವವರು ತಮ್ಮ ಹೊಲದಲ್ಲಿ ಎತ್ತುಗಳನ್ನು ಕಟ್ಟಿಹಾಕಿದ್ದು ರಾತ್ರಿ ಬಿದ್ದ ಸಿಡಿಲಿಗೆ ಒಂದು ಎತ್ತು ಸಾವಿಗೀಡಾಗಿದೆ,ಮುರು ಎತ್ತುಗಳನ್ನು ಕಟ್ಟಿಹಾಕಿದ್ದು ಒಂದು ಸತ್ತಿದೆ ಇನ್ನೆರಡು ಎತ್ತುಗಳಿಗೆ ಗಾಯಗಳಾಗಿವೆ,ನಮ್ಮ ಕುಟುಂಬದ ಬದುಕಿನ ಆಸರೆಯಾಗಿದ್ದ ಎತ್ತು ಸತ್ತಿದ್ದರಿಂದ ನಮ್ಮ ಬದುಕೆ ಕಷ್ಟಕ್ಕೆ ದೂಡಿದಂತಾಗಿದೆ ಸರಕಾರ ನೆರವಾಗಬೇಕೆಂದು ಗೋಳಿಡುತ್ತಿದ್ದಾರೆ.
ಅದೇರಿತಿಯಾಗಿ ತಾಲೂಕಿನ ಚಂದ್ಲಾಪುರ ಗ್ರಾಮದ ಬಳಿಯ ಹೊಲದಲ್ಲಿನ ಹುಲ್ಲಿನ ಬಣವೆಗೆ ಸಿಡಿಲು ಬಡಿದು ಹುಲ್ಲಿನ ಬಣವೆ ಸುಟ್ಟು ಕರಕಲಾಗಿದೆ.ಬಣವೆಯ ಮಾಲೀಕ ಖಲೀಲ ಅಹ್ಮದ ದಖನಿ ತಮ್ಮ ಅಳಲನ್ನು ತೋಡಿಕೊಂಡು ಜಾನುವಾರುಗಳಿಗೆ ಮೇಯಿಸಲು ಮೇವು ಸಂಗ್ರಹಿಸಲಾಗಿತ್ತು.ಈಗ ಸಿಡಿಲಿನಿಂದ ಎಲ್ಲಾ ಮೇವು ಭಸ್ಮವಾಗಿದೆ ಪಶುಸಂಗೋಪನಾ ಇಲಾಖೆ ಮೇವು ಒದಗಿಸಬೇಕೆಂದು ಮನವಿ ಮಾಡಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…