ಸುರಪುರ: ತಾಲೂಕಿನ ದೇವಾಪುರದ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಸವ ಜಯಂತಿ ಅಂಗವಾಗಿ ನಗರದ ವಾರ್ಡ್ ಸಂಖ್ಯೆ ೧೫ರ ಪಾಳದಕೇರಿಯಲ್ಲಿನ ವಯೋವೃಧ್ಧ ಮಹಿಳೆಯೊಬ್ಬರ ಮನೆ ದುರಸ್ಥಿಗೊಳಿಸಿ ಕೊಟ್ಟು ಜೊತೆಗೆ ಗೃಹ ಪ್ರವೇಶ ನಡೆಸಿ ವಿಶೇಷವಾಗಿ ಬಸವ ಜಯಂತಿ ಆಚರಿಸಿದರು.
ವಯೋವೃಧ್ಧ ಮಹಿಳೆ ಗುರುಬಾಯಿ ಎಂಬುವವರು ಕಳೆದ ಐದಾರು ವರ್ಷದ ಹಿಂದೆ ಮನೆಯ ಮೇಲ್ಛಾವಣಿ ಬಿದ್ದಿದ್ದರಿಂದ ನಾಲ್ಕು ಫೀಟ್ ಸುತ್ತಳತೆಯ ಗುಡಿಸಲಲ್ಲಿ ವಾಸಿಸುತ್ತಿದ್ದರು.ಈ ಮಹಿಳೆಯ ಕರುಣಾಜನಕ ಕತೆಯನ್ನು ಟೀಂ ರಾಜುಗೌಡ ಸೇವಾ ಸಮಿತಿಯು ಲಾಕ್ಡೌನ್ ಅಂಗವಾಗಿ ಅನ್ನ ವಿತರಣೆ ಸಂದರ್ಭ ಗುರುತಿಸಿದ ಸಂಗತಿ ತಿಳಿದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವೃಧ್ಧ ಮಹಿಳೆಯ ಮನೆಯನ್ನು ದುರಸ್ಥಿ ಮಾಡಿಸಿ ಕೊಡುವುದಾಗಿ ತಿಳಿಸಿದ್ದರು.
ಅದರಂತೆ ಕಳೆದ ಒಂದು ವಾರದಿಂದ ಮನೆಯ ದುರಸ್ಥಿ ಕಾರ್ಯ ನಡೆಸಿ ಇಂದು ಮನೆಯ ಗೃಹ ಪ್ರವೇಶ ನಡೆಸುವ ಮೂಲಕ ವಿಶೇಷವಾಗಿ ಬಸವ ಜಯಂತಿಯನ್ನು ಆಚರಿಸಿದರು.ಬೆಳಿಗ್ಗೆ ೧೦ ಗಂಟೆಗೆ ನಡೆದ ಗೃಹ ಪ್ರವೇಶ ಸಮಾರಂಭದಲ್ಲಿ ಮೊದಲಿಗೆ ಬಸವೇಶ್ವರರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ,ನಂತರ ಆರಕ್ಷಕ ನಿರೀಕ್ಷಕ ಎಸ್.ಎಮ.ಪಾಟೀಲ್ ಗೃಹ ಪ್ರವೇಶ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಟೀಂ ರಾಜುಗೌಡ ಸೇವಾ ಸಮಿತಿಯಿಂದ ಮಹಿಳೆಯ ಕರುಣಾಜನಕ ಸ್ಥಿತಿಯ ಬಗ್ಗೆ ತಿಳಿಯಿತು.ಅದರಿಂದ ಇಂದು ಮಹಿಳೆಯ ಮನೆ ದುರಸ್ಥಿ ಮಾಡಿಸಿಕೊಡಲು ಮುಂದೆ ಬಂದೆವು.ಇದರಿಂದ ಆ ತಾಯಿಯ ಮುಖದಲ್ಲಿನ ಸಂತೋಷ ಕಂಡು ಖುಷಿಯಾಗಿದೆ ಎಂದರು.ಅಲ್ಲದೆ ಟೀಂ ರಾಜುಗೌಡ ಸೇವಾ ಸಮಿತಿಯ ಕಾರ್ಯ ನಿಜಕ್ಕೂ ಮೆಚ್ಚುವಂತದ್ದಾಗಿದೆ ಎಂದರು.
ನಂತರ ಆರಕ್ಷಕ ನಿರೀಕ್ಷಕ ಎಸ್.ಎಂ.ಪಾಟೀಲ್ ಮಾತನಾಡಿ,ಮಠಮಾನ್ಯಗಳೆಂದರೆ ಕೇವಲ ಧರ್ಮ ಪ್ರಸಾರ ಮಾತ್ರ ಮಾಡುವುದಲ್ಲ.ಅದರಜೊತೆಗೆ ಕಷ್ಟದಲ್ಲಿರುವವರ ನೆರವಿಗೆ ಬರುವುದು ಎಂಬುದನ್ನು ವೃಧ್ಧೆಗೆ ಸೂರು ಕಲ್ಪಿಸುವ ಮೂಲಕ ದೇವಾಪುರದ ಶ್ರೀಗಳು ತೋರಿಸಿಕೊಟ್ಟಿದ್ದಾರೆ.ಇಂತಹ ಸಮಾಜಮುಖಿ ಕಾರ್ಯ ಎಲ್ಲಾ ಮಠ ಮಾನ್ಯಗಳಿಗೂ ಮಾದರಿಯಾಗಿದೆ.ಟೀಂ ರಾಜುಗೌಡ ಸೇವಾ ಸಮಿತಿಯು ನಗರದಾದ್ಯಂತ ಎಲ್ಲ ಬಡ ನಿರ್ಗತಿಕರಿಗೆ ನಿತ್ಯವು ಅನ್ನ ನೀರು ವಿತರಣೆಯ ಸೇವೆ ಅಮೋಘವಾಗಿದೆ ಎಂದರು.
ನಂತರ ಮನೆಯ ದುರಸ್ಥಿಗೆ ಶ್ರಮಿಸಿದ ಕಾರ್ಮಿಕರಿಗೆ,ಟೀಂ ರಾಜುಗೌಡ ಸೇವಾ ಸಮಿತಿಯ ಕಾರ್ಯಕರ್ತರಿಗೆ ಗೌರವ ಸನ್ಮಾನ ನೆರವೇರಿಸಿದರು.ಈ ಸಂದರ್ಭದಲ್ಲಿ ಕೆಂಭಾವಿ ಠಾಣೆ ಪಿಎಸ್ಐ ಸುದರ್ಶನ್ ರಡ್ಡಿ,ಟೀಂ ರಾಜುಗೌಡ ಸೇವಾ ಸಮಿತಿಯ ಲಕ್ಷ್ಮೀಕಾಂತ ದೇವರಗೋನಾಲ,ಗಂಗಾಧರ ನಾಯಕ,ಪರಶುರಾಮ ನಾಟೇಕಾರ್,ಸಂತೋಷ ಕುಂಬಾರ ಮುಖಂಡರಾದ ವಿರುಪಾಕ್ಷಿ ಕೋನಾಳ,ಮಂಜುನಾಥ ಜಾಲಹಳ್ಳಿ,ಜಗದೀಶ ಪಾಟೀಲ್,ಚಂದ್ರಶೇಖರ ಡೊಣೂರ ಪೇದೆಗಳಾದ ಮನೋಹರ ರಾಠೋಡ,ಮಂಜುನಾಥ ಹಿರೇಮಠ,ಮಹಾಂತೇಶ ಬಿರಾದಾರ್ ಇತರರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…