ವಾಡಿ: ಸ್ಥಳೀಯ ಮುಸ್ಲಿಂ ಸಮುದಾಯದ ಭಾಯ್ ಭಾಯ್ ಗ್ರೂಪ್ ಕಾರ್ಯಕರ್ತರು ಹಾಗೂ ಟೀಂ ಪ್ರಿಯಾಂಕ್ ಖರ್ಗೆ ಪದಾಧಿಕಾರಿಗಳು, ಕ್ವಾರಂಟೈನ್ ಕಾರ್ಮಿಕರೊಂದಿಗೆ ರಂಜಾನ್ ಈದ್ ಆಚರಿಸುವ ಮೂಲಕ ಕೋಮು ಸೌಹಾರ್ಧತೆ ಮೆರೆದ ಪ್ರಸಂಗ ನಡೆಯಿತು.
ಒಂಬತ್ತು ನೂರು ಮಹಾ ವಲಸಿಗರಿಗೆ ಆಶ್ರಯ ನೀಡುವ ಮೂಲಕ ಜಿಲ್ಲೆಯ ಬಹುದೊಡ್ಡ ಕ್ವಾರಂಟೈನ್ ಕೇಂದ್ರವೆಂದು ಗುರುತಿಸಿಕೊಂಡಿರುವ ಹಳಕರ್ಟಿ ದರ್ಗದಲ್ಲಿ ಸೋಮವಾರ ರಂಜಾನ್ ಹಬ್ಬದ ಸಂಭ್ರಮ ಕಂಡುಬಂದಿತು.
ತಮ್ಮ ತಮ್ಮ ಮನೆಯಲ್ಲಿ ನಮಾಜ್ ಮಾಡಿ ತಾಲೂಕು ಆಡಳಿತದ ಪರವಾನಿಗೆಯೊಂದಿಗೆ ಕ್ವಾರಂಟೈನ್ ಕೇಂದ್ರದಲ್ಲಿ ತರಕಾರಿ ಫಲಾವ್ ಸಿದ್ಧಪಡಿಸಿದ ಭಾಯ್ ಭಾಯ್ ಗ್ರೂಪ್ ಕಾರ್ಯಕರ್ತರು ಹಾಗೂ ಟೀಂ ಪ್ರಿಯಾಂಕ್ ಖರ್ಗೆ ಪದಾಧಿಕಾರಿಗಳು, 900ಕ್ಕೂ ಹೆಚ್ಚು ಜನರ ಒಡಲಿಗೆ ಅನ್ನ ಬಡಿಸಿದರು. ಪ್ರತಿಯೊಬ್ಬರಿಗೂ ರಂಜಾನ್ ಹಬ್ಬದ ವಿಶೇಷ ಖಾದ್ಯ ಸುರಕುರ್ಮಾ ವಿತರಿಸಿ ಈದ್ ಸಂತೋಷ ಹಂಚಿಕೊಂಡರು.
ಇವರೊಟ್ಟಿಗೆ ವೈದ್ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸುರಕುರ್ಮಾ ಮತ್ತು ತರಕಾರಿ ಫಲಾವ್ ರುಚಿ ಸವಿದರು. ಕ್ವಾರಂಟೈನ್ ಕಾರ್ಮಿಕರೊಂದಿಗೆ ಈದ್ ಆಚರಿಸುವ ಮೂಲಕ ಮುಸ್ಲಿಂ ಯುವ ಮುಖಂಡರು, ಕೋಮು ಸೌಹಾರ್ಧತೆ ಕಾಪಾಡಿದ್ದು ಕಾರ್ಮಿಕರ ಮೆಚ್ಚುಗೆಗೆ ಪಾತ್ರವಾಯಿತು.
ಟೀಂ ಪ್ರಿಯಾಂಕ್ ಖರ್ಗೆ ಸಂಘದ ಅಧ್ಯಕ್ಷ ಶಮಶೀರ್ ಅಹ್ಮದ್, ಭಾಯ್ ಭಯ್ ಗ್ರೂಪ್ ಅಧ್ಯಕ್ಷ ಮಹ್ಮದ್ ಇರ್ಫಾನ್, ಅಖಿಲ ಭಾರತ ಬಂಜಾರಾ ಸೇವಾ ಸಂಘದ ಅಧ್ಯಕ್ಷ ಶಂಕರ ಜಾಧವ, ಪುರಸಭೆ ಸದಸ್ಯ ಶರಣು ನಾಟೀಕಾರ, ವಾಡಿ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಮಹಾದೇವ ಸಜ್ಜನ್, ಮುಖಂಡರಾದ ಬಾಳು ಚವ್ಹಾಣ, ಅಲ್ತಾಫ್ ಸೌಧಾಗರ, ಸೋಮಲಾ ಚವ್ಹಾಣ, ಚಾಂದ್ಪಾಶಾ, ವಿನಾಯಕ ರಾಠೋಡ, ನಿಂಗಣ್ಣ, ಗಿರೆಪ್ಪಾ ನಾಟೀಕಾರ, ಅಖ್ತರ್ ಪಾಶಾ, ಸಲಮಾನ್ ಪಟೇಲ ಮತ್ತಿತರರು ಭಾಗವಹಿಸಿದ್ದರು.
ರಾಯಚೂರು: ಭಾರತದ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ 117 ನೇ ಜನ್ಮದಿನೋತ್ಸವವನ್ನು ಅಖಿಲಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ-ಎಐಆರ್ ಎಸ್…
ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಶಿವರಾಜ್ ಪಾಟೀಲ್ ಗೋಣಿಗಿ ಅವರಿಗೆ ನಗರ ರಂಗ ಮಂದಿರದಲ್ಲಿ ಶನಿವಾರ ಪೂಜ್ಯ ಹಾರಕೂಡ ಶ್ರೀಗಳು…
ಕಲಬುರಗಿ: ಇಲ್ಲಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ತಾಪ್ತಿಯ ಸುಪ್ರಸಿದ್ಧ ದೇವಸ್ಥಾನದಲ್ಲಿ ಒಂದಾಗಿರುವ ರೇವಗ್ಗಿ ರಟಕಲ್ ಶ್ರೀರೇವಣಸಿದ್ದೇಶ್ವರ ದೇವಸ್ಥಾನದ ಸುಮಾರು…
ಕಲಬುರಗಿ: ನಗರದ ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಬಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಯುವ ವಿದ್ಯಾರ್ಥಿಗಳಿಗೆ ಏಕಾಗ್ರತೆ…
ಕಲಬುರಗಿ : ಮಹಾನಗರ ಪಾಲಿಕೆ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿ ಮೋಹನ್ ಲಾಡ್ಜ ವೃತ್ತದಿಂದ ರಾಮಮಂದಿರ…
ಶಹಾಬಾದ: ನಗರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಗುರುವಾರ ನಗರದ ಎಸ್.ಯು.ಸಿ.ಐ(ಸಿ)ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ.ಕೆ.ಮಾನೆ ಅವರ ನೇತೃತ್ವದ…