ನವದೆಹಲಿ: ಕೋರೋನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಜಯಂತಿ, ಹಬ್ಬ ಆಚರಣೆಗಳು ನಿಂತಿವೆ. ಸಾಮಾಜಿಕ ಅಂತರ ಉಲ್ಲಂಘಿಸದೆ, ಮನೆಯಲ್ಲಿ ಕುಳಿತು ಬಸವ ಜಯಂತಿ ಯನ್ನು ವಿಶಿಷ್ಟವಾಗಿ ಆಚರಣೆ ಮಾಡಬಹುದು ಅನ್ನೋದಕ್ಕೆ ಒಂದು ಮಾದರಿ. ಇಂದು ರಾಜ್ಯ ಮತ್ತು ದೇಶದಾದ್ಯಂತ ಬಸವ ಜಯಂತಿ ಅದರ ಅಂಗವಾಗಿ ಸಮಾನ ಮನಸ್ಕರು ಕೂಡಿಕೊಂಡು ನಮ್ಮ ನಮ್ಮ ಮನೆಯಲ್ಲಿ ಬಸವ ಜಯಂತಿ ಆಚರಣೆ ನಿಮಿತ್ತ ಫೇಸ್ಬುಕ್ ಬಳಸಿಕೊಂಡು ಲೈವ್ ಅಲ್ಲಿ ವಚನಗಳ ಮತ್ತು ವಚನಕಾರರ ಸಂದೇಶ ಸಾರಿ ಮಾದರಿ ಆಗಿದ್ದಾರೆ.

ಇಂದು ಬೆಳಿಗ್ಗೆ ಫೇಸ್ಬುಕ್ ಲೈವ್ ಕಾರ್ಯಕ್ರಮ ಬೆಳಿಗ್ಗೆ 09:30 ಕೆ ಕಾರ್ಯಕ್ರಮದ ಆಯೋಜಕ ಭೀಮನಗೌಡ ಪರಗೊಂಡ. ವಕೀಲರು, ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕಾರ್ಯಕ್ರಮ ದ ಆಶಯ, ಗುರಿ, ಉದ್ದೇಶ, ಮತ್ತು ಶರಣರ ಬಗ್ಗೆ ವಿವರಿಸಿದರು.

ನಂತರ ಕಾರ್ಯಕ್ರಮದಲ್ಲಿ ಮೊದಲಿಗೆ ವಿಜಯಪುರ ಬಿ. ಎಲ್. ಡೀ. ಈ ಸಂಸ್ಥೆಯ ಪ್ರಚಾರ ಅಧಿಕಾರಿ ಹಾಗೂ ಶರಣ ತತ್ವ ಪ್ರಚಾರರಾದ ಮಹಾಂತೇಶ ಬಿರಾದಾರ ಪ್ರಸ್ತುತ ಪರಿಸ್ಥಿತಿ
, ಬಸವಣ್ಣ ಮತ್ತು ಶರಣರ ವಿಚಾರಗಳ ಅಗತ್ಯ ಬಗ್ಗೆ ವಿವಿರವಾಗಿ ಮಾತಾಡಿದರು. ನಂತರ ಕಲಬುರ್ಗಿ ಜಿಲ್ಲೆ ಹಿರಿಯ ಪತ್ರಕರ್ತರಾದ ಶೀವರಂಜನ ಸತ್ಯಂಪೇಟ
ಮಾತನಾಡಿ,ಬಸವಣ್ಣ ಲೋಕ ಸೂರ್ಯ. ಸೂರ್ಯ ಇರುವಲ್ಲಿ ಕತ್ತಲೆ ಹೇಗೆ ತನಗೆ ತಾನೆ ಕಾಲ್ತೆಗೆಯುವುದೋ ಹಾಗೆ ಬವವಣ್ಣ ಇರುವಲ್ಲಿ ಜಾತಿ ಸೂತಕ ಇಲ್ಲ. ಮತ ಮೌಢ್ಯಗಳಿಲ್ಲ. ಮೇಲು-ಕೀಳುಗಳಿಲ್ಲ. ಬಡವ-ಬಲ್ಲಿದನಿಲ್ಲ, ಜಾಣ-ದಡ್ಡನಿಲ್ಲ, ಸ್ತ್ರೀ-ಪುರುಷ ಎಂಬ ಲಿಂಗಭೇಧವಿಲ್ಲ. ಲಂಚ-ವಂಚನೆಗಳಿಲ್ಲ, ದರ್ಪ-ದಬ್ಬಾಳಿಕೆ ಇಲ್ಲ. ಇಲ್ಲಿ ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು, ಒಟ್ಟಿನ ಮೇಲೆ ಈ ನೆಲ ನೆಮ್ಮದಿಯ ನೆಲೆವನೆಯಾಗಬೇಕು. ಇದು ಬಸವಮಾರ್ಗ, ಶರಣಮಾರ್ಗದ ಕನಸು ಬಗ್ಗೆ ಒತ್ತಿ ಹೇಳಿದರು.

ನಂತರ, ವಿಜಯಪುರ ಜಿಲ್ಲೆಯ ರಾಷ್ಟ್ರೀಯ ಬಸವ ಸೇನೆ ಜಿಲ್ಲಾಧ್ಯಕ್ಷ ರವಿ ಬಿರಾದಾರ ಅವರು ಮಾತನಾಡಿ, ಬಸವಣ್ಣನವರ ಸಾಮಾಜಿಕ ಚಳುವಳಿ ಬಗ್ಗೆ, ಕಲಬುರ್ಗಿ ಯ
ಬಸವರಾಜ ಕೋಣಿನ್ ಸಿರನೂರ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ತಾಲ್ಲೂಕಿನ ಆನಂದ ಏಣಗಿ ಅವರು ಬಸವಣ್ಣ ಮತ್ತು ಮಡಿವಾಳ ಮಾಚಿದೇವ, ಅಕ್ಕಮಹಾದೇವಿ ಅವರ ಕಲ್ಯಾಣ ರಾಜ್ಯ ಬಗ್ಗೆ ಹೇಳಿದ್ರು.

ಬೆಳಗಾವಿ ಜಿಲ್ಲೆಯ ಅಥಣಿ ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಶಿಂಗೆ ಅವರು, ಅಸ್ಪಶ್ಯತೆ, ಸಾಮಾಜಿಕ ನ್ಯಾಯ ಮತ್ತು ಬಸವಣ್ಣನವರ ವಚನಗಳು ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿದರು. ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ
ವಿಲಾಸ ಗೌತಮ್ ನಿಡಗುಂದಿ ಮಾತನಾಡಿ, ಕಲ್ಯಾಣ ಕ್ರಾಂತಿ ಯ ವಿಭಿನ್ನ ಆಯಾಮಗಳ ಬಗ್ಗೆ ವಿವರಿಸಿದರು..
ಧಾರವಾಡ ದ ಶರಣಪ್ಪ ಗೊಲ್ಲರ , ವ್ಯಕ್ತಿಯೊಬ್ಬ ಮೂಲತ ದರೋಡೆಕೋರ ಆಗಿ ಬಸವಣ್ಣ ಮತ್ತು ಶರಣರ ವಿಚಾರದಿಂದ ಪರಿವರ್ತನೆ ಆದ ಶರಣ ನನ್ನಯ್ಯ ಅವರನ್ನು ಪರಿಚಯಿಸಿ ಕೊಟ್ಟರು. ಕೊನೆಗೆ ಸಮಾರೋಪದ ಮಾತುಗಳು ವಕೀಲರು ಭೀಮನಗೌಡ ಪರಗೊಂಡ ಅವರು ಹೇಳಿದ್ರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

8 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

10 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420