ಸುರಪುರ ನಗರದ ಜನತೆಗೆ ಲಾಕ್‍ಡೌನ್ ನೈಜ ದರ್ಶನ ಮಾಡಿಸಿದ ಪೊಲೀಸ್

ಸುರಪುರ: ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾದಾಗಿನಿಂದ ನಿರಂತರ ಕಾರ್ಯಾಚರಣೆ ನಡೆಸಿ ಜನತೆ ಮನೆಯಿಂದ ಹೊರ ಬರದಂತೆ ತಿಳಿಸುತ್ತಿದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಣ್ತಪ್ಪಿಸಿ ಹೊರಗೆ ಬಂದು ಅಲೆಯುತ್ತಿದ್ದ ಜನತೆಗೆ ಇಂದು ಪೊಲೀಸ್ ಇಲಾಖೆ ಲಾಕ್‍ಡೌನ್ ನೈಜ ದರ್ಶನ ಮಾಡಿಸಿತು.

ನಗರದಿಂದ ಹೊರ ಹೋಗುವ ಎಲ್ಲಾ ರಸ್ತೆಗಳಾದ ಹಸನಾಪುರ ಪೆಟ್ರೋಲ್ ಬಂಕ್ ರಸ್ತೆ,ಕುಂಬಾರಪೇಟೆ ವೃತ್ತ,ಕೆಂಭಾವಿ ರಸ್ತೆ,ವೆಂಕಟಾಪುರ ರಸ್ತೆ ಎಲ್ಲವುಗಳನ್ನು ಸಂಪೂರ್ಣ ಲಾಕ್‍ಡೌನ್ ಮಾಡಿ ಪೊಲೀಸ್ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಪೊಲೀಸ್ ಸಿಬ್ಬಂದಿಯನ್ನು ನೇಮಕಗೊಳಿಸಿ ಜನತೆ ಹೊರ ಹೋಗದಂತೆ ಮತ್ತು ನಗರದ ಒಳಗೆ ಬಾರದಂತೆ ನಿರ್ಬಂಧಿಸಿದ್ದಾರೆ.ನಗರದೊಳಗೆ ಕೇವಲ ಆರೋಗ್ಯ ಸಮಸ್ಯೆಯವರನ್ನು ಚಿಕಿತ್ಸೆಗಾಗಿ ಮತ್ತು ಸರಕಾರಿ ನೌಕರರನ್ನು ಹೊರತು ಪಡಿಸಿ ಇನ್ನುಳಿದವರಿಗೆ ನಗರ ಪ್ರವೇಶವನ್ನು ನಿಷೇಧಗೊಳಿಸಿದರು.

ಎಲ್ಲಾ ರಸ್ತೆಗಳಲ್ಲಿ ಅಳವಡಿಸಲಾದ ಬ್ಯಾರಿಕೆಡ್ ವರೆಗು ಬಂದ ಜನರು ನಗರ ಪ್ರವೇಶಕ್ಕೆ ಹೊತೊರದಾರೂ ಪೊಲೀಸರು ಪ್ರವೇಶ ತಡೆದುದರಿಂದ ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆಗಳು ಜರಗಿದವು.ಯಾವುದೇ ವಗ್ವಾದ ಮತ್ತು ಬೇರೆಯವರ ರೆಕ್ಮೆಂಡ್‍ಗಳಿಗು ಜಗ್ಗದೆ ಎಲ್ಲರನ್ನು ಮರಳಿ ಕಳುಹಿಸಿದ ಪೊಲೀಸರ ಕೆಲಸ ಜನರಲ್ಲಿ ಪ್ರಶಂಸೆ ಮೂಡಿಸದೆ.

ಇಂದಿನ ಲಾಕ್‍ಡೌನ್ ಕಟ್ಟುನಿಟ್ಟಿನ ಜಾರಿ ಕುರಿತು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಮಾತನಾಡಿ,ಇಂದಿನಿಂದ ಮೇ 3ರ ವರೆಗೆ ಇದೇ ರೀತಿಯ ಲಾಕ್‍ಡೌನ್ ವ್ಯವಸ್ಥೆ ಮುಂದು ವರೆಯಲಿದೆ.ನಾವು ಮಾಡುತ್ತಿರುವುದು ಜನತೆಯ ಸುರಕ್ಷತೆಗಾಗಿ.ಆದ್ದರಿಂದ ಜನರು ಅನಾವಶ್ಯಕವಾಗಿ ಹೊರಗೆ ಬರದೆ ನಮ್ಮ ಕೆಲಸಕ್ಕೆ ಸಹಕರಿಸಬೇಕು ಎಂದರು.

ನಗರದಲ್ಲಿಯೂ ಜನತೆ ಸುಖಾ ಸುಮ್ಮನೆ ಹೊರಗಡೆ ಬರುವುದನ್ನು ನಿಲ್ಲಿಸಬೇಕಿದೆ,ಇಲ್ಲವಾದಲ್ಲಿ ನಗರದಲ್ಲಿಯೂ ಹೊರಗಡೆ ಬಂದವರ ಬೈಕ್ ಸೀಜ್ ಮಾಡುವ ಕಾರ್ಯಾಚರಣೆ ನಿರಂತರ ಜಾರಿಯಲ್ಲಿರಲಿದೆ ಎಂದು ಜನತೆಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಂ.ಪಾಟೀಲ್ ಇದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

10 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

12 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

13 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

13 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

13 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420