ಕಲಬುರಗಿ: ನಗರದ ಗುಲ್ಬರ್ಗಾ ವಿಶ್ವ ವಿದ್ಯಾಲಯ ಮತ್ತು ಗ್ರಾಮೀಣ ಪೊಲಿಸ್ ಠಾಣೆಯ ವ್ಯಾಪ್ತಿ ಪ್ರದೇಶಗಳಲ್ಲಿ ಇಂದು ಎರಡು ಪೊಲೀಸ್ ಠಾಣೆಗಳಿಂದ ಕೋವಿಡ್ -19 ಸೇವರ ತಂಡ ಮತ್ತು ಪೊಲೀಸರಿಂದ ವಿವಿಧ ಬಡಾವಣೆಗಳಲ್ಲಿ ಲಾಕ್ ಡೌನ್ ನಿಯಮ ಪಾಲನೆಗಾಗಿ ಪ್ರದಕ್ಷಿಣೆ ಮಾರ್ಚ್ ನಡೆಸುವ ಮೂಲಕ ಜಾಗೃತಿ ಮೂಡಿಸಿದರು.
ಎಸಿಪಿ ಸುಬೇದಾರ ಅವರ ನೇತೃತ್ವದಲ್ಲಿ ಈ ಮಾರ್ಚ್ ನಡೆದಿದ್ದು, ನಗರದ ಹಾಗರಗಾ ಚೌಕ್ ನಲ್ಲಿ ಫ್ಯಾಲ್ಗ್ ಮಾರ್ಚ್ ನಡೆಸಿ ನಂತರ ವಿವಿ ಠಾಣೆ ಪಿ.ಎಸ್.ಐ ಹಿರೇಮಠ್ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ತಂಡದೊಂದಿಗೆ ಹಾಗರಗಾ ರೋಡ್ ಮಾರ್ಗವಾಗಿ, ಫೀರದೋಸ್ ನಗರ, ಅಬುಬಕರ್ ಕಾಲೋನಿ, ಉಮರ್ ಕಾಲೋನಿ, ಆಜಾದಪುರ ರೋಡ್, ಟೀಪ್ಪು ಸುಲ್ತಾನ್ ಚೌಕ್ ವರೆಗೆ ಪೊಲೀಸ್ ಮತ್ತು ಕೋವಿಡ್-19 ಸೇವಕರ ತಂಡದಿಂದ ಠಾಣೆ ವ್ಯಾಪ್ತಿಯ ಬಡಾವಣೆ ನಿವಾಸಿಗಳಿಗೆ ಸಾಮಾಜಿ ಅಂತರ, ಲಾಕ್ ಡೌನ್ ನಿಯಮ ಕಡ್ಡಾಯವಾಗಿ ಪಾಲಿಸಿ ಮತ್ತು ರಂಜಾನ್ ನಮಾಜ್ ಮನೆಯಲ್ಲೆ ಆಚರಿಸಬೇಕೆಂದು ಪ್ರದಕಿಣೆ ಮಾರ್ಚ್ ನಡೆಸಿ ಜನರಿಗೆ ಕರೆ ನೀಡಿ ಸೂಚಿಸಲಾಯಿತು.
ಈ ವೇಳೆಯಲ್ಲಿ ಪೊಲೀಸ್ ಮತ್ತು ಕೋವಿಡ್-19 ಸೇವಕರ ಪ್ರದಕ್ಷಿಣೆ ಮಾರ್ಚ್ ಗೆ ಸ್ಥಳೀಯ ಬಡವಾಣೆಯ ನಿವಾಸಿಗಳು ಹೂವುಗಳ ಸುರಿ ಮಳೆ ಸುರಿಸುವ ಮೂಲಕ ಸ್ವಾಗತಿಸಿ ಪೊಲೀಸರ ಕಾರ್ಯಕ್ಕೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…
ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…
ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…
ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…
ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…