ಕಲಬುರಗಿ: ಗುಲಬರ್ಗಾ ಲೋಕಸಭಾ ಹಾಗೂ ೪೨-ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಕಾರ್ಯವು ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ಬ್ಲಾಕ್ಗಳಲ್ಲಿ ಮೇ ೨೩ರಂದು ಬೆಳಗ್ಗೆ ೮ ಗಂಟೆಯಿಂದ ನಡೆಯಲಿದ್ದು, ಜಿಲ್ಲಾಡಳಿತ ಎಲ್ಲಾ ಪೂರ್ವಸಿದ್ಧತೆಗಳು ಕೈಗೊಂಡಿದೆ. ಎಣಿಕೆ ಕಾರ್ಯ ಸುಸೂತ್ರವಾಗಿ ಜರುಗಲು ಸಿ.ಪಿ.ಎಂ.ಎಫ್., ಕೆ.ಎಸ್.ಆರ್.ಪಿ, ಡಿ.ಎ.ಆರ್ ಸೇರಿದಂತೆ ಒಟ್ಟು ೧೯೫೦ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ಅವರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ಪೊಲೀಸ್ ಇಲಾಖೆ, ಸಿ.ಐ.ಎಸ್.ಎಫ್. ಕಮಾಂಡರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮತ ಎಣಿಕೆ ಪೂರ್ವ ಸಿದ್ಧತಾ ಕಾರ್ಯ ಹಾಗೂ ಭದ್ರತೆ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.
ಮತ ಎಣಿಕೆ ಕೇಂದ್ರದ ಭದ್ರತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಎಸ್.ಪಿ., ೧೦ ಜನ ಡಿವೈಎಸ್ಪಿ, ೨೫ ಪೊಲೀಸ್ ಇನ್ಸಪೆಕ್ಟರ್, ೫೦ ಪಿ.ಎಸ್.ಐ., ೧೩೦ ಎ.ಎಸ್.ಐ., ಸಿ.ಪಿ.ಎಂ.ಎಫ್ ೧೮೦ ಜವಾನರು, ೪ ಕೆ.ಎಸ್.ಆರ್.ಪಿ. ತುಕಡಿ, ೧೫ ಡಿಎಆರ್ ತುಕಡಿ, ೫ ಸ್ಟ್ರಾಟಿಜಿಕ್ ಭದ್ರತಾ ಪಡೆ ಹಾಗೂ ೧೦೦೦ ಸಿವಿಲ್ ಪೊಲೀಸ್ ಸೇರಿದಂತೆ ಒಟ್ಟಾರೆ ೧೯೫೦ ಜನ ಭದ್ರತಾ ಸಿಬ್ಬಂದಿಗಳು ಅಂದು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕಲಬುರಗಿ ನಗರದಿಂದ ಸೇಡಂ ಕಡೆಗೆ ಹೋಗುವಾಗ ಸಿಗುವ ವಿಶ್ವವಿದ್ಯಾಲಯದ ಮೊದಲನೇ ಗೇಟ್ನಲ್ಲಿ ಅಭ್ಯರ್ಥಿ, ಕೌಂಟಿಂಗ್ ಏಜೆಂಟ್ ಹಾಗೂ ಚುನಾವಣಾ ಎಜೆಂಟ್ಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಎರಡನೇ ಗೇಟ್ನಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಎಣಿಕೆ ಸಿಬ್ಬಂದಿಗಳಿಗೆ ಪ್ರವೇಶವಿರುತ್ತದೆ. ಅಭ್ಯರ್ಥಿ, ಚುನಾವಣಾ ಏಜೆಂಟ್ ಅಥವಾ ಕೌಂಟಿಂಗ್ ಏಜೆಂಟರ ವಾಹನಗಳಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರವೇಶಾವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಠಪಡಿಸಿದ್ದಾರೆ.
ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ-ಸಿಬ್ಬಂದಿ ಹಾಗೂ ಪೊಲಿಂಗ್ ಏಜೆಂಟ್ಗಳಿಗೆ ಪ್ರತಿ ವಿಧಾನಸಭಾ ಎಣಿಕೆ ಕೇಂದ್ರದ ಮುಂಭಾಗದಲ್ಲಿ ಪ್ರತ್ಯೇಕ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯವಿದ್ದಲ್ಲಿ ತಾತ್ಮಲಿಕ ಶೌಚಾಲಯದ ವ್ಯವಸ್ಥೆ ಸಹ ಮಾಡಬೇಕು. ಇದಲ್ಲದೆ ಕೇಂದ್ರಗಳ ಪಕ್ಕದಲ್ಲಿ ಅಧಿಕಾರಿಗಳ ವಾಹನಕ್ಕೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ವಿಶ್ವವಿದ್ಯಾಲಯದ ಆವರಣ ಪ್ರವೇಶಿಸುತ್ತಲೆ ನಿಗಧಿತ ಸ್ಥಳಕ್ಕೆ ಹೋಗಲು ಅನುಕೂಲವಾಗುವಂತೆ ಸಂಕೇತ ಬೋರ್ಡುಗಳು ಅಲ್ಲಲ್ಲಿ ಅಳವಡಿಸಬೇಕು ಹಾಗೂ ಸಂಚಾರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಮೊಬೈಲ್, ಮ್ಯಾಚ್ ಬಾಕ್ಸ್ ನಿಷೇಧ:- ಮತ ಎಣಿಕೆ ನಡೆಯುವ ಕೇಂದ್ರದಲ್ಲಿ ಮತ ಎಣಿಕೆ ಸಿಬ್ಬಂದಿ, ಅಭ್ಯರ್ಥಿ, ಚುನಾವಣಾ ಏಜೆಂಟ್ ಮತ್ತು ಕೌಂಟಿಂಗ್ ಏಜೆಂಟಗಳು ಮೊಬೈಲ್, ವಾಟರ್ ಬಾಟಲ್, ಬೆಂಕಿ ಪೊಟ್ಟಣ, ಸಿಗರೇಟ್, ಮ್ಯಾಚ್ ಬಾಕ್ಸ್, ಫೌಂಟೇನ್ ಪೆನ್ ಸೇರಿದಂತೆ ಹರಿತವಾದ ಹಾಗೂ ನಿಷೇಧಿತ ವಸ್ತುಗಳನ್ನು ತರುವುದು ನಿಷೇಧಿಸಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮೊಬೈಲನ್ನು ತರಕೂಡದು ಎಂದು ಅವರು ಹೇಳಿದ್ದಾರೆ.
ಎರಡು ಹಂತದ ತಪಾಸಣೆ:- ಪ್ರತಿ ಮತ ಎಣಿಕೆ ಕೇಂದ್ರದ ಹೊರ ಗೇಟ್ ಹಾಗೂ ಎಣಿಕೆ ಹಾಲ್ ಪ್ರವೇಶದ ಮುಂಭಾಗದಲ್ಲಿ ಭದ್ರತಾ ಸಿಬ್ಬಂದಿಯಿಂದ ಪ್ರತ್ಯೇಕವಾಗಿ ತಪಾಸಣೆ ಮಾಡಲಾಗುತ್ತದೆ. ಇದಕ್ಕಾಗಿ ಮೆಟಲ್ ಡಿಟಕ್ಟರ್ ಸಹ ಅಳವಡಿಸಲಾಗಿದೆ.
ರಸ್ತೆ ಮಾರ್ಗದಲ್ಲಿ ಬದಲಾವಣೆ:- ಮತ ಎಣಿಕೆ ದಿನದಂದು ಸುರಕ್ಷತಾ ದೃಷ್ಠಿಯಿಂದ ಸೇಡಂನಿಂದ ಕಲಬುರಗಿ ನಗರಕ್ಕೆ ಆಗಮಿಸುವ ವಾಹನಗಳು ಬುದ್ಧ ವಿಹಾರ ಬಳಿ ಎಡಕ್ಕೆ ತಿರುವು ಪಡೆದು, ವಿಶ್ವವಿದ್ಯಾಲಯದ ಹಿಂಭಾಗದ ಕುಸನೂರ ರಸ್ತೆ ಮೂಲಕ ಕಲಬುರಗಿ ನಗರಕ್ಕೆ ಒಳಬರಬಹುದು ಎಂದು ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಮಹಾನಗರ ಪಾಲಿಕೆಯ ಆಯುಕ್ತೆ ಫೌಜಿಯಾ ಬಿ. ತರನ್ನುಮ, ಸಿ.ಐ.ಎಸ್.ಎಫ್. ಕಂಪನಿ ಕಮಾಂಡರ್ ಅಶ್ವನ ಕುಮಾರ, ಉಪ ಸಹಾಯಕ ಕಮಾಂಡರ್ ಟಿ.ಡಿ.ವಿನ್ಸೆಂಟ್, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಚಿಂಚೋಳಿ ಚುನಾವಣಾಧಿಕಾರಿ ಸೋಮಶೇಖರ್.ಎಸ್.ಜಿ., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಶೋಕ ದುಡಗುಂಟಿ ಸೇರಿದಂತೆ ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿಗಳು, ಇನ್ನಿತರ ಜಿಲ್ಲಾ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…