ಕಲಬುರಗಿ: ಜಿಲ್ಲೆಯಾದ್ಯಂತ ಕೋರೋನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಕೋರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯಿಂದ 2020ರ ಮೇ 23 ರಿಂದ 31ರವರೆಗೆ ನಗರದ ಎಲ್ಲಾ 55 ವಾರ್ಡ್ಗಳ ಬಡಾವಣೆಗಳಲ್ಲಿ ಪ್ರತ್ಯೇಕ ವಾಹನಗಳ ಮೂಲಕ ಹೈಡ್ರೋಕ್ಲೋರೈಡ್ ಸಲ್ಯೂಷನ್ ಮತ್ತು ಸ್ಯಾನಿಟೈಜರ್ ಸ್ಪ್ರೇಯಿಂಗ್ ಮಾಡಲಾಗುತ್ತಿದ್ದು, ನಗರದ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು ತಿಳಿಸಿದ್ದಾರೆ.
ಇದಕ್ಕಾಗಿ ನಗರದ ಎಲ್ಲ ವಾರ್ಡ್ಗಳಿಗೆ ಆರೋಗ್ಯ ನಿರೀಕ್ಷಕರನ್ನು ನಿಯೋಜಿಸಲಾಗಿದೆ. ನಗರದ ಎಲ್ಲ 55 ವಾರ್ಡಗಳಲ್ಲಿ ಪ್ರತ್ಯೇಕ ವಾಹನಗಳ ಮೂಲಕ ಸ್ಪ್ರೇ ಮಾಡಲಾಗುತ್ತದೆ. ಕಂಟೇನ್ಮೆಂಟ್ ಝೋನ್ಗಳಿಗೆ ಎರಡು ಸ್ಯಾನಿಟೈಜರ್ ವಾಹನಗಳನ್ನು ಕಾಯ್ದಿರಿಸಲಾಗಿದೆ.
ಮೇ 23 ರಂದು ವಾರ್ಡ್ ಸಂಖ್ಯೆ 1 ರಿಂದ 18 ರವರೆಗೆ, ಮೇ 24 ರಂದು ವಾರ್ಡ್ ಸಂಖ್ಯೆ 19 ರಿಂದ 36 ರವರೆಗೆ ಹಾಗೂ ಮೇ 25 ರಂದು ವಾರ್ಡ್ ಸಂಖ್ಯೆ 37 ರಿಂದ 55 ರವರೆಗೆ, ಮೇ 26 ರಂದು ವಾರ್ಡ್ ಸಂಖ್ಯೆ 1 ರಿಂದ 18 ರವರೆಗೆ, ಮೇ 27 ರಂದು ವಾರ್ಡ್ ಸಂಖ್ಯೆ 19 ರಿಂದ 36 ರವರೆಗೆ ಹಾಗೂ ಮೇ 28 ರಂದು ವಾರ್ಡ ಸಂಖ್ಯೆ 37 ರಿಂದ 55 ರವರೆಗೆ ಹಾಗೂ ಮೇ 29 ರಂದು ವಾರ್ಡ್ ಸಂಖ್ಯೆ 1 ರಿಂದ 18 ರವರೆಗೆ, ಮೇ 30 ರಂದು ವಾರ್ಡ್ ಸಂಖ್ಯೆ 19 ರಿಂದ 36 ರವರೆಗೆ ಹಾಗೂ ಮೇ 31 ರಂದು ವಾರ್ಡ್ ಸಂಖ್ಯೆ 37 ರಿಂದ 55 ರವರೆಗಿನ ವಾರ್ಡುಗಳಲ್ಲಿ ಹೈಡ್ರೋಕ್ಲೋರೈಡ್ ಸಲ್ಯೂಷನ್ ಮತ್ತು ಸ್ಯಾನಿಟೈಜರ್ ಸ್ಪ್ರೇಯಿಂಗ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ…
ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ…
ಕಲಬುರಗಿ; ಕಲಬುರಗಿ ಜಿಲ್ಲೆಯ ಒಂಭತ್ತು ಶಿಶು ಅಭಿವೃದ್ಧಿ ಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ…
ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…
ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…
ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…